ಆ್ಯಪ್ನಗರ

ತಳಪಾಯ ಕಿತ್ತು ಹಾಕಿದರು..

ಸಿದ್ದಾಪುರ : ಕಟ್ಟುತ್ತಿರುವ ಮನೆ ಅರಣ್ಯ ಭೂಮಿಯಲ್ಲಿದೆ ಎಂದು ಅರಣ್ಯಾಧಿಕಾರಿಗಳು ಮನೆಯ ತಳಪಾಯವನ್ನು ಕಿತ್ತುಹಾಕಿರುವ ಅಮಾನವಿಯ ಘಟನೆ ಶುಕ್ರವಾರ ತಾಲೂಕಿನ ಬಿಳಗಿ ಸಮೀಪದ ಕಳೂರು ಮುಂಡಿಗೆಮನೆಯಲ್ಲಿನಡೆದಿದೆ.

Vijaya Karnataka 12 Oct 2019, 5:00 am
ಸಿದ್ದಾಪುರ : ಕಟ್ಟುತ್ತಿರುವ ಮನೆ ಅರಣ್ಯ ಭೂಮಿಯಲ್ಲಿದೆ ಎಂದು ಅರಣ್ಯಾಧಿಕಾರಿಗಳು ಮನೆಯ ತಳಪಾಯವನ್ನು ಕಿತ್ತುಹಾಕಿರುವ ಅಮಾನವಿಯ ಘಟನೆ ಶುಕ್ರವಾರ ತಾಲೂಕಿನ ಬಿಳಗಿ ಸಮೀಪದ ಕಳೂರು ಮುಂಡಿಗೆಮನೆಯಲ್ಲಿನಡೆದಿದೆ.
Vijaya Karnataka Web 11SDPR-3_24


ಕಳೂರಿನ ಪುಟ್ಟಾ ಗಿರಿಯಾ ನಾಯ್ಕ ಎನ್ನುವವರು ಮನೆಗಾಗಿ ಜಿಪಿಎಸ್‌ ಆದ ಜಮೀನು ಹೊಳೆಯ ಸಮೀಪವಿದೆ. ಅತಿವೃಷ್ಟಿಯ ಸಂದರ್ಭದಲ್ಲಿಮನೆ ಮುಳುಗಡೆಯಾಗಬಹುದು ಎಂಬ ಭಯದಿಂದ ಜಿಪಿಎಸ್‌ ಆದ ಜಾಗದಿಂದ ಕೆಲವೇ ಅಂತರದಲ್ಲಿರುವ ಅರಣ್ಯ ಭೂಮಿಯಲ್ಲಿಮನೆಕಟ್ಟುತ್ತಿದ್ದರು. ಕಳೆದ ಒಂದು ವಾರದಿಂದ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಮನೆಯನ್ನು ಕೆಡವುತ್ತೇವೆ ಎಂದು ಹೆದರಿಸುತ್ತಿದ್ದರು. ಶುಕ್ರವಾರ ಪುನಃ ಬಂದ ಅರಣ್ಯ ಅಧಿಕಾರಿಗಳು ತಳಪಾಯವನ್ನು ಕಿತ್ತು ಹೋಗಿದ್ದಾರೆ ಎಂದು ಪುಟ್ಟಾ ನಾಯ್ಕ ಆರೋಪಿಸಿದ್ದಾರೆ. '' ಅತಿವೃಷ್ಟಿಯಾದರೆ ತೊಂದರೆಯಾಗುತ್ತದೆ. ಆದ್ದರಿಂದ ಮನೆಯನ್ನು ಇಲ್ಲಿಕಟ್ಟಿಕೊಳ್ಳುತ್ತೇನೆ. ಜಿಪಿಎಸ್‌ ಆದ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುತ್ತೇನೆ. ಮನೆಕಟ್ಟಲು ಅವಕಾಶ ನೀಡಿ. ಸ್ಪೀಕರ್‌ ಕಾಗೇರಿ ಅಧಿವೇಶನದಲ್ಲಿದ್ದಾರೆ. ಅವರು ಬರುವವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಹೇಳಿದರೂ ಅರಣ್ಯ ಅಧಿಕಾರಿಗಳು ನನ್ನ ಮಾತಿಗೆ ಕವಡೆ ಕಿಮ್ಮತ್ತನ್ನು ನೀಡಿಲ್ಲ'' ಎಂದು ಪುಟ್ಟಾ ನಾಯ್ಕ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ