ಆ್ಯಪ್ನಗರ

ಮೆರವಣಿಗೆಯಲ್ಲಿಮನ ಸೆಳೆದ ನೃತ್ಯ, ನವರಾತ್ರಿ ಸಂಭ್ರಮಕ್ಕೆ ತೆರೆ

ಕಾರವಾರ : ಶ್ರೀ ದುರ್ಗಾ ಮೂರ್ತಿಯ ವಿಸರ್ಜನೆ ಮಂಗಳವಾರ ನಡೆದಿದ್ದು, ಈ ಮೂಲಕ ನವರಾತ್ರಿ ಉತ್ಸವ ಕೊನೆಗೊಂಡಿದೆ. ಒಂಬತ್ತು ದಿನಗಳ ಕಾಲ ಶ್ರೀ ದುರ್ಗಾ ದೇವಿಗೆ ಪೂಜೆ ಸಲ್ಲಿಸಿ ದಾಂಡಿಯಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿನಾದ್ಯಂತ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

Vijaya Karnataka 9 Oct 2019, 5:00 am
ಕಾರವಾರ : ಶ್ರೀ ದುರ್ಗಾ ಮೂರ್ತಿಯ ವಿಸರ್ಜನೆ ಮಂಗಳವಾರ ನಡೆದಿದ್ದು, ಈ ಮೂಲಕ ನವರಾತ್ರಿ ಉತ್ಸವ ಕೊನೆಗೊಂಡಿದೆ. ಒಂಬತ್ತು ದಿನಗಳ ಕಾಲ ಶ್ರೀ ದುರ್ಗಾ ದೇವಿಗೆ ಪೂಜೆ ಸಲ್ಲಿಸಿ ದಾಂಡಿಯಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿನಾದ್ಯಂತ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
Vijaya Karnataka Web the dance which attracted the parade opened to the celebration of navratri
ಮೆರವಣಿಗೆಯಲ್ಲಿಮನ ಸೆಳೆದ ನೃತ್ಯ, ನವರಾತ್ರಿ ಸಂಭ್ರಮಕ್ಕೆ ತೆರೆ


ಕಾರವಾರ ತಾಲೂಕಿನ ನಗರ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿಯೂ ನವರಾತ್ರಿ ಉತ್ಸವ ಅತೀ ವಿಜೃಂಭಣೆಯಿಂದ ನಡೆಯಿತು. ಕೆಲ ಭಾಗದಲ್ಲಿಶ್ರೀ ದುರ್ಗಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉತ್ಸವವನ್ನು ಆಚರಿಸಿದರೆ ಕೆಲ ಕಡೆಗಳಲ್ಲಿನ ದೇವಿ ದೇವಸ್ಥಾನದ ಮುಂಭಾಗದಲ್ಲಿದಾಂಡಿಯಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕಾರವಾರದ ಹಬ್ಬುವಾಡಾ, ಕೆಎಚ್‌ಬಿ ಕಾಲೊನಿ, ಬಾಂಡಿಸಿಟ್ಟಾ, ಕೋಡಿಬಾಗ, ಸದಾಶಿವಗಡ, ಹಣಕೋಣ, ಹಳಗಾ, ಗೋಪಸಿಟ್ಟಾ, ಕೋಳಗೆ, ಸೋನಾರವಾಡಾ, ಕಳಸವಾಡಾ, ಮಲ್ಲಾಪುರ ಸೇರಿದಂತೆ ಹಲವು ಕಡೆಗಳಲ್ಲಿನವರಾತ್ರಿ ದಾಂಡಿಯಾ ಕಾರ್ಯಕ್ರಮಗಳು ನಡೆದವು. ನವರಾತ್ರಿ ಉತ್ಸವದ ಒಂಬತ್ತು ದಿನಗಳ ಕಾಲ ಎಲ್ಲೆಲ್ಲೂಸಡಗರ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಈ ಸಂಭ್ರಮಕ್ಕೆ ಮಂಗಳವಾರ ತೆರೆ ಬಿದ್ದಿದೆ.

ಕಾರವಾರ ನಗರದ ಬಾಂಡಿಸಿಟ್ಟಾದಲ್ಲಿಸತತ 17 ವರ್ಷಗಳಿಂದ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗಿದ್ದು, ಶ್ರೀ ದುರ್ಗಾ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಎಲ್ಲಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ರಾತ್ರಿ ದಾಂಡಿಯಾ ಆರಂಭಗೊಳ್ಳುವ ಮೊದಲು ಸಾಧಕರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ನಡೆಯುತ್ತದೆ. ಬಾಂಡಿಸಿಟ್ಟಾದ ಯುವಕ ಮಂಡಳ ಗ್ರಾಮಸ್ಥರ ಸಹಕಾರದೊಂದಿಗೆ ನವರಾತ್ರಿಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ