ಆ್ಯಪ್ನಗರ

ಅರಣ್ಯಕ್ಕೆ ಬೆಂಕಿ ಬೀಳದಂತೆ ಎಚ್ಚರ ಅವಶ್ಯ

ಕಾರವಾರ : ಬರುವ ಬೇಸಿಗೆಯಲ್ಲಿಬೆಂಕಿಯಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಲು ಕಾರವಾರ ವಿಭಾಗದ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ. ಅವರ ಮಾರ್ಗದರ್ಶನದಲ್ಲಿಅರಣ್ಯದಂಚಿನ ಎಲ್ಲಗ್ರಾಮಗಳಲ್ಲಿಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದೆ.

Vijaya Karnataka 23 Jan 2020, 5:00 am
ಕಾರವಾರ : ಬರುವ ಬೇಸಿಗೆಯಲ್ಲಿಬೆಂಕಿಯಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಲು ಕಾರವಾರ ವಿಭಾಗದ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ. ಅವರ ಮಾರ್ಗದರ್ಶನದಲ್ಲಿಅರಣ್ಯದಂಚಿನ ಎಲ್ಲಗ್ರಾಮಗಳಲ್ಲಿಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದೆ.
Vijaya Karnataka Web 22 GURUDATT 1_24
ಕಾರವಾರ ತಾಲೂಕಿನ ತೋಡೂರಿನಲ್ಲಿನಡೆದ ಜಾಗೃತಿ ಕಾರ್ಯಕ್ರಮದಲ್ಲಿಗ್ರಾಮಸ್ಥರು ಬೆಂಕಿಯಿಂದ ಅರಣ್ಯ ರಕ್ಷಣೆಗೆ ಪ್ರತಿಜ್ಞೆ ಕೈಗೊಂಡರು.


ಇದರ ಅಂಗವಾಗಿ ಇತ್ತೀಚೆಗೆ ಕಾರವಾರ, ಗೋಪಶಿಟ್ಟಾ, ಕದ್ರಾ ಅರಣ್ಯ ವಲಯದ ವಿವಿಧ ಅರಣ್ಯದಂಚಿನ ಗ್ರಾಮಗಳಲ್ಲಿಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿಯವರ ನೇತೃತ್ವದಲ್ಲಿವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಇಲಾಖಾ ಸಿಬ್ಬಂದಿಯೊಂದಿಗೆ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಾಯಿತು.

ತೋಡೂರು ಗ್ರಾಮ ಅರಣ್ಯ ಸಮಿತಿಯಲ್ಲಿಬೆಂಕಿಯಿಂದ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಅರಣ್ಯ ಪ್ರದೇಶದಲ್ಲಿಹಾದು ಹೋಗುವ ದಾರಿಹೋಕರು, ದನಗಾಹಿಗಳು ಬೀಡಿ, ಸಿಗರೇಟು ಸೇದಿ ಎಸೆಯುವುದರಿಂದ, ವಿದ್ಯುತ್‌ ಲೈನ್‌ ಶಾರ್ಟ್‌ ಸರ್ಕಿಟ್‌ ಆಗುವುದರಿಂದ ಅಥವಾ ಕೆಲವು ಪುಂಡರು ಅರಣ್ಯ ಪ್ರದೇಶದಲ್ಲಿಮೋಜಿಗಾಗಿ ಬರುವುದರಿಂದ ಅರಣ್ಯಕ್ಕೆ ಬೆಂಕಿ ಬೀಳುವ ಸಾಧ್ಯತೆ ಇರುತ್ತದೆ. ಅರಣ್ಯಕ್ಕೆ ಬೆಂಕಿ ಬಿದ್ದರೆ ಸುಮಾರು ಹತ್ತು ತಲೆಮಾರಿನಷ್ಟು ಅರಣ್ಯ ಬೆಂಕಿಗೆ ಆಹುತಿಯಾಗುವುದಲ್ಲದೇ, ಅರಣ್ಯ ಪ್ರದೇಶದಲ್ಲಿರುವ ವನಸ್ಪತಿಗಳು, ಪಕ್ಷಿಗಳು, ಪಕ್ಷಿಗಳ ಗೂಡು, ಪರಾಗಸ್ಪರ್ಶ ಮಾಡುವ ದುಂಬಿ, ಪತಂಗ, ಚಿಟ್ಟೆ, ಜೇನುಹುಳುಗಳು ಬೆಂಕಿಗಾಹುತಿ ಆಗುತ್ತವೆ. ಆದ್ದರಿಂದ ನಿಮ್ಮ ಗ್ರಾಮ ಸುತ್ತಮುತ್ತಲೂ ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಲು ತಿಳಿಸಿದರು.

ವಲಯ ಅರಣ್ಯಾಧಿಕಾರಿ ಜಿ.ವಿ. ನಾಯ್ಕ, ಮಾತನಾಡಿ, ಸಾಮಾನ್ಯವಾಗಿ ಮನುಷ್ಯನಿಗೆ ಅರಣ್ಯ ಪ್ರದೇಶದಲ್ಲಿರುವ ಚಿಗಣಿಗಳು ತಮ್ಮ ಸಾಕುಪ್ರಾಣಿಗಳಿಗೆ ತಗಲಬಾರದು, ಉರುವಲು ತರಲು ಹೋದಾಗ ಇದರಿಂದ ತೊಂದರೆಯಾಗುತ್ತದೆ ಎಂಬಿತ್ಯಾದಿ ಮನೋಭಾವನೆಯಿಂದ ಅರಣ್ಯಕ್ಕೆ ಬೆಂಕಿ ಹಾಕುತ್ತಾರೆ. ಆದರೆ ಅರಣ್ಯಕ್ಕೆ ಬೆಂಕಿ ಹಾಕುವುದರಿಂದ ಅಲ್ಲಿರುವ ಸೂಕ್ಷತ್ರ್ಮ ಜೀವಿಗಳು ನಾಶವಾದಲ್ಲಿಗ್ರಾಮದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಅರಣ್ಯಕ್ಕೆ ಬೆಂಕಿ ಬಿದ್ದಲ್ಲಿಗ್ರಾಮಸ್ಥರು ಇಲಾಖಾ ಸಿಬ್ಬಂದಿಗಳೊಡನೆ ಸಹಕರಿಸುವಂತೆ ಕೋರಿದರು. ವೀರೇಂದ್ರ ಪವಾರ, ಸುಗಮಗಾರರು ಮಾತನಾಡಿ, ಅರಣ್ಯಕ್ಕೆ ಬೆಂಕಿ ಬೀಳುವುದರಿಂದ ಜೀವವೈವಿಧ್ಯತೆ ಯಾವ ರೀತಿಯಾಗಿ ನಾಶವಾಗುತ್ತದೆ. ಇದರಿಂದ ಜನಜೀವನದ ಮೇಲೆ ಆಗುವ ದುಷ್ಪರಿಣಾಮದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿತಮ್ಮ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿಬೆಂಕಿ ಬೀಳದಂತೆ ಎಚ್ಚರ ವಹಿಸುವುದಾಗಿ ಹಾಗೂ ಬೆಂಕಿ ನಂದಿಸಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಸಹಕರಿಸುವುದಾಗಿ ಪ್ರತಿಜ್ಞೆಯನ್ನು ಕೈಗೊಂಡರು. ಆಯಾ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳು ಸ್ವಾಗತಿಸಿದರು. ಅರಣ್ಯ ರಕ್ಷಕರು ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ