ಆ್ಯಪ್ನಗರ

101ನೇ ವರ್ಷದ ವೈಭವ ಕಂಡ ಗಣಪ

ಅಂಕೋಲಾ : ಸ್ವಾತಂತ್ರತ್ರ್ಯ ಸಂಗ್ರಾಮದ ಕಿಚ್ಚನ್ನು ಸಾದರಪಡಿಸಿದ ಇಲ್ಲಿನ ಹಳೇಬಜಾರ ( ಕೆ.ಸಿ.ರೋಡ) ರಸ್ತೆಯಲ್ಲಿರುವ ಶ್ಯಾಂಡೊ ಪೊಕ್ಕನ ಮನೆಯ ಗಣಪನಿಗೆ 101ನೇ ವರ್ಷದ ಸಂಭ್ರಮ. ನಮ್ಮ ದೇಶಕ್ಕೆ ಸ್ವಾತಂತ್ರತ್ರ್ಯ ದೊರಕುವ ಪೂರ್ವದಲ್ಲಿಯೇ ಬಾಲ ಗಂಗಾಧರ ತಿಲಕರ ಪ್ರೇರಣೆಯಿಂದ ಆರಂಭವಾದ ಇಲ್ಲಿನ ಗಣೇಶೋತ್ಸವ ಈ ವರ್ಷ 101ನೇ ವರ್ಷದ ವೈಭವ ಆಚರಿಸುತ್ತಿದೆ.

Vijaya Karnataka 4 Sep 2019, 5:00 am
ಅಂಕೋಲಾ : ಸ್ವಾತಂತ್ರತ್ರ್ಯ ಸಂಗ್ರಾಮದ ಕಿಚ್ಚನ್ನು ಸಾದರಪಡಿಸಿದ ಇಲ್ಲಿನ ಹಳೇಬಜಾರ ( ಕೆ.ಸಿ.ರೋಡ) ರಸ್ತೆಯಲ್ಲಿರುವ ಶ್ಯಾಂಡೊ ಪೊಕ್ಕನ ಮನೆಯ ಗಣಪನಿಗೆ 101ನೇ ವರ್ಷದ ಸಂಭ್ರಮ. ನಮ್ಮ ದೇಶಕ್ಕೆ ಸ್ವಾತಂತ್ರತ್ರ್ಯ ದೊರಕುವ ಪೂರ್ವದಲ್ಲಿಯೇ ಬಾಲ ಗಂಗಾಧರ ತಿಲಕರ ಪ್ರೇರಣೆಯಿಂದ ಆರಂಭವಾದ ಇಲ್ಲಿನ ಗಣೇಶೋತ್ಸವ ಈ ವರ್ಷ 101ನೇ ವರ್ಷದ ವೈಭವ ಆಚರಿಸುತ್ತಿದೆ.
Vijaya Karnataka Web the 101st year of glory
101ನೇ ವರ್ಷದ ವೈಭವ ಕಂಡ ಗಣಪ


ದಿ.ಅರ್ಜುನ ಅಂಕೋಲೆಕರ ಮನೆತನದಿಂದ ಶ್ರೀ ಗಣೇಶನನ್ನು 1918ರಲ್ಲಿಪ್ರತಿಷ್ಠಾಪಿಸಲಾಯಿತು. ಮುಂದೆ ಅಂಕೋಲಾದ ಇತಿಹಾಸದಲ್ಲಿತನ್ನದೇ ಆದ ಛಾಪನ್ನು ಒತ್ತಿರುವ ಕುಸ್ತಿಪಟು, ಫೋಟೊಗ್ರಾಫರ್‌ ಶ್ಯಾಂಡೊ ಪೊಕ್ಕಾ ಈ ಗಣಪನಿಗೆ ಇನ್ನಷ್ಟು ವೈಭವ ತುಂಬಿ ಗಣೇಶೋತ್ಸವವನ್ನು ಆಚರಿಸುತ್ತ ಬಂದಿದ್ದರು. ಶ್ಯಾಂಡೊ ಪೊಕ್ಕಾ ದಿವಂಗತರಾದ ಮೇಲೆ, ಅವರ ಕುಟುಂಬದವರು ಗಣೇಶೋತ್ಸವದ ಸಂಭ್ರಮವನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ.

ಈ ಗಣಪನಿಗೆ 6 ತಲೆಮಾರುಗಳ ಇತಿಹಾಸವಿದೆ. ಕುಟುಂಬದಲ್ಲಿ263ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಉದ್ಯೋಗದ ನಿಮಿತ್ತ ಹುಬ್ಬಳ್ಳಿ, ಬೆಂಗಳೂರು, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿನೆಲೆಸಿರುವ ಇವರು ಚೌತಿಯ ಸಂಭ್ರಮದಲ್ಲಿಎಲ್ಲರೂ ಒಟ್ಟಾಗಿ ಹಬ್ಬದ ಸಂಭ್ರಮಕ್ಕೆ ಮೆರಗು ನೀಡುತ್ತಾರೆ. ಪ್ರಸಕ್ತ ವರ್ಷ ಶ್ರೀ ಗಣೇಶೋತ್ಸವಕ್ಕೆ 101 ಪ್ರಾಯ ತುಂಬಿರುವುದರಿಂದ, ಶ್ಯಾಂಡೊ ಪೊಕ್ಕನ ಮನೆಯಲ್ಲಿವಿದ್ಯುತ್‌ ಅಲಂಕಾರ, ವಿಶೇಷ ಮಂಟಪದೊಂದಿಗೆ, ಉತ್ಸಾಹ, ಸಂಭ್ರಮ- ಮನೆ ಮಾಡಿದೆ.

ಬೇಡಿದ್ದನ್ನು ಕೊಡುವ ಗಣಪ ; ಶ್ಯಾಂಡೊ ಪೊಕ್ಕನ ಮನೆಯ ಗಣಪನಿಗೆ ತನ್ನದೇ ಆದ ವೈಶಿಷ್ಟ್ಯದ ಪ್ರಾಮುಖ್ಯತೆ ಇದೆ. ಭಕ್ತರ ಇಷ್ಟಾರ್ಥಗಳನ್ನು ನೇರವೇರಿಸುತ್ತಿರುವುದರಿಂದ, ಶ್ರೀ ಗಣಪನಿಗೆ ಬೆಳ್ಳಿ- ಚಿನ್ನದ ಕಾಣಿಕೆಗಳನ್ನು ನೀಡಿ ಧನ್ಯತೆ ಮೆರೆಯುತ್ತಿದ್ದಾರೆ. ಈಗಾಗಲೇ ಭಕ್ತರಿಂದ ಬೆಳ್ಳಿಯ ಕಿರೀಟ, ತ್ರಿಶೂಲ, ಖಡ್ಗ, ಇಲಿ, ಹಾವು, ಬೆಳ್ಳಿಯ ಗರಿಕೆ ಹಾರ ಸೇರಿದಂತೆ ಹತ್ತಾರು ಚಿನ್ನಾಭರಣಗಳು ಭಕ್ತರ ಸಂಕಲ್ಪಕ್ಕೆ ಸಾಕ್ಷಿಯಾಗುವಂತೆ ಗಣಪ ಅಲಂಕಾರಭೂಷಿತನಾಗಿ ಕಂಗೊಳಿಸುತ್ತಿದ್ದಾನೆ.

ನಮ್ಮ ಮನೆಯ ಗಣಪನ ಉತ್ಸವವು 101ನೇ ವರ್ಷದ ವೈಭವ ಕಳೆ ಕಟ್ಟಿದ್ದರಿಂದ ಮನೆಯಲ್ಲಿಸಂಭ್ರಮ ಮನೆ ಮಾಡಿದೆ. ನಮ್ಮ ಪೂರ್ವಜರು ಸ್ವಾತಂತ್ರ್ಯ ಸಂಗ್ರಾಮ ದ್ಯೋತಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಿ, ಪ್ರತಿ ವರ್ಷ ಹಬ್ಬ ಎದುರಾದಾಗ ನಮ್ಮಲ್ಲಿಯೂ ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ ಮಹಾತ್ಕಾರ್ಯ ಮಾಡಿದ್ದಾರೆ. ಈ ಮಹೋತ್ಸವ ನಮ್ಮಲ್ಲಿಅತ್ಯಂತ ಖುಷಿ ತಂದಿದೆ.

ಗೀತಾ ಅಶೋಕ ನಾರ್ವೇಕರ, ಕಡವಾಡ, ಕುಟುಂಬದ ಹಿರಿಯರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ