ಆ್ಯಪ್ನಗರ

ಕಾಲು ಜಾರಿ ಬಿದ್ದು ಸಾವು

ಹೊನ್ನಾವರ (ಉತ್ತರ ಕನ್ನಡ) : ತಾಲೂಕಿನ ಹಾಡಗೇರಿಯಲ್ಲಿ ನೆರೆ ಹಾವಳಿಯಿಂದ ಕೊಚ್ಚಿ ಹೋಗಿದ್ದ ಮನೆ ಎದುರಿನ ಅಡಕೆ ಮರದ ಬುಡಗಳಿಗೆ ದಿಬ್ಬದ ಮಣ್ಣು ಅಗೆದು ತಂದು ಹಾಕುತ್ತಿದ್ದ ಮಹಿಳೆ ಕಾಲು ಜಾರಿ ಬಿದ್ದು ಗುರುವಾರ ಮೃತಪಟ್ಟಿದ್ದಾರೆ.

Vijaya Karnataka 17 Aug 2019, 5:00 am
ಹೊನ್ನಾವರ (ಉತ್ತರ ಕನ್ನಡ) : ತಾಲೂಕಿನ ಹಾಡಗೇರಿಯಲ್ಲಿ ನೆರೆ ಹಾವಳಿಯಿಂದ ಕೊಚ್ಚಿ ಹೋಗಿದ್ದ ಮನೆ ಎದುರಿನ ಅಡಕೆ ಮರದ ಬುಡಗಳಿಗೆ ದಿಬ್ಬದ ಮಣ್ಣು ಅಗೆದು ತಂದು ಹಾಕುತ್ತಿದ್ದ ಮಹಿಳೆ ಕಾಲು ಜಾರಿ ಬಿದ್ದು ಗುರುವಾರ ಮೃತಪಟ್ಟಿದ್ದಾರೆ.
Vijaya Karnataka Web the foot slipped and died
ಕಾಲು ಜಾರಿ ಬಿದ್ದು ಸಾವು


ಸೀತು ಅನಂತ ನಾಯ್ಕ (52) ಎಂಬುವರೇ ಮೃತರು. ಕಳೆದ ವಾರ ಗುಂಡಬಾಳ ನದಿಯ ಪ್ರವಾಹದಲ್ಲಿ ಇವರ ಮನೆಯಲ್ಲಿ ನೀರು ತುಂಬಿದ್ದರಿಂದ ಹತ್ತಿರದ ಸರಕಾರಿ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ತಮ್ಮ ಕುಟುಂಬದೊಂದಿಗೆ ಆಶ್ರಯ ಪಡೆದಿದ್ದರು. ಈಗ ನೆರೆ ಇಳಿದಿದ್ದರಿಂದ ಮನೆಗೆ ಮರಳಿದ್ದರು. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ