ಆ್ಯಪ್ನಗರ

ಕಂಟೇನರ್‌ಗೆ ವಿದ್ಯುತ್‌ ತಂತಿ ತಗುಲಿ ಚಾಲಕ ಸಜೀವ ದಹನ

ಅಂಕೋಲಾ : ತಾಲೂಕಿನ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿಕಂಟೇನರ್‌ ವಾಹನಕ್ಕೆ ವಿದ್ಯುತ್‌ ತಂತಿ ತಗುಲಿ ಚಾಲಕ ಸಜೀವ ದಹನವಾಗಿದ್ದಾನೆ.

Vijaya Karnataka 18 Nov 2019, 5:00 am
ಅಂಕೋಲಾ : ತಾಲೂಕಿನ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿಕಂಟೇನರ್‌ ವಾಹನಕ್ಕೆ ವಿದ್ಯುತ್‌ ತಂತಿ ತಗುಲಿ ಚಾಲಕ ಸಜೀವ ದಹನವಾಗಿದ್ದಾನೆ.
Vijaya Karnataka Web the driver of the electrical wires to the container is burnt alive
ಕಂಟೇನರ್‌ಗೆ ವಿದ್ಯುತ್‌ ತಂತಿ ತಗುಲಿ ಚಾಲಕ ಸಜೀವ ದಹನ


ಬೆಳಗಾವಿ ಮೂಲದ ಆನಂದ ದುಂಡಪ್ಪ ಮರಡಿ( 45)ಮೃತ ಪಟ್ಟವ.

ನಡೆದದ್ದೇನು: ಅಂಕೋಲಾದಿಂದ ಹುಬ್ಬಳ್ಳಿ ಕಡೆಗೆ ಕಂಟೇನರ್‌ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಬಹಿರ್ದೆಸೆಗಾಗಿ ಹೆದ್ದಾರಿ ಪಕ್ಕ ವಾಹನ ನಿಲ್ಲಿಸಿ ಇಳಿದಿದ್ದಾನೆ. ಆ ಸಂದರ್ಭದಲ್ಲಿಕಂಟೇನರ್‌ ಮೇಲ್ಭಾಗಕ್ಕೆ 11 ಕೆವಿ ವಿದ್ಯುತ್‌ ಲೈನ್‌ ತಗುಲಿದ್ದು ಗಮನಿಸದೇ ಚಾಲಕ ವಾಹನ ಏರಲು ಬಂದಾಗ ವಿದ್ಯುತ್‌ ಗ್ರೌಂಡ್‌ ಆಗಿ ತಕ್ಷಣ ಆತನಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಆತ ಸಜೀವ ದಹನವಾಗಿದ್ದಾನೆ. ವಾಹನದಲ್ಲಿಚಾಲಕನ ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ