ಆ್ಯಪ್ನಗರ

ಪಶ್ಚಿಮಘಟ್ಟಕ್ಕೆ ಕೇಂದ್ರ ತನಿಖಾ ತಂಡ ಭೇಟಿಗೆ ಆಗ್ರಹ

ಶಿರಸಿ : ರಾಜ್ಯದ ಪಶ್ಚಿಮಘಟ್ಟದಲ್ಲಿ ಅಕ್ರಮ ಗಣಿಗಾರಿಕೆ ಇನ್ನೂ ನಡೆಯುತ್ತಿದೆ. ಅರಣ್ಯ ನಾಶ ವ್ಯಾಪಕವಾಗಿದೆ. ಅರಣ್ಯ ಭೂಮಿ ಕಬಳಿಕೆ ವ್ಯಾಪಕವಾಗಿದೆ. ಇದಕ್ಕೆ ತಡೆ ನೀಡಬೇಕು. ತನಿಖಾ ತಂಡ ಪಶ್ಚಿಮ ಘಟ್ಟ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಕೇಂದ್ರ ಪರಿಸರ ಅರಣ್ಯ ಮಂತ್ರಾಲಯದ ಹೆಚ್ಚುವರಿ ಪ್ರಧಾನ ನಿರ್ದೇಶಕ ಕೆ. ಪಿ. ಸಿಂಗ್‌ ಅವರನ್ನು ವೃಕ್ಷ ಲಕ್ಷ ಆಂದೋಲನದ ನಿಯೋಗ ಆಗ್ರಹಿಸಿದೆ.

Vijaya Karnataka 18 May 2019, 5:00 am
ಶಿರಸಿ : ರಾಜ್ಯದ ಪಶ್ಚಿಮಘಟ್ಟದಲ್ಲಿ ಅಕ್ರಮ ಗಣಿಗಾರಿಕೆ ಇನ್ನೂ ನಡೆಯುತ್ತಿದೆ. ಅರಣ್ಯ ನಾಶ ವ್ಯಾಪಕವಾಗಿದೆ. ಅರಣ್ಯ ಭೂಮಿ ಕಬಳಿಕೆ ವ್ಯಾಪಕವಾಗಿದೆ. ಇದಕ್ಕೆ ತಡೆ ನೀಡಬೇಕು. ತನಿಖಾ ತಂಡ ಪಶ್ಚಿಮ ಘಟ್ಟ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಕೇಂದ್ರ ಪರಿಸರ ಅರಣ್ಯ ಮಂತ್ರಾಲಯದ ಹೆಚ್ಚುವರಿ ಪ್ರಧಾನ ನಿರ್ದೇಶಕ ಕೆ. ಪಿ. ಸಿಂಗ್‌ ಅವರನ್ನು ವೃಕ್ಷ ಲಕ್ಷ ಆಂದೋಲನದ ನಿಯೋಗ ಆಗ್ರಹಿಸಿದೆ.
Vijaya Karnataka Web SRS-16SRS10


ಬೆಂಗಳೂರು ಕೋರಮಂಗಲದ ಕೇಂದ್ರ ಅರಣ್ಯ ಮಂತ್ರಾಲಯದ ದಕ್ಷಿಣ ಭಾರತ ಕಚೇರಿಗೆ ಭೇಟಿ ನೀಡಿದ ವೃಕ್ಷ ಲಕ್ಷ ನಿಯೋಗ ಪಶ್ಚಿಮಘಟ್ಟದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕೇಂದ್ರ ಅರಣ್ಯ ಮಂತ್ರಾಲಯದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿತು.

ನಿಯೋಗದ ನೇತೃತ್ವವನ್ನು ವೃಕ್ಷ ಲಕ್ಷ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ. ವಾಮನ್‌ ಆಚಾರ್ಯ ವಹಿಸಿದ್ದು ನಿಯೋಗ ವಿವರ ಸಮಾಲೋಚನೆ ನಡೆಸಿ ಮಾಹಿತಿ ನೀಡಿತು.

ಕರಾವಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಆಗುತ್ತಿರುವ ಪರಿಸರ ಅವಘಡಗಳನ್ನು ತಪ್ಪಿಸಬೇಕು ಎಂದು ನಿಯೋಗ ಆಗ್ರಹ ಮಾಡಿತು. ಪಶ್ಚಿಮಘಟ್ಟದ ಡೀಮ್ಡ ಅರಣ್ಯಗಳ ನಾಶ, ಭೂಕಬಳಿಕೆ ವ್ಯಾಪಕವಾಗಿದೆ. ಸಾವಿರಾರು ಎಕರೆ ಡೀಮ್ಡ ಅರಣ್ಯಗಳ ನಾಶ ತಡೆಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ. 3 ಲಕ್ಷ ಎಕರೆ ಡೀಮ್ಡ್‌ ಅರಣ್ಯ ರಕ್ಷ ಣೆಗೆ ಕೇಂದ್ರ ಸರಕಾರ ತುರ್ತು ಕ್ರಮಕ್ಕೆ ಮುಂದಾಗಬೇಕು ಎಂದು ಅಹವಾಲು ಸಲ್ಲಿಸಲಾಯಿತು.

ಪಶ್ಚಿಮಘಟ್ಟದ ಡೀಮ್ಡ ಅರಣ್ಯದಲ್ಲಿ ಗಣಿಗಾರಿಕೆಗೆ ರಾಜ್ಯ ಸರಕಾರ ಪರವಾನಿಗೆ ನೀಡಿರುವುದನ್ನು ರದ್ದು ಪಡಿಸಬೇಕು ಎಂದು ಕೇಂದ್ರಕ್ಕೆ ದೂರು ನೀಡಲಾಗಿದೆ. ಮಿರಿಸ್ಟಿಕಾ ಸ್ವಾಂಪ್ಸ ಸೇರಿದಂತೆ ವಿನಾಶದ ಅಂಚಿನ ರಾಂಪತ್ರೆ ಜಡ್ಡಿಗಳು ದೇವರ ಕಾಡುಗಳು ಪಶ್ಚಿಮಘಟ್ಟದಲ್ಲಿ ನಾಶವಾಗುತ್ತಿದೆ. ಇವುಗಳ ರಕ್ಷ ಣೆಗೆ ನೇರ ಕ್ರಮ ಬೇಕು ಎಂದು ಒತ್ತಾಯಿಸಲಾಗಿದೆ.

ಜಂಟಿ ಅರಣ್ಯ ನಿರ್ವಹಣಾ ಯೋಜನೆ ಹೆಸರಿಗೆ ಮಾತ್ರವಿದೆ. ಗ್ರಾಮ ಅರಣ್ಯ ಸಮಿತಿಗಳನ್ನು ಬಲಪಡಿಸಲು ಕೇಂದ್ರ ರಾಜ್ಯಕ್ಕೆ ಸೂಚನೆ ನೀಡಬೇಕು. ಪಶ್ಚಿಮಘಟ್ಟದ ವಿನಾಶದ ಅಂಚಿನ ಔಷಧೀ ಸಸ್ಯ ಸಂಕುಲಗಳು ಸಂಪೂರ್ಣ ಕಾಣೆ ಆಗುವುದಕ್ಕಿಂತ ಮೊದಲು ಸಂರಕ್ಷ ಣೆಗೆ ಕಠಿಣ ಕ್ರಮಗಳಿಗೆ ಮುಂದಾಗಬೇಕು.

ಪಶ್ಚಿಮಘಟ್ಟದಲ್ಲಿ ಅಕೇಶಿಯಾ ನಿಷೇಧ ಮಾಡಿದ್ದರೂ ರಾಜ್ಯ ಅರಣ್ಯ ಇಲಾಖೆ ಇನ್ನೂ ಅಕೇಶಿಯಾ ಬೆಳೆಸುತ್ತಿದೆ, ನೆಡುತ್ತಿದೆ. ಇದನ್ನು ತಡೆಯಬೇಕು ಎಂದು ನಿಯೋಗ ಮನವಿ ಮಾಡಿತು. ಏಕಜಾತಿ ನೆಡುತೋಪು ಬೆಳೆಸುವ ಪದ್ಧತಿ ಕೈ ಬಿಡಬೇಕು. ಸ್ಥಳೀಯ ಜಾತಿಯ ಗಿಡಗಳನ್ನು ಬೆಳೆಸುವಂತೆ ಸೂಚನೆ ನೀಡಬೇಕು ಎಂದು ನಿಯೋಗ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಶರಾವತಿ ಕಣಿವೆಯಲ್ಲಿ ಒಂದು ಸಾವಿರ ಎಕರೆ ಅರಣ್ಯ ನಾಶ ಮಾಡಲಿರುವ ಹೊಸ ಜಲವಿದ್ಯುತ್‌ ಯೋಜನೆಗೆ ಅವಕಾಶ ನೀಡಬಾರದು ಎಂದು ವೃಕ್ಷ ಲಕ್ಷ ಕಾರ್ಯಕರ್ತರು ಕೇಂದ್ರ ಪರಿಸರ ಮಂತ್ರಾಲಯವನ್ನು ಒತ್ತಾಯಿಸಿದರು.

ಪರಿಸರ ಅರಣ್ಯ ಮಂತ್ರಾಲಯ ಅಧಿಕಾರಿಗಳ, ತಜ್ಞರ ತಂಡವನ್ನು ಶೀಘ್ರ ಪಶ್ಚಿಮಘಟ್ಟಕ್ಕೆ ಕಳಿಸಲಿದೆ. ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಲಿದೆ ಎಂದು ಅರಣ್ಯ ಮಂತ್ರಾಲಯದ ಮುಖ್ಯಸ್ಥ ಕೆ. ಪಿ. ಸಿಂಗ್‌ ನಿಯೋಗ ಕ್ಕೆ ಭರವಸೆ ನೀಡಿದರು. ಪಶ್ಚಿಮಘಟ್ಟ ಕುರಿತ ಕೆಲ ಮಹತ್ವದ ಅಧ್ಯಯನಗಳ ವರದಿಗಳನ್ನು ಅರಣ್ಯ ಮಂತ್ರಾಲಯಕ್ಕೆ ವೃಕ್ಷ ನಿಯೋಗ ನೀಡಿತು ಎಂದು ಪ್ರಕಟಣೆ ತಿಳಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ