ಆ್ಯಪ್ನಗರ

ಜಿಲ್ಲೆ ಮತ್ತೊಮ್ಮೆ ಲಾಕ್

ಕಾರವಾರ : ಕೊರೊನಾ ವೈರಸ್‌ ಹರಡುವುದನ್ನು ತಪ್ಪಿಸಲು ರಾಜ್ಯ ಸರಕಾರ ಘೋಷಿಸಿದ ಸಂಡೇ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಔಷಧ ಅಂಗಡಿ ಹೊರತು ಪಡಿಸಿ ಎಲ್ಲ ಅಂಗಡಿಗಳು ಮುಚ್ಚಿದ್ದವು. ಶನಿವಾರ ರಾತ್ರಿ 8 ಗಂಟೆಗೆ ಬಂದ್‌ ಆದ ಅಂಗಡಿ ಮುಂಗಟ್ಟುಗಳು ಭಾನುವಾರಬಾಗಿಲು ತೆರೆದಿರಲಿಲ್ಲ. ಬೆಳಗ್ಗೆ 7 ಗಂಟೆಯವರೆಗೆ ಹಾಲಿನ ಅಂಗಡಿಗಳು ಮಾತ್ರ ತೆರೆದು ಅಗತ್ಯ ಇದ್ದವರಿಗೆ ಹಾಲು ಪೂರೈಸಲಾಯಿತು.

Vijaya Karnataka 13 Jul 2020, 5:00 am
ಕಾರವಾರ : ಕೊರೊನಾ ವೈರಸ್‌ ಹರಡುವುದನ್ನು ತಪ್ಪಿಸಲು ರಾಜ್ಯ ಸರಕಾರ ಘೋಷಿಸಿದ ಸಂಡೇ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಔಷಧ ಅಂಗಡಿ ಹೊರತು ಪಡಿಸಿ ಎಲ್ಲ ಅಂಗಡಿಗಳು ಮುಚ್ಚಿದ್ದವು. ಶನಿವಾರ ರಾತ್ರಿ 8 ಗಂಟೆಗೆ ಬಂದ್‌ ಆದ ಅಂಗಡಿ ಮುಂಗಟ್ಟುಗಳು ಭಾನುವಾರಬಾಗಿಲು ತೆರೆದಿರಲಿಲ್ಲ. ಬೆಳಗ್ಗೆ 7 ಗಂಟೆಯವರೆಗೆ ಹಾಲಿನ ಅಂಗಡಿಗಳು ಮಾತ್ರ ತೆರೆದು ಅಗತ್ಯ ಇದ್ದವರಿಗೆ ಹಾಲು ಪೂರೈಸಲಾಯಿತು. ಮುಖ್ಯವಾಗಿ ನಗರದ ಮೀನು ಮಾರುಕಟ್ಟೆ ಸಂಪೂರ್ಣ ಬಂದ್‌ ಆಗುವುದರ ಜೊತೆಗೆ ರಸ್ತೆ ಪಕ್ಕದಲ್ಲಿಕುಳಿತು ಮೀನು ಮಾರಾಟ ಮಾಡುವುನ್ನು ಕೂಡ ಮೀನುಗಾರರು ಸ್ಥಗಿತಗೊಳಿಸಿದ್ದರು. ದಿನಸಿ ಅಂಗಡಿ, ತರಕಾರಿ, ಚಿಕನ್‌ ಮಟನ್‌ ಅಂಗಡಿ ತೆರೆಯಲು ಹಾಗೂ ಹೊಟೇಲ್‌ಗಳಲ್ಲಿಪಾರ್ಸಲ್‌ ನೀಡಲು ಸರಕಾರ ಅವಕಾಶ ನೀಡಿತ್ತಾದರೂ ವ್ಯಾಪಾರಸ್ಥರು ಬಂದ್‌ ಗೆ ಸಹಕರಿಸಲು ಮೊದಲೇ ನಿರ್ಧರಿಸಿ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿಎಲ್ಲಅಂಗಡಿಗಳು, ಹೋಟೆಲ್‌ಗಳು ಬಂದ್‌ ಮಾಡಲಾಗಿತ್ತು. ಬಸ್‌ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ಅಟೊ ಸಂಚಾರವೂ ಇರಲಿಲ್ಲ. ಹೀಗಾಗಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುತ್ತಿತ್ತು. ಬಂದ್‌ಗೆ ಸಹಕರಿಸದ ಜನರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿಖಾಸಗಿ ವಾಹನ ಸಂಚಾರವೂ ಬಂದ್‌ ಆಗಿತ್ತು. ಕೊರೊನಾ ಮಹಾಮಾರಿಯಿಂದ ದೂರ ಇರಲು ಸರಕಾರದ ಆದೇಶದಂತೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದರು. ನಗರದ ವಿವಿಧ ಭಾಗಗಳಲ್ಲಿಪೊಲೀಸರು ಗಸ್ತಿನಲ್ಲಿದ್ದು ಲಾಕ್‌ಡೌನ್‌ ನಡುವೆಯೂ ಸಂಚರಿಸುತ್ತಿರುವವರನ್ನು ವಿಚಾರಣೆ ನಡೆಸಿ ಬಿಡುತ್ತಿರುವುದು ಕಂಡು ಬಂದಿತು.
Vijaya Karnataka Web 12SUNEEL2_24
ಕಾರವಾರದಲ್ಲಿ ಭಾನುವಾರದ ಲಾಕ್‌ಡೌನ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಎಲ್ಲಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು.


ಪೇಟೆಗೆ ತೆರಳದ ಜನ.. ರಸ್ತೆ ಭಣ ಭಣ : ಶಿರಸಿ: ಸಂಡೆ ಲಾಕ್‌ಡೌನ್‌ಗೆ ನಗರದಲ್ಲಿಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ರಸ್ತೆಗಳಲ್ಲಿಬಿಕೋ ಎನ್ನುತ್ತಿದ್ದವು

ಭಾನುವಾರದ ರಜಾ ದಿನವೂ ಆಗಿದ್ದರಿಂದ ಶಹರದಲ್ಲಿಅಂಗಡಿಗಳು ಮೊದಲೇ ತೆರೆಯುತ್ತಿರಲಿಲ್ಲ. ಲಾಕ್‌ಡೌನ್‌ ಇದ್ದಿದ್ದರಿಂದ ಸಂಡೆಯಲ್ಲೂತೆರೆಯುತ್ತಿದ್ದ ಅಂಗಡಿಗಳು ಬಂದ್‌ ಆಗಿದ್ದವು. ಇದರಿಂದ ವ್ಯಾಪಾರ, ವಹಿವಾಟು,ಬಸ್‌, ಆಟೊ ಓಡಾಟ ಬಂದ್‌ ಆಗಿತ್ತು. ಸದಾ ಜನರಿಂದ ತುಂಬಿರುತ್ತಿದ್ದ ಸಿ.ಪಿ.ಬಝಾರ, ದೇವಿಕೆರೆ, ಹಳೆ ಬಸ್‌ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ರಸ್ತೆ ಭಣಭಣ ಎನ್ನುವಂತಾಗಿತ್ತು. ವಾರದ ರಜಾ ದಿನವೆಂದು ಪೇಟೆಗಳಿಗೆ ತೆರಳಿ ಶಾಪಿಂಗ್‌ ಮಾಡಲು ಬಯಸಿದವರು ಲಾಕ್‌ಡೌನ್‌ ಕಾರಣದಿಂದ ಮನೆಯಲ್ಲೇ ಕಾಲ ಕಳೆದರು. ಕಳೆದ ಕೆಲವು ದಿನಗಳಲ್ಲಿನಗರದಲ್ಲಿಕೊರೊನಾ ಕೇಸ್‌ ಹೆಚ್ಚುತ್ತಿರುವುದರಿಂದ ನಗರದಲ್ಲಿಇನ್ನುಳಿದ ದಿನಗಳಲ್ಲೂಜನರ ಓಡಾಟ ಕಡಿಮೆಯಾಗಿದೆ. ಗ್ರಾಮೀಣ ಭಾಗದಿಂದ ಶಹರಕ್ಕೆ ಬರುವವರ ಸಂಖ್ಯೆ ತೀರ ಇಳಿಮುಖವಾಗಿದೆ. ಶಹರದವರ ಓಡಾಟವೂ ವಿರಳವಾಗಿದ್ದು ಅಗತ್ಯ ಕೆಲಸವುಳ್ಳವರೂ ಮಾತ್ರ ಬರುತ್ತಿದ್ದಾರೆ. ಹಿಂದೆಲ್ಲಲಾಕ್‌ಡೌನ್‌ ಇದ್ದರೂ ಜನರ ಓಡಾಟ ನಿಯಂತ್ರಿಸಲು ಪೊಲೀಸ್‌ ನಿಗಾ ವಹಿಸಬೇಕಿತ್ತು. ಆದರೆ ಕಳೆದ ಎರಡು ಸಂಡೆ ಲಾಕ್‌ಡೌನ್‌ನಲ್ಲೂಜನರ ಓಡಾಟ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸುವ ಸಂದರ್ಭ ಬಂದಿಲ್ಲ. ಜನರೇ ಸ್ವಯಂ ಜಾಗೃತರಾಗಿ ಹೊರಬೀಳುತ್ತಿಲ್ಲ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ