ಆ್ಯಪ್ನಗರ

ಸ್ಥಳದ ಕೊರತೆ ಚಿಕಿತ್ಸೆ ಸವಾಲು

ಭಟ್ಕಳ: ಜಿಲ್ಲೆಯಲ್ಲಿಯೇ ಭಟ್ಕಳ ತಾಲೂಕು ಅತಿ ಹೆಚ್ಚು (200 ದಾಟಿದೆ) ಕೊರೊನಾ ಸೋಂಕಿತರನ್ನು ಹೊಂದಿದ್ದು, ಚಿಕಿತ್ಸೆ ಸವಾಲಾಗಿ ಪರಿಣಮಿಸಿದೆ.

Vijaya Karnataka 13 Jul 2020, 5:00 am
ಭಟ್ಕಳ: ಜಿಲ್ಲೆಯಲ್ಲಿಯೇ ಭಟ್ಕಳ ತಾಲೂಕು ಅತಿ ಹೆಚ್ಚು (200 ದಾಟಿದೆ) ಕೊರೊನಾ ಸೋಂಕಿತರನ್ನು ಹೊಂದಿದ್ದು, ಚಿಕಿತ್ಸೆ ಸವಾಲಾಗಿ ಪರಿಣಮಿಸಿದೆ.
Vijaya Karnataka Web 495212BKL2_24
ಭಟ್ಕಳದಲ್ಲಿಕೊರೊನಾ ಸೋಂಕಿತರಿಗೆ ಬೆಡ್‌ ಹೊಂದಿಸುವ ಕಾರ್ಯದಲ್ಲಿನಿರತರಾಗಿರುವ ಕಾರ್ಮಿಕರು.


ಇಲ್ಲಿನ 100 ಬೆಡ್‌ ಸರಕಾರಿ ಆಸ್ಪತ್ರೆಯಲ್ಲಿವೈದ್ಯಾಧಿಕಾರಿಯೇ ಕೊರೊನಾ ಸೋಂಕಿಗೆ ತುತ್ತಾಗಿ, ಮೂವರು ವೈದ್ಯರು ಚಿಕಿತ್ಸೆಗೆ ಲಭ್ಯವಿದ್ದರು. ಆಸ್ಪತ್ರೆಯಲ್ಲಿದಾದಿಯರು ಹಾಗೂ 'ಡಿ'ಗ್ರೂಪ್‌ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತ ಹೋದಂತೆ ಇಲ್ಲಿನ ಸೋನಾರಕೇರಿ ಹಿಂದುಳಿದ ವರ್ಗದ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವನ್ನೇ 50 ಬೆಡ್‌ಗಳ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಲಾಯಿತು. ಆದರೆ ಇಲ್ಲಿಯೂ ಸ್ಥಳಾವಕಾಶದ ಕೊರತೆ ಎದುರಾದ ಕಾರಣ ಭಟ್ಕಳ ತಾಲೂಕಿನ ಹೆಬಳೆ ವಿಮೆನ್‌ ಸೆಂಟರ್‌ನ್ನು 180 ಬೆಡ್‌ಗಳ ಕೊರೊನಾ ಕೇರ್‌ ಸೆಂಟರ್‌ನ್ನಾಗಿ ಬದಲಾಯಿಸಲಾಗಿದೆ. ಸದ್ಯ ಇಲ್ಲಿ113 ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಮಜ್ಲಿಸೇ ಇಸ್ಲಾವ ತಂಜೀಮ್‌ ಸಹಯೋಗದೊಂದಿಗೆ ತಾಲೂಕಾಡಳಿತ ಉಚಿತ ಊಟೋಪಚಾರ ವ್ಯವಸ್ಥೆ ಮಾಡಿದೆ.

ಈಗಾಗಲೇ ಭಟ್ಕಳದ ಮೃತ ಮೂವರಲ್ಲಿಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿರುವ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಹಾಗೂ ಹೆಬಳೆ ಭಾಗಗಳಲ್ಲಿಈಗಾಗಲೇ ನಿತ್ಯವೂ ಮಧ್ಯಾಹ್ನ 2ರಿಂದ ಬೆಳಗ್ಗೆ 6 ಗಂಟೆವರೆಗೆ ಲಾಕ್‌ಡೌನ್‌ ವಿಧಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ