ಆ್ಯಪ್ನಗರ

ಗದ್ದೆ ನಾಟಿ ಮಾಡಿದ ಪತ್ರಕರ್ತರು

ಕಾರವಾರ : ಕೃಷಿಯನ್ನು ತೊರೆದು ಉದ್ಯೋಗ ಆರಿಸಿಕೊಂಡು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿರುವ ರೈತರಲ್ಲಿ ಕೃಷಿ ಬಗ್ಗೆ ಒಲವು ಮೂಡಿಸುವ ಉದ್ದೇಶದಿಂದ ಕಾರವಾರದ ಕಾರ್ಯನಿರತ ಪತ್ರಕರ್ತರು ಗದ್ದೆ ನಾಟಿ ಮಾಡುವ ಮೂಲಕ ಜಾಗೃತಿ ಮೂಡಿಸಿದರು.

Vijaya Karnataka 22 Jul 2019, 5:00 am
ಕಾರವಾರ : ಕೃಷಿಯನ್ನು ತೊರೆದು ಉದ್ಯೋಗ ಆರಿಸಿಕೊಂಡು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿರುವ ರೈತರಲ್ಲಿ ಕೃಷಿ ಬಗ್ಗೆ ಒಲವು ಮೂಡಿಸುವ ಉದ್ದೇಶದಿಂದ ಕಾರವಾರದ ಕಾರ್ಯನಿರತ ಪತ್ರಕರ್ತರು ಗದ್ದೆ ನಾಟಿ ಮಾಡುವ ಮೂಲಕ ಜಾಗೃತಿ ಮೂಡಿಸಿದರು.
Vijaya Karnataka Web the journalists who planted the beard
ಗದ್ದೆ ನಾಟಿ ಮಾಡಿದ ಪತ್ರಕರ್ತರು


ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ರೈತರು ಕೃಷಿ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದುತ್ತಿಲ್ಲ. ಕೃಷಿ ಬದಲಿಗೆ ಇನ್ನಿತರ ಕೂಲಿ ಕೆಲಸಕ್ಕಾಗಿ ನೆರೆಯ ರಜ್ಯ ಗೋವಾಕ್ಕೆ ವಲಸೆ ಹೋಗುತ್ತಾರೆ. ಸಾಂಪ್ರದಾಯಿಕ ಕೃಷಿಯಲ್ಲಿಯೇ ಲಾಭ ಕಂಡುಕೊಳ್ಳುವುದು ಹೇಗೆ ಎಂಬುದನ್ನು ರೈತರಿಗೆ ಮನವರಿಕೆ ಮಾಡಲು ಸಮಾಜ ಸೇವಕ ಕೆ.ಡಿ.ಪೆಡ್ನೇಕರ ಅವರು ಪತ್ರಕರ್ತರಿಂದ ಗದ್ದೆ ನಾಟಿ ಕಾರ್ಯ ಕೈಗೊಳ್ಳುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಜಿಲ್ಲಾ ಕೇಂದ್ರ ಕಾರ್ಯನಿರತ ಪರ್ತಕರ್ತರ ಸಂಘದ ಟಿ.ಬಿ,ಹರಿಕಾಂತ, ವಸಂತ ಕತಗಾಲ, ಸುಭಾಷ ಧೂಪದಹೊಂಡ, ಶೇಷಗಿರಿ ಮುಂಡಳ್ಳಿ, ಗಣೇಶ ಹೆಗಡೆ, ಕಿಶನ್‌ ಹಾಗೂ ಸ್ಥಳಿಯರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ