ಆ್ಯಪ್ನಗರ

ಜೋಯಿಡಾ ನಿಲ್ದಾಣಕ್ಕೆ ಅತಿಕ್ರಮಣದ ಅಡ್ಡಿ

ಜೋಯಿಡಾ : ಒಂದು ಕಡೆ ಸ್ಥಳ ಆಕ್ರಮಿಸಿಕೊಂಡ ಅಂಗಡಿ ಮುಂಗಟ್ಟಗಳು, ಇನ್ನೊಂದೆಡೆ ಖಾಸಗಿ ವಾಹನಗಳ ನಿಲ್ಲುವಿಕೆ, ಏರು ಗುಡ್ಡದಲ್ಲಿ ಬಸ್‌ ನಿಲ್ದಾಣ, ಇವೆಲ್ಲವೂ ನಮ್ಮ ಜೋಯಿಡಾದ ಸರ್ಕಲ್‌ ಬಸ್‌ ನಿಲ್ದಾಣದ ವ್ಯಥೆಯ ಕಥೆ. ದಿನವೂ ನೂರಾರು ಬಸ್‌ ಪ್ರಯಾಣಿಕರು ಜೋಯಿಡಾ ಸರ್ಕಲ್‌ ಬಸ್‌ ನಿಲ್ದಾಣದ ಬಳಿ ಬಸ್‌ ಏರುತ್ತಾರೆ , ಆದರೆ ಬಸ್‌ ಏರುವ ಪ್ರಯಾಣಿಕರಿಗೆ ಮಾತ್ರ ಇಲ್ಲಿ ಬಸ್‌ ನಿಲ್ದಾಣ ಇಲ್ಲ, ಹೀಗಾಗಿ ಅಂಗಡಿ ಮುಂಗಟ್ಟುಗಳ ಮುಂದೆ ಕುಳಿತು ಬಸ್‌ ಕಾಯುವ ಪರಿಸ್ಥಿತಿ ಇಲ್ಲಿನ ಬಸ್‌ ಪ್ರಯಾಣಿಕರದ್ದಾಗಿದೆ.

Vijaya Karnataka 4 Nov 2018, 5:00 am
ಜೋಯಿಡಾ : ಒಂದು ಕಡೆ ಸ್ಥಳ ಆಕ್ರಮಿಸಿಕೊಂಡ ಅಂಗಡಿ ಮುಂಗಟ್ಟಗಳು, ಇನ್ನೊಂದೆಡೆ ಖಾಸಗಿ ವಾಹನಗಳ ನಿಲ್ಲುವಿಕೆ, ಏರು ಗುಡ್ಡದಲ್ಲಿ ಬಸ್‌ ನಿಲ್ದಾಣ, ಇವೆಲ್ಲವೂ ನಮ್ಮ ಜೋಯಿಡಾದ ಸರ್ಕಲ್‌ ಬಸ್‌ ನಿಲ್ದಾಣದ ವ್ಯಥೆಯ ಕಥೆ. ದಿನವೂ ನೂರಾರು ಬಸ್‌ ಪ್ರಯಾಣಿಕರು ಜೋಯಿಡಾ ಸರ್ಕಲ್‌ ಬಸ್‌ ನಿಲ್ದಾಣದ ಬಳಿ ಬಸ್‌ ಏರುತ್ತಾರೆ , ಆದರೆ ಬಸ್‌ ಏರುವ ಪ್ರಯಾಣಿಕರಿಗೆ ಮಾತ್ರ ಇಲ್ಲಿ ಬಸ್‌ ನಿಲ್ದಾಣ ಇಲ್ಲ, ಹೀಗಾಗಿ ಅಂಗಡಿ ಮುಂಗಟ್ಟುಗಳ ಮುಂದೆ ಕುಳಿತು ಬಸ್‌ ಕಾಯುವ ಪರಿಸ್ಥಿತಿ ಇಲ್ಲಿನ ಬಸ್‌ ಪ್ರಯಾಣಿಕರದ್ದಾಗಿದೆ.
Vijaya Karnataka Web the jurisdiction disruption to the joyada station
ಜೋಯಿಡಾ ನಿಲ್ದಾಣಕ್ಕೆ ಅತಿಕ್ರಮಣದ ಅಡ್ಡಿ


ಅಂಗಡಿ ಮುಂಗಟ್ಟುಗಳದ್ದೇ ದರ್ಬಾರ್‌

ಜೋಯಿಡಾದಲ್ಲಿನ ಸರ್ಕಲ್‌ ಬಸ್‌ ನಿಲ್ದಾಣ ಬಸ್‌ ಪ್ರಯಾಣಿಕರಿಗೆ ಕಾಣಿಸದಂತಾಗಿದೆ, ಇಲ್ಲಿನ ಸರ್ಕಲ್‌ ಬಳಿ ಎಲ್ಲಿ ಬಸ್‌ ನಿಲ್ದಾಣವಿದೆ ಎನ್ನುವುದನ್ನು ಹುಡುಕಬೇಕಾದ ಪರಿಸ್ಥಿತಿ ಇದೆ, ಅದಲ್ಲದೇ ಇಲ್ಲಿನ ಗುಡಂಗಡಿಗಳು ಬಸ್‌ ನಿಲ್ದಾಣವನ್ನು ಆಕ್ರವಮಿಸಿ ಬಿಟ್ಟಿವೆ, ಕೇಳಿದರೆ ಇದು ನಮ್ಮದೇ ಜಾಗ ಎನ್ನುವ ಹಾಗೆ ಉತ್ತರ ನೀಡುತ್ತಾರೆ, ಈ ಬಸ್‌ ನಿಲ್ದಾಣದ ಅಕ್ಕ ಪಕ್ಕದಲ್ಲಿ ಗುಡಂಗಡಿಗಳಿದ್ದು ಇದಕ್ಕೆ ಗ್ರಾಮ ಪಂಚಾಯಿತಿ ಪರವಾನಗಿ ಇದೆಯೋ ಇಲ್ಲವೋ, ಇದ್ದರೂ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಹೇಗೆ ಅಂಗಡಿಗಳನ್ನು ಹಾಕಲು ಪರವಾನಗಿ ನೀಡಿದ್ದಾರೋ ದೇವರೇ ಬಲ್ಲ. ಈ ಗುಡಂಗಡಿಗಳಿಂದಾಗಿ ಇಲ್ಲಿನ ಬಸ್‌ ನಿಲ್ದಾಣಕ್ಕೆ ಯಾವ ಬಸ್‌ ಪ್ರಯಾಣಿಕರು ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ, ಚಹ ಅಂಗಡಿ, ಬಜ್ಜಿ, ಹೀಗೆ ಇನ್ನೂ ಕೆಲವೂ ತಿನಿಸು ಮಾಡುವುದರಿಂದ ಒಲೆಯಿಂದ ಬರುವ ದಟ್ಟವಾದ ಹೊಗೆ ಇಲ್ಲಿನ ಬಸ್‌ ನಿಲ್ದಾಣಕ್ಕೆ ಬರುತ್ತದೆ, ಸರ್ಕಾರದ ಆಸ್ತಿ ಬಸ್‌ ನಿಲ್ದಾಣದ ಮುಂಬದಿಯಲ್ಲಿ ಏಕೆ ಇಂತ ಕೆಟ್ಟ ವ್ಯವಸ್ಥೆ ಎನ್ನುವುದು ಖೇದದ ಸಂಗತಿ.ಇದು ಗ್ರಾಮ ಪಂಚಾಯಿತಿಗೆ ದೊಡ್ಡ ಸವಾಲಾಗಿದೆ.

ಖಾಸಗಿ ವಾಹನಗಳ ಸಾಲು

ಇಲ್ಲಿನ ಸರ್ಕಲ್‌ ಬಸ್‌ ನಿಲ್ದಾಣದ ಎದುರು ಖಾಸಗಿ ವಾಹನಗಳು ಸಾಲಾಗಿ ನಿಲ್ಲುತ್ತವೆ, ಅಲ್ಲದೆ ಈ ವಾಹನಗಳು ನಿಲ್ಲುವ ಕಾರಣದಿಂದ ಪ್ರಯಾಣಿಕರು ಬಸ್‌ ನಿಲ್ದಾಣದ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ, ಅಷ್ಟೇ ಅಲ್ಲದೇ ಇಲ್ಲಿಯ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಂಡರು ಸಹ ಬಸ್‌ ಬಂದು , ಹೋದರು ಸಹ ಪ್ರಯಾಣಿಕರಿಗೆ ಕಾಣಿಸದ ರೀತಿಯಲ್ಲಿ ಅಡ್ಡವಾಗಿ ಖಾಸಗಿ ವಾಹನಗಳು ನಿಲ್ಲುತ್ತವೆ, ಹೀಗಾಗಿ ಬಸ್‌ ಪ್ರಯಾಣಿಕರು ಮರದ ಬುಡದಲ್ಲೋ, ಅಂಗಡಿಗಳಲ್ಲೂ ಕುಳಿತು ಬಸ್‌ಗೆ ಕಾಯುತ್ತಿರುತ್ತಾರೆ, ಇಲ್ಲಿ ವಾಹನ ನಿಲ್ಲಿಸಬಾರದು ಎಂದು ಸಂಭಂದ ಪಟ್ಟ ಅಧಿಕಾರಿಗಳು ಹೇಳಿದ್ದರೆ ,ಅಥವಾ ದಂಡ ವಿಧಿಸಿದ್ದರೆ ಇಲ್ಲಿ ಬೇಕಾ ಬಿಟ್ಟಿ ಖಾಸಗಿ ವಾಹನ ನಿಲ್ಲುತ್ತಿರಲಿಲ್ಲ.

ಧೂಮಪಾನಕ್ಕೆ ಸೂಕ್ತ ಸ್ಥಳ !

ಜೋಯಿಡಾ ಸರ್ಕಲ್‌ ಬಸ್‌ ನಿಲ್ದಾಣ ದೂಮಪಾನ ಮಾಡುವವರಿಗೆ ಸೂಕ್ತ ಸ್ಥಳ ಎಂದೆನಿಸುತ್ತದೆ, ಏಕೆಂದರೆ ಇಲ್ಲಿ ದಿನವೂ ಧೂಮಪಾನ ಮಾಡುವವರೇ ಕಾಣುತ್ತಾರೆ ಬಿಟ್ಟರೆ ಬಸ್‌ ಪ್ರಯಾಣಿಕರು ಅಲ್ಲ, ಎದುರಿಗೆ ಗುಡಂಗಡಿ ಇರುವ ಕಾರಣ ಹಿಂದೆ ಅರಾಮವಾಗಿ ಯಾರಿಗೂ ಕಾಣಿಸದ ಹಾಗೆ ಒಂದು ದಮ್‌ ಎಳೆಯೋಣ ಎಂದು ಇಲ್ಲಿ ಲಾಡ್ಜಗಳಲ್ಲಿ ಮಲಗಿದಂತೆ ಮಲಗಿ ಧೂಮಪಾನ ಮಾಡುತ್ತಾರೆ, ಇದು ಹಗಲಿನ ಸಮಯದಲ್ಲಿ ಆದರೆ ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳು ಇಲ್ಲಿ ಸೇರುತ್ತಾರೆ. ಹೀಗಾಗಿ ಇಲ್ಲಿನ ಬಸ್‌ ನಿಲ್ದಾಣದತ್ತ ಯಾರೊಬ್ಬ ಪ್ರಯಾಣಿಕರು ಹೋಗಲು ಭಯ ಪಡುತ್ತಾರೆ.

ಸ್ವಚ್ಛತೆ ಮಾಡುವವರು ಯಾರು ?

ಇಲ್ಲಿನ ಬಸ್‌ ನಿಲ್ದಾಣವನ್ನು ಸ್ವಚ್ಛ ಮಾಡುವವರು ಯಾರು ? ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್‌ ಕಸ, ಮದ್ಯದ ಬಾಟಲಿ,ಗೂಡಂಗಡಿಯ ಚಹಾದ ಗ್ಲಾಸ್‌ಗಳು , ಈ ಬಗ್ಗೆ ಯಾರು ಕ್ರಮ ಕೈಗೊಳ್ಳಬೇಕು , ಹೀಗೆ ಬೇಕಾಬಿಟ್ಟಿ ಕಸ , ಪ್ಲಾಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಎಸೆಯುವುದು ಎಷ್ಟೂ ಸೂಕ್ತ ಅಲ್ಲವೇ , ಸ್ವಚ್ಛತೆ ಬಗ್ಗೆ ಯಾರೊಬ್ಬರಿಗೂ ಗಮನವಿಲ್ಲ ಎಂದೆನಿಸುವ ಹಾಗೆ ಇದೆ ಈ ಬಸ್‌ ನಿಲ್ದಾಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ