ಆ್ಯಪ್ನಗರ

ರಂಜಿಸಿದ ವಾಮನ ಚರಿತ್ರೆ ತಾಳಮದ್ದಲೆ

ಸಿದ್ದಾಪುರ : ಟಿಎಂಎಸ್‌ ಸದಸ್ಯರ ಸರ್ವಸಾದಾರಣ ಸಭೆಯ ಪ್ರಯುಕ್ತ ಇತ್ತೀಚೆಗೆ ಸಿದ್ದಾಪುರದ ಟಿಎಂಎಸ್‌ ಸಭಾಭವನದಲ್ಲಿವಾಮನ ಚರಿತ್ರೆ ಎಂಬ ತಾಳಮದ್ದಲೆ ಹಾಗೂ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

Vijaya Karnataka 20 Sep 2019, 5:00 am
ಸಿದ್ದಾಪುರ : ಟಿಎಂಎಸ್‌ ಸದಸ್ಯರ ಸರ್ವಸಾದಾರಣ ಸಭೆಯ ಪ್ರಯುಕ್ತ ಇತ್ತೀಚೆಗೆ ಸಿದ್ದಾಪುರದ ಟಿಎಂಎಸ್‌ ಸಭಾಭವನದಲ್ಲಿವಾಮನ ಚರಿತ್ರೆ ಎಂಬ ತಾಳಮದ್ದಲೆ ಹಾಗೂ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
Vijaya Karnataka Web the history of the amused vamana
ರಂಜಿಸಿದ ವಾಮನ ಚರಿತ್ರೆ ತಾಳಮದ್ದಲೆ


ಅತ್ಯಂತ ವಿದ್ವತ್‌ಪೂರ್ಣವಾದ ಚರ್ಚೆ ಹಾಗೂ ಅರ್ಥಗಾರಿಕೆಯೊಂದಿಗೆ ತಾಳಮದ್ದಲೆ ನಡೆಯಿತು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎ ಹೆಗಡೆ ದಂಟಕಲ್‌ ಅವರು ವಾಮನನ ಪಾತ್ರ ನಿರ್ವಹಿಸಿದರು. ವಿ.ಪ್ರೊ. ಉಮಾಕಾಂತ ಭಟ್ಟ ಕೆರೆಕೈ ಬಲಿ ಚಕ್ರವರ್ತಿ ಪಾತ್ರಕ್ಕೆ ತಮ್ಮ ವಿದ್ವತ್‌ ಪೂರ್ಣ ಮಾತುಗಳೊಂದಿಗೆ ಸಭೆಯನ್ನು ರಂಜಿಸಿದರು. ಅಶೋಕಭಟ್ಟ ಉಜಿರೆ ಶುಕ್ರಾಚಾರ್ಯ ಪಾತ್ರವನ್ನು, ಸಾಹಿತಿ ಜಿ.ಕೆ ಭಟ್ಟ ಕಶಿಗೆರವರು ಕಶ್ಯಪನ ಪಾತ್ರಕ್ಕೆ ವಿಶೇಷ ಮೆರಗನ್ನು ನೀಡಿದರು.

ಹಿಮ್ಮೇಳದಲ್ಲಿಕೇಶವ ಹೆಗಡೆ ಕೊಳಗಿ, ಭಾಗವತರಾಗಿ ಶಂಕರ ಭಾಗ್ವತ ಯಲ್ಲಾಪುರ, ಮೃದಂಗಕಾರರಾಗಿ ಪ್ರಸನ್ನ ಹೆಗಡೆ ಚಂಡೆವಾದಕರಾಗಿ ಸಹಕರಿಸಿದರು. ಟಿಎಂಎಸ್‌ ಅಧ್ಯಕ್ಷ ಆರ್‌. ಎಂ. ಹೆಗಡೆ ಬಾಳೇಸರ ಮಾತನಾಡಿ, ಯಕ್ಷಗಾನ ತಾಳಮದ್ದಲೆಯೂ ಮಾತಿನ ಔಚಿತ್ಯದೊಂದಿಗೆ ಪುರಾಣ ಕಥೆಗಳ ಜ್ಞಾನವನ್ನು ನೀಡುತ್ತದೆ ಎಂದು ಹೇಳಿದರು.

ನಂತರ ತಾಳಮದ್ದಲೆಯಲ್ಲಿಭಾಗವಹಿಸಿದ್ದ ಕಲಾವಿದರನ್ನು ಟಿಎಂಎಸ್‌ ಪರವಾಗಿ ಗೌರವಿಸಲಾಯಿತು. ನಿರ್ದೇಶಕ ಎಂ. ಆರ್‌. ಹೆಗಡೆ ನೈಗಾರ ವಂದಿಸಿದರು. ಜಿ.ಜಿ ಹೆಗಡೆ ಬಾಳಗೋಡ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ