ಆ್ಯಪ್ನಗರ

ಕುಮಟಾ-ಶಿರಸಿ ಹೆದ್ದಾರಿ ಪರಿಸ್ಥಿತಿ ಅಯೋಮಯ

ಕುಮಟಾ : ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಹೊಂಡಗಳು ಬಿದ್ದಿರುವುದರಿಂದ ರಸ್ತೆ ಮಾಯವಾಗಿ ಸಾವಿರಾರು ವಾಹನ ಸವಾರರು ಕೈಯಲ್ಲಿಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Vijaya Karnataka 25 Sep 2020, 5:00 am
ಕುಮಟಾ : ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಹೊಂಡಗಳು ಬಿದ್ದಿರುವುದರಿಂದ ರಸ್ತೆ ಮಾಯವಾಗಿ ಸಾವಿರಾರು ವಾಹನ ಸವಾರರು ಕೈಯಲ್ಲಿಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web PHT 24 KMT 1_24
ಹದಗೆಟ್ಟ ಕುಮಟಾ-ಶಿರಸಿ ರಸ್ತೆಯಲ್ಲಿಸಾಗಲು ವಾಹನ ಸವಾರರು ಕಷ್ಟ ಪಡುತ್ತಿರುವದು.


ಕುಮಟಾ-ಶಿರಸಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವ ಯೋಜನೆ ಜಾರಿಗೆ ಬಂದು ವರ್ಷವೇ ಕಳೆದಿದೆ. ಕಳೆದ ವರ್ಷ ಈ ರಸ್ತೆಯ ಸ್ವರೂಪ ಇದೇ ರೀತಿಯಾಗಿತ್ತು. ಈ ಮಾರ್ಗದಲ್ಲಿಓಡಾಡುವ ಹಲವು ಮಂದಿ ಪ್ರಾಣ ತೆತ್ತಿದ್ದರು. ಹೀಗಾಗಿ ಜನರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವುದರಿಂದ ಲೋಕೋಪಯೋಗಿ ಇಲಾಖೆ ನಿರ್ವಹಣೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಹೊಸ ಹೆದ್ದಾರಿ ನಿರ್ಮಾಣದ ನೆಪದಲ್ಲಿನಿರ್ವಹಣೆ ಮಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಲ ಹರಣ ಮಾಡುತ್ತ ಜನರ ಪಾಲಿಗೆ ಸಂಕಷ್ಟವನ್ನು ತಂದೊಡ್ಡಿದೆ. ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಂತೆ ಹೆದ್ದಾರಿ ಪ್ರಾಧಿಕಾರ 93 ಲಕ್ಷ ರೂ. ಅನುದಾನದಲ್ಲಿಈ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ ನೀಡಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿರಸ್ತೆಯ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು ನಿರ್ವಹಣೆ ನಡೆಸದೇ ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ಮೌನ ತಾಳಿವೆ.

ಕುಮಟಾ -ಶಿರಸಿ ರಸ್ತೆಯ ಕತಗಾಲದ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಚಂಡಿಕಾ ನದಿಯ ಪಕ್ಕದ ತಿರುವಿನಲ್ಲಿಹೊಂಡ ನಿರ್ಮಾಣಗೊಂಡು ರಸ್ತೆಯ ಕುರುಹುಗಳೇ ಮಾಯವಾಗಿವೆ. ಮುಂದುವರಿದ ಈ ರಸ್ತೆ ಶಿರಸಿ ತಾಲೂಕಿನ ವ್ಯಾಪ್ತಿಗೆ ಒಳ ಪಡುತ್ತಿದ್ದು ದೇವಿಮನೆ ಘಟ್ಟ, ಬಂಡಲ ಘಟ್ಟ, ಸಂಪಖಂಡ, ಗದ್ದೆಮನೆ, ಜಾನ್ಮನೆ, ಹೀಪನಳ್ಳಿ ಮುಂತಾದೆಡೆಯಲ್ಲಿರಸ್ತೆಯಲ್ಲಿಬಿದ್ದಿರುವ ಹೊಂಡಗಳು ವಾಹನ ಸವಾರರಿಗೆ ಪ್ರತಿಕ್ಷಣ ಅಪಾಯ ಸೂಚಿಸುತ್ತಿವೆ. ಈ ರಸ್ತೆಯಲ್ಲಿಕೆಲವು ಬೈಕ್‌ ಸವಾರರು ಅಪಘಾತಕ್ಕೀಡಾಗಿ ಜೀವ ಕಳೆದುಕೊಂಡಿದ್ದಾರೆ. ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ರಸ್ತೆಯ ದುಸ್ಥಿತಿಯನ್ನು ಕಂಡು ಕರ್ನಾಟಕ ರಕ್ಷಣಾ ವೇದಿಕೆ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳೊಂದಿಗೆ ಜತೆಗೂಡಿ ರಸ್ತೆ ತಡೆದು ಭಾರಿ ಪ್ರತಿಭಟನೆ ನಡೆಸಿತ್ತು. ಇನ್ನಷ್ಟು ಅಪಘಾತಗಳು ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಂಡು ತಕ್ಷಣ ಈ ರಸ್ತೆ ದುರಸ್ತಿಗೊಳಿಸಬೇಕೆಂಬುದು ಈ ಭಾಗದ ಜನರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ