ಆ್ಯಪ್ನಗರ

ಶನಿವಾರವೂ ಮುಂದುವರೆದ ತೆರವು ಕಾರ‍್ಯ

ಗೋಕರ್ಣ : ಚರಂಡಿ ಮೇಲಿನ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ಎರಡನೇ ದಿನವಾದ ಶನಿವಾರವೂ ಮುಂದುವರಿಯಿತು.

Vijaya Karnataka 21 Jul 2019, 5:00 am
ಗೋಕರ್ಣ : ಚರಂಡಿ ಮೇಲಿನ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ಎರಡನೇ ದಿನವಾದ ಶನಿವಾರವೂ ಮುಂದುವರಿಯಿತು.
Vijaya Karnataka Web the evacuation was continued on saturday
ಶನಿವಾರವೂ ಮುಂದುವರೆದ ತೆರವು ಕಾರ‍್ಯ


ಲೋಕೋಪಯೋಗಿ ಇಲಾಖೆಯವರು ಗಣಪತಿ ಮತ್ತು ಮಹಾಬಲೇಶ್ವರ ದೇವಾಲಯದ ಬಳಿಯ ರಸ್ತೆಯ ಸರ್ವೇ ನಡೆಸಿದ್ದು, ಜಾಗ ಅತಿಕ್ರಮಿಸಿದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು. ಆದರೆ ಈ ಬಗ್ಗೆ ಇಲಾಖೆಯರನ್ನು ವಿಚಾರಿಸಿದಾಗ ಇನ್ನೂ ಎರಡು ದಿನ ಸರ್ವೇ ಕಾರ್ಯವಿದ್ದು, ಪೂರ್ಣಗೊಂಡ ನಂತರವೇ ಜಾಗ ಗುರುತಿಸಿ ಮಾಹಿತಿ ನೀಡುತ್ತೇವೆ ಎಂದಿದ್ದಾರೆ. ಶುಕ್ರವಾರ ಕೊನೆಗೊಂಡಿದ್ದ ರಥಬೀದಿಯ ಅರ್ಧದಿಂದ ಗಂಜಿಗದ್ದೆಯವರೆಗೆ ಕಾರ್ಯಾಚರಣೆ ನಡೆದಿದ್ದು ಇನ್ನೂ ಕೆಲವು ದಿನ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ತಾ.ಪಂ. ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಚಂದ್ರಶೇಖರ ನಾಯ್ಕ, ತಹಸೀಲ್ದಾರ ಮೇಘರಾಜ ನಾಯ್ಕ, ಪಿಡಿಒ, ಅಧ್ಯಕ್ಷೆ ಮಹಾಲಕ್ಷ್ಮೀ ಸಣ್ಬಡ್ತಿ, ಉಪಾಧ್ಯಕ್ಷ ಶೇಖರ ನಾಯ್ಕ, ಗ್ರಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ