ಆ್ಯಪ್ನಗರ

ಅಂಕೋಲಾ ವಿಮಾನ ನಿಲ್ದಾಣ ಸರ್ವೆ ಕಾರ‍್ಯ ಬಹುತೇಕ ಪೂರ್ಣ

ಅಂಕೋಲಾ: ನಾಗರಿಕ ವಿಮಾನ ನಿಲ್ದಾಣಕ್ಕೆ ಸರ್ವೆ ಕಾರ್ಯ ನಡೆಸಲಾಗಿದ್ದು, ಶೇ.95ರಷ್ಟು ಮುಗಿದಿದೆ. ಗಿಡ, ಮರಗಳ ಕುರಿತು ತೋಟಗಾರಿಕೆ ಇಲಾಖೆಯವರು ಶೇ.100ರಷ್ಟು ಸರ್ವೆ ಮುಗಿಸಿದ್ದು, ಇನ್ನು ಲೋಕೋಪಯೋಗಿ ಇಲಾಖೆಯವರು ಶೇ.70ರಷ್ಟು ಕಾರ್ಯ ಮುಗಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿಗ್ರಾಮ ಸಭೆ ನಡೆಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಅಜೀತ ಎಂ.ತಿಳಿಸಿದರು.

Vijaya Karnataka 24 Sep 2020, 5:00 am
ಅಂಕೋಲಾ: ನಾಗರಿಕ ವಿಮಾನ ನಿಲ್ದಾಣಕ್ಕೆ ಸರ್ವೆ ಕಾರ್ಯ ನಡೆಸಲಾಗಿದ್ದು, ಶೇ.95ರಷ್ಟು ಮುಗಿದಿದೆ. ಗಿಡ, ಮರಗಳ ಕುರಿತು ತೋಟಗಾರಿಕೆ ಇಲಾಖೆಯವರು ಶೇ.100ರಷ್ಟು ಸರ್ವೆ ಮುಗಿಸಿದ್ದು, ಇನ್ನು ಲೋಕೋಪಯೋಗಿ ಇಲಾಖೆಯವರು ಶೇ.70ರಷ್ಟು ಕಾರ್ಯ ಮುಗಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿಗ್ರಾಮ ಸಭೆ ನಡೆಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಅಜೀತ ಎಂ.ತಿಳಿಸಿದರು.
Vijaya Karnataka Web 23ANKOLA2A_24
ಅಂಕೋಲಾದ ಅಲಗೇರಿಯಲ್ಲಿನಾಗರಿಕ ವಿಮಾನ ನಿಲ್ದಾಣಕ್ಕಾಗಿ ಸರ್ವೆ ಕಾರ್ಯ ನಡೆದಿದೆ.


ಈ ಕುರಿತು ಬುಧವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಈ ಹಿಂದಿನ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರ ಈಗ ಪರಿಗಣಿಸಲಾಗುವುದಿಲ್ಲ. ಹೀಗಾಗಿ 2013ನೇ ಕಾಯ್ದೆ ಪ್ರಕಾರ ಪರಿಹಾರ ನೀಡುವುದರಿಂದ ಯಾರೂ ಭಯಗೊಳ್ಳುವ ಅಗತ್ಯವಿಲ್ಲ. ನಿರಾಶ್ರಿತರಿಗೆ ಎಲ್ಲಾಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಮನೆ,ಭೂಮಿ, ಗಿಡ-ಮರಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲಾಗಿದ್ದು, ಎಲ್ಲಾರೀತಿಯಿಂದಲೂ ಅವರಿಗೆ ಪರಿಹಾರ ನೀಡಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿಎಲ್ಲಪ್ರಕ್ರಿಯೆಯನ್ನು ಮುಗಿಸಿ ಗ್ರಾಮಸಭೆ ಕರೆಯಲಾಗುವುದು. ಅಲ್ಲಿಪ್ರತಿಯೊಬ್ಬರೂ ನೀಡಲಾಗುವ ಪರಿಹಾರದ ಯಾದಿಯನ್ನು ಓದಿ ಹೇಳಲಾಗುತ್ತದೆ. ಪಾರದರ್ಶಕವಾಗಿ ಮತ್ತು ಜನರ ಜೀವನದ ಬಗ್ಗೆ ಕಾಳಜಿವಹಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಅಜೀತ ಎಂ. ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ