ಆ್ಯಪ್ನಗರ

ರಾಮಮಂದಿರ ನಿರ್ಮಾಣಕ್ಕೆ ಹೋರಾಟ

ಶಿರಸಿ (ಉತ್ತರ ಕನ್ನಡ) :ಮುಂದಿನ ಐದು ವರ್ಷದ ಅವಧಿಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆ ಮುಂಚೂಣಿ ಹೋರಾಟ ನಡೆಸಲಿದೆ ಎಂದು ಸಂಘಟನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

Vijaya Karnataka 23 May 2019, 5:00 am
ಶಿರಸಿ (ಉತ್ತರ ಕನ್ನಡ) :ಮುಂದಿನ ಐದು ವರ್ಷದ ಅವಧಿಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆ ಮುಂಚೂಣಿ ಹೋರಾಟ ನಡೆಸಲಿದೆ ಎಂದು ಸಂಘಟನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
Vijaya Karnataka Web the fight for the construction of the ram temple
ರಾಮಮಂದಿರ ನಿರ್ಮಾಣಕ್ಕೆ ಹೋರಾಟ


ಸೋದೆ ವಾದಿರಾಜ ಮಠದಲ್ಲಿ ಸಂಘಟನೆಯ ಮೂರು ದಿನಗಳ ಸಮಾಲೋಚನೆ ಸಭೆಯ ಬಳಿಕ ಅವರು ಮಾತನಾಡಿದರು.

''ರಾಮಮಂದಿರ ನಿರ್ಮಾಣ ವಿಷಯ 30 ವರ್ಷಗಳ ಹೋರಾಟ. ಆದರೆ ಈವರೆಗೂ ರಾಮಮಂದಿರ ಕಟ್ಟದೇ ಇರುವುದಕ್ಕೆ ನಮಗೆ ನೋವು, ಸಿಟ್ಟು ಎರಡೂ ಇದೆ. ಈ ವಿಷಯವಾಗಿ ನೂರು ಕೋಟಿ ರಾಮ ಭಕ್ತರಿಗೂ ನೋವಿದೆ. ಆದರೆ ಅವರು ಅದನ್ನು ವ್ಯಕ್ತಪಡಿಸಲಿಲ್ಲ'' ಎಂದರು.

ನೋವು ವ್ಯಕ್ತಪಡಿಸುವ ಕಾಲ ಬರುತ್ತೆ: ''ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂಪೂರ್ಣ ಬಹುಮತ ಇಲ್ಲವೆಂದು, ಇದೀಗ ನ್ಯಾಯಾಲಯದಲ್ಲಿ ಪ್ರಕರಣ ಇದೆಯೆಂದು ರಾಮ ಮಂದಿರ ನಿರ್ಮಾಣದ ವಿಷಯವನ್ನು ವ್ಯವಸ್ಥಿತವಾಗಿ ಪಕ್ಕಕ್ಕೆ ಸರಿಸಲಾಗಿದೆ. ಆದರೆ ಮುಂದಿನ ಐದು ವರ್ಷದ ಅವಧಿಯಲ್ಲಿ ಮಂದಿರ ನಿರ್ಮಿಸದಿದ್ದರೆ ರಾಮಭಕ್ತರು ನೋವನ್ನು ವ್ಯಕ್ತಪಡಿಸುವ ಕಾಲ ಬರುತ್ತದೆ'' ಎಂದು ಎಚ್ಚರಿಸಿದರು.

''ನರೇಂದ್ರ ಮೋದಿ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ನಿಶ್ಚಿತವಾಗಿ ದೇಶಕ್ಕೆ ಒಳ್ಳೆಯದನ್ನು ಮಾಡುತ್ತಾರೆ ಎಂಬ ವಿಶ್ವಾಸವಿದೆ. ಅಧಿಕಾರಕ್ಕೆ ಬಂದ ತಕ್ಷ ಣ ಬದಲಾವಣೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ದುರಾಡಳಿತದ ಬದಲಾವಣೆಗೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ'' ಎಂದು ಪ್ರತಿಪಾದಿಸಿದರು.

''ಹಿಂದುತ್ವದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆಯಿಲ್ಲ. ಹಿಂದುತ್ವದ ವಿಚಾರಕ್ಕೆ ಕೈಜೋಡಿಸಬೇಕು ಎಂದು ಬಿಜೆಪಿ ಅಥವಾ ಸಂಘ ಪರಿವಾರದವರು ನನ್ನನ್ನು ಕರೆದರೆ ಹೋಗಲು ಸಿದ್ಧವಿದ್ದೇನೆ. ಆರ್‌ಎಸ್‌ಎಸ್‌ ನಮ್ಮ ಮನೆ. ಅದರ ಸಂಸ್ಕಾರದಲ್ಲಿ ಬೆಳೆದಿದ್ದೇನೆ. ಅಲ್ಲಿಗೆ ವಾಪಸ್‌ ಹೋಗಲು ಭಯವಿಲ್ಲ'' ಎಂದರು.

''ಘೋಡ್ಸೆ ವಿಚಾರವಾಗಿ ಹಿಂದೂ ಉಗ್ರ ಎಂಬ ಶಬ್ದವನ್ನು ಕಮಲ ಹಾಸನ್‌ ಬಳಸಿರುವುದು ಚರ್ಚೆ ಆರಂಭಗೊಳ್ಳಲು ಕಾರಣವಾಗಿದೆ. ಈ ಚರ್ಚೆಯನ್ನು ಬಿಜೆಪಿ ಅಥವಾ ಸಂಘ ಪರಿವಾರ ಮೊದಲು ಆರಂಭಿಸಿದ್ದಲ್ಲ'' ಎಂದು ಹೇಳಿದರು. ಗಂಗಾಧರ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.


ಚುನಾವಣೆಯಲ್ಲಿ ತಟಸ್ಥರಾಗಿದ್ದೆವು : ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಾತ್ರವಿಲ್ಲ. ನಾವು ಯಾರಿಗೂ ಬೆಂಬಲ ನೀಡಿಲ್ಲ, ವಿರೋಧಿಸಿಯೂ ಇಲ್ಲ. ಸಂಪೂರ್ಣ ತಟಸ್ಥರಾಗಿದ್ದೆವು. ಸಂಘಟನೆಯ ಕಾರ್ಯಕರ್ತರು, ಸದಸ್ಯರು ಹಿಂದುತ್ವ ವಿಚಾರಧಾರೆಯಲ್ಲಿ ಅವರಿಷ್ಟದಂತೆ ಕೆಲಸ ಮಾಡಬಹುದು ಎಂದೇ ಹೇಳಿದ್ದೆವು ಎಂದು ಪ್ರಮೋದ ಮುತಾಲಿಕ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ