ಆ್ಯಪ್ನಗರ

ಇಂದಿರಾ ಕ್ಯಾಂಟೀನ್‌ಗಿಲ್ಲ ಉದ್ಘಾಟನೆ ಭಾಗ್ಯ

ಜಿ.ಎನ್‌.ಭಟ್‌ ತಟ್ಟಿಗದ್ದೆ ಯಲ್ಲಾಪುರ: ಪಟ್ಟಣದ ಬೆಲ್‌ ರಸ್ತೆಯಲ್ಲಿಇಂದಿರಾ ಕ್ಯಾಂಟೀನ್‌ ಕಟ್ಟಡವನ್ನು ನಿರ್ಮಿಸಿ ವರ್ಷ ಕಳೆಯುತ್ತಾ ಬಂದರೂ, ಇನ್ನೂ ಕ್ಯಾಂಟೀನ್‌ ಉದ್ಘಾಟನಾ ಭಾಗ್ಯಕ್ಕೆ ಕಾಲ ಕೂಡಿ ಬರದೇ ಇರುವುದು ಸಾರ್ವಜನಿಕರ ನಿರಾಸೆಗೆ ಕಾರಣವಾಗಿದೆ. ಕಡಿಮೆ ದರದಲ್ಲಿರುಚಿಯಾದ ಊಟ, ತಿಂಡಿ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದ್ದವರಿಗೆ ಕ್ಯಾಂಟೀನ್‌ ಬಾಗಿಲು ತೆರೆಯಲು ವಿಳಂಬವಾಗುತ್ತಿರುವುದು ಬೇಸರಕ್ಕೆ ಕಾರಣವಾಗಿದೆ.

Vijaya Karnataka 20 Oct 2019, 5:00 am
ಜಿ.ಎನ್‌.ಭಟ್‌ ತಟ್ಟಿಗದ್ದೆ ಯಲ್ಲಾಪುರ: ಪಟ್ಟಣದ ಬೆಲ್‌ ರಸ್ತೆಯಲ್ಲಿಇಂದಿರಾ ಕ್ಯಾಂಟೀನ್‌ ಕಟ್ಟಡವನ್ನು ನಿರ್ಮಿಸಿ ವರ್ಷ ಕಳೆಯುತ್ತಾ ಬಂದರೂ, ಇನ್ನೂ ಕ್ಯಾಂಟೀನ್‌ ಉದ್ಘಾಟನಾ ಭಾಗ್ಯಕ್ಕೆ ಕಾಲ ಕೂಡಿ ಬರದೇ ಇರುವುದು ಸಾರ್ವಜನಿಕರ ನಿರಾಸೆಗೆ ಕಾರಣವಾಗಿದೆ. ಕಡಿಮೆ ದರದಲ್ಲಿರುಚಿಯಾದ ಊಟ, ತಿಂಡಿ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದ್ದವರಿಗೆ ಕ್ಯಾಂಟೀನ್‌ ಬಾಗಿಲು ತೆರೆಯಲು ವಿಳಂಬವಾಗುತ್ತಿರುವುದು ಬೇಸರಕ್ಕೆ ಕಾರಣವಾಗಿದೆ.
Vijaya Karnataka Web 19 YLP 1 A_24


ಉದ್ಘಾಟನೆ ಯಾವಾಗ ?:
ಬಡ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಡಿಮೆ ದರದಲ್ಲಿಊಟ, ತಿಂಡಿ ಪೂರೈಸುವ ಹಿಂದಿನ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ ಯೋಜನೆಯಂತೆ ಪಟ್ಟಣದ ಬೆಲ್‌ ರಸ್ತೆಯಲ್ಲಿಕಟ್ಟಡ ತಲೆ ಎತ್ತಿ ವರ್ಷ ಕಳೆಯುತ್ತಾ ಬಂತು. ಆದರೆ ಇನ್ನೂ ಉದ್ಘಾಟನೆ ಆಗಿಲ್ಲ. ಈ ಕಟ್ಟಡದೊಳಗೆ ಕೆಲವು ಕೆಲಸಗಳು ಬಾಕಿ ಇವೆ. ಹೀಗಾಗಿ ಉದ್ಘಾಟನೆಗೆ ವಿಳಂಬವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕ್ಯಾಂಟೀನಿನ ಒಳ ಆವಾರದಲ್ಲಿಅಡುಗೆ ಪಾತ್ರೆಗಳ ಜೋಡಣೆ ಹಾಗೂ ಇನ್ನಿತರ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಇವಿಷ್ಟು ಪೂರ್ಣಗೊಂಡರೆ ಉದ್ಘಾಟನೆಗೆ ಕಟ್ಟಡ ಸಜ್ಜುಗೊಳ್ಳಲಿದೆ.

ಬೆಂಗಳೂರಿನಿಂದ ಆಗಮಿಸಿದ್ದ ಕಟ್ಟಡ ನಿರ್ಮಾಣ ಕಂಪನಿಯ ಗುತ್ತಿಗೆದಾರ ಪ್ರತಿನಿಧಿಗಳು ಪಟ್ಟಣಕ್ಕೆ ಭೇಟಿ ನೀಡಿ ಕಟ್ಟಡದಲ್ಲಿಬಾಕಿ ಉಳಿದ ಕೆಲಸಗಳನ್ನು ಮುಗಿಸಿ, ಕ್ಯಾಂಟೀನ್‌ ಪ್ರಾರಂಭಿಸಲು ಬೇಕಾದ ಸೌಲಭ್ಯ ಕಲ್ಪಿಸಲು ಉದ್ಯುಕ್ತರಾಗಿದ್ದಾರೆ.

ಈ ಕಟ್ಟಡದ ಕಾಮಗಾರಿಯು ಎರಡೇ ದಿನದಲ್ಲಿಫಟಾಫಟ್‌ ಮುಗಿದು ಸಾರ್ವಜನಿಕರಿಗೆ ಅಚ್ಚರಿಗೆ ಕಾರಣವಾಗಿತ್ತು. ಕಟ್ಟಡ ನಿರ್ಮಾಣವಾಗಿ ಬಹಳ ದಿನ ಕಳೆದರೂ, ಉದ್ಘಾಟನೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಆದಷ್ಟು ಬೇಗ ಉದ್ಘಾಟನೆ ಆಗಲಿ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ