ಆ್ಯಪ್ನಗರ

ಖ್ಯಾತ ಗಿಟಾರ್‌ ಮಾಂತ್ರಿಕನಿಂದ ಸಂಗೀತ ಕಛೇರಿ

ಗೋಕರ್ಣ : ಜರ್ಮನ್‌ ಮೂಲದ ಸಂಗೀತ ನಿರ್ದೇಶಕ ಆನಂದ್‌ ಅಮ್ರೀಶ್‌ ಸ್ಮರಣೆಗಾಗಿ ಇಲ್ಲಿನ ಕೋಟಿತೀರ್ಥ ಬಳಿಯ ಲಕ್ಷ್ಮೀನಾರಾಯಣ ಅತಿಥಿಗೃಹದ ಬಯಲು ವೇದಿಕೆಯಲ್ಲಿ ದೇಶೀಯ ಸಂಗೀತ ಕಛೇರಿ ನಡೆಯಿತು. ವಿದೇಶಗಳಲ್ಲಿ ಹೆಸರುವಾಸಿಯಾದ ವಿಶ್ವದ ಖ್ಯಾತ ಗಿಟಾರ್‌ ವಾದಕ ಅಮಾನೋ ಮನೀಶ್‌ ಈ ಕಛೇರಿ ನಡೆಸಿ ಕೊಟ್ಟು ಸ್ವರ ಶ್ರದ್ಧಾಂಜಲಿ ಸಮರ್ಪಿಸಿದರು.

Vijaya Karnataka 20 Jan 2019, 5:00 am
ಗೋಕರ್ಣ : ಜರ್ಮನ್‌ ಮೂಲದ ಸಂಗೀತ ನಿರ್ದೇಶಕ ಆನಂದ್‌ ಅಮ್ರೀಶ್‌ ಸ್ಮರಣೆಗಾಗಿ ಇಲ್ಲಿನ ಕೋಟಿತೀರ್ಥ ಬಳಿಯ ಲಕ್ಷ್ಮೀನಾರಾಯಣ ಅತಿಥಿಗೃಹದ ಬಯಲು ವೇದಿಕೆಯಲ್ಲಿ ದೇಶೀಯ ಸಂಗೀತ ಕಛೇರಿ ನಡೆಯಿತು. ವಿದೇಶಗಳಲ್ಲಿ ಹೆಸರುವಾಸಿಯಾದ ವಿಶ್ವದ ಖ್ಯಾತ ಗಿಟಾರ್‌ ವಾದಕ ಅಮಾನೋ ಮನೀಶ್‌ ಈ ಕಛೇರಿ ನಡೆಸಿ ಕೊಟ್ಟು ಸ್ವರ ಶ್ರದ್ಧಾಂಜಲಿ ಸಮರ್ಪಿಸಿದರು.
Vijaya Karnataka Web KWR-19 GKN 1 A


ಜರ್ಮನ್‌ದಲ್ಲಿ ಕಳೆದ ತಿಂಗಳು ಸಾವನ್ನಪ್ಪಿದ ಆನಂದ್‌ ಮೂರು ದಶಕಗಳ ಹಿಂದೆ ಭಾರತೀಯ ಸಂಸ್ಕೃತಿಗೆ ಆಕರ್ಷಿತರಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು. ಎರಡು ದಶಕಗಳಿಂದ ಮುಂಬಯಿಯ ಅನೇಕ ಸಂಗೀತ ಕಛೇರಿಗಳಲ್ಲಿ ಗಿಟಾರ್‌ ಮತ್ತು ಕೊಳಲಿನ ಪ್ರಮುಖ ಕಲಾವಿದರಾಗಿ ಆನಂದ್‌ ಪಾಲ್ಗೊಳ್ಳುತ್ತ ಬಂದಿದ್ದರು. ಪುಣೆಯಲ್ಲಿ ಅವರು ಸ್ವಂತ ಮ್ಯುಸಿಕಲ್‌ ಸ್ಟುಡಿಯೋ ನಡೆಸುತ್ತಿದ್ದರು. ತಮ್ಮ ಪ್ರಿಯ ಗೆಳೆಯನ ನೆನಪಿಗಾಗಿ ಅಮಾನೋ ನಡೆಸಿಕೊಟ್ಟ ಕಛೇರಿಯಲ್ಲಿ ಸಂಪೂರ್ಣವಾಗಿ ಭಾರತೀಯ ರಾಗಗಳನ್ನು ಅವರು ನುಡಿಸಿ ಸೇರಿದ್ದ ನೂರಾರು ವಿದೇಶಿ ಪ್ರವಾಸಿಗರ ಮೆಚ್ಚುಗೆ ಗಳಿಸಿದರು. ಈ ವೇಳೆ ಮಾತನಾಡಿದ ಅಮಾನೋ, ಆನಂದ್‌ ಅಪೂರ್ವ ಕಲಾವಿದರಾಗಿದ್ದರು. ವಿದೇಶದವರಾಗಿ ಕೂಡ ಭಾರತೀಯ ಸಂಗೀತವನ್ನು ಶ್ರೀಮಂತಗೊಳಿಸುವಲ್ಲಿ ಅವರ ಕೊಡುಗೆ ಬಹಳವಿದೆ. ಅವರು ಕ್ಯಾನ್ಸರ್‌ಗೆ ಬಲಿಯಾದುದು ಸಂಗೀತ ಕ್ಷೇತ್ರದ ಬಹು ದೊಡ್ಡ ಹಾನಿಯಾಗಿದೆ ಎಂದರು. ಆನಂದ್‌ ಪತ್ನಿ ಶೋಲಾ, ಅತಿಥಿಗೃಹದ ಮಾಲಕ ರವಿ ಸೂರಿ ನಿರ್ವಹಿಸಿದರು. 300ಕ್ಕೂ ಹೆಚ್ಚಿನ ವಿದೇಶಿ ಯಾತ್ರಿಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ