ಆ್ಯಪ್ನಗರ

ಕೊನೆಗೂ ಶುರುವಾಯಿತು ರಸ್ತೆ ಡಾಂಬರಿಕರಣ

ಕುಮಟಾ : ಜನರ ಪ್ರತಿಭಟನೆ ಹಾಗೂ ಆಕ್ರೋಶಕ್ಕೆ ಕರಗಿದ ಅಧಿಕಾರಿಗಳು ಕೊನೆಗೂ ಹೆರವಟ್ಟಾ ರಸ್ತೆಗೆ ಡಾಂಬರಿಕರಣದ ಭಾಗ್ಯ ನೀಡಿದ್ದಾರೆ.

Vijaya Karnataka 16 Dec 2018, 5:00 am
ಕುಮಟಾ : ಜನರ ಪ್ರತಿಭಟನೆ ಹಾಗೂ ಆಕ್ರೋಶಕ್ಕೆ ಕರಗಿದ ಅಧಿಕಾರಿಗಳು ಕೊನೆಗೂ ಹೆರವಟ್ಟಾ ರಸ್ತೆಗೆ ಡಾಂಬರಿಕರಣದ ಭಾಗ್ಯ ನೀಡಿದ್ದಾರೆ.
Vijaya Karnataka Web KWR-PHT 15 KMT 2


ಕಳೆದ 3 ವರ್ಷಗಳಿಂದ ಹಾಳಾದ ರಸ್ತೆಯಲ್ಲಿ ಜನರ ಓಡಾಟ ದುಸ್ತರವಾಗಿತ್ತು. ರೋಸಿ ಹೋದ ಜನತೆ ರಸ್ತೆ ದುರಸ್ತಿ ಕಾಮಗಾರಿಗೆ ಆಗಾಗ ಪ್ರತಿಭಟನೆ ನಡೆಸುತ್ತಿದ್ದರು. ಕಳೆದ ಗುರುವಾರ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಇಳಿದ ಅಕ್ಕ ಪಕ್ಕದ ಊರುಗಳ ಹಾಗೂ ಸ್ಥಳೀಯರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದ್ದರು. ಜನರ ಭಾರಿ ಪ್ರತಿಭಟನೆಗೆ ಬೆಚ್ಚಿಬಿದ್ದ ಅಧಿಕಾರಿಗಳು ಮರುದಿನವೇ ಕಾಮಗಾರಿ ನಡೆಸುವದಾಗಿ ಭರವಸೆ ನೀಡಿದ್ದರು.

ಶನಿವಾರ ರಸ್ತೆಗೆ ಡಾಂಬರೀಕರಣದ ಭಾಗ್ಯ ದೊರೆಯಿತು. ಇದರಿಂದ ಕಂಗೆಟ್ಟಿದ ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಎಂದೋ ನಡೆಯಬೇಕಾದ ಕಾಮಗಾರಿ 3 ವರ್ಷ ವಿಳಂಬವಾಗಿ ನಡೆಯುತ್ತಿರುವದು ಅಧಿಕಾರಿಗಳ ಬೇಜವಾಬ್ದಾರಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ನಿತ್ಯ ಈ ರಸ್ತೆಯಿಂದ ಓಡಾಡುವ ಜನ ಅಧಿಕಾರಿಗಳಿಗೆ ಶಾಪ ಇಡುವದನ್ನು ಮರೆಯುತ್ತಿರಲಿಲ್ಲ. ಆದರೆ ರಸ್ತೆ ಕಾಮಗಾರಿ ಪ್ರಾರಂಭಗೊಂಡಿರುವದರಿಂದ ಹಲವಾರು ಜನರ ಮೊಗದಲ್ಲಿ ಮಂದಹಾಸ ಕಂಡು ಬಂದಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ