ನದಿಗೆ ಈಜಲು ಹೋದ ವಿದ್ಯಾರ್ಥಿ ಸಾವು
ಹೊನ್ನಾವರ : ತಾಲೂಕಿನ ವಲ್ಕಿಯಲ್ಲಿ ಶರಾವತಿ ನದಿಗೆ ಈಜಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ಶುಕ್ರವಾರ ಮೃತಪಟ್ಟಿದ್ದಾನೆ.
Vijaya Karnataka 31 Mar 2019, 5:00 am
ಹೊನ್ನಾವರ : ತಾಲೂಕಿನ ವಲ್ಕಿಯಲ್ಲಿ ಶರಾವತಿ ನದಿಗೆ ಈಜಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ಶುಕ್ರವಾರ ಮೃತಪಟ್ಟಿದ್ದಾನೆ.
ಸ್ಥಳೀಯ ನಿವಾಸಿ ರಯಾನ್ ಜಾಫರ್ ಖಾಜಿ(18) ಮೃತ ವ್ಯಕ್ತಿ. ಈತ ಶುಕ್ರವಾರ ಸಾಯಂಕಾಲ ವಲ್ಕಿ ಮಸೀದಿ ಬಳಿ ಶರಾವತಿ ನದಿಗೆ ಈಜಲು ತೆರಳಿದ್ದ. ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಜನರು ಆತನನ್ನು ಮೇಲಕ್ಕೆ ಎತ್ತಿ ತಕ್ಷ ಣ ಹೊನ್ನಾವರ ಆಸ್ಪತ್ರೆಗೆ ಕರೆತಂದರು. ಅಷ್ಟರಲ್ಲಾಗಲೇ ಆತ ಮೃತ ಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿದರು. ಘಟನೆಯ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ನಿವಾಸಿ ರಯಾನ್ ಜಾಫರ್ ಖಾಜಿ(18) ಮೃತ ವ್ಯಕ್ತಿ. ಈತ ಶುಕ್ರವಾರ ಸಾಯಂಕಾಲ ವಲ್ಕಿ ಮಸೀದಿ ಬಳಿ ಶರಾವತಿ ನದಿಗೆ ಈಜಲು ತೆರಳಿದ್ದ. ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಜನರು ಆತನನ್ನು ಮೇಲಕ್ಕೆ ಎತ್ತಿ ತಕ್ಷ ಣ ಹೊನ್ನಾವರ ಆಸ್ಪತ್ರೆಗೆ ಕರೆತಂದರು. ಅಷ್ಟರಲ್ಲಾಗಲೇ ಆತ ಮೃತ ಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿದರು. ಘಟನೆಯ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.