ಆ್ಯಪ್ನಗರ

ಚಿರತೆ ಎರಗಿ ಗಾಯ

ಅಂಕೋಲಾ : ಆಹಾರ ಹುಡುಕುತ್ತ ನಾಡಿಗೆ ಬಂದ ಚಿರತೆಯೊಂದು ವ್ಯಕ್ತಿಯೊಬ್ಬನ ಮೇಲೆ ಎರಗಿ ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಅಚವೆ ಗ್ರಾಮದ ಕಂಚನಕೇರಿಯಲ್ಲಿ ಗುರುವಾರ ನಡೆದಿದೆ.

Vijaya Karnataka 12 Apr 2019, 5:00 am
ಅಂಕೋಲಾ : ಆಹಾರ ಹುಡುಕುತ್ತ ನಾಡಿಗೆ ಬಂದ ಚಿರತೆಯೊಂದು ವ್ಯಕ್ತಿಯೊಬ್ಬನ ಮೇಲೆ ಎರಗಿ ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಅಚವೆ ಗ್ರಾಮದ ಕಂಚನಕೇರಿಯಲ್ಲಿ ಗುರುವಾರ ನಡೆದಿದೆ.
Vijaya Karnataka Web the leopard was injured and injured
ಚಿರತೆ ಎರಗಿ ಗಾಯ


ಶಂಕರ ರಾಮಾ ಗೌಡ ಗಾಯಗೊಂಡವರು. ಅವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕರ ಗೌಡ ಅವರ ಮನೆಯ ಕೋಳಿಯ ಗೂಡಿಗೆ ನುಗ್ಗಿದ್ದ ಚಿರತೆಯನ್ನು ಓಡಿಸಲು ಹೋದಾಗ ಚಿರತೆ ದಾಳಿ ಮಾಡಿದೆ. ಶಂಕರ ಅವರ ಸಹೋದರ ಹೊನ್ನಾ ರಾಮಾ ಗೌಡ ಅವರು ಮನೆಯಲ್ಲಿ ಸಾಕಿದ್ದ ನಾಯಿಗಳ ಜತೆ ಸೇರಿ ಚಿರತೆಯನ್ನು ಹೆದರಿಸಿ ಓಡಿಸಿದ್ದಾರೆ.

ಅಂಕೋಲಾದ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ನಂಜುಂಡಪ್ಪ, ಉಪ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶಂಕರ ಗೌಡ ಅವರನ್ನು ಸಂತೈಸಿದರು.

ನಂತರ ಎಸಿಎಫ್‌ ನಂಜುಂಡಪ್ಪ ಮಾತನಾಡಿ, ಶಂಕರ ಗೌಡ ಅವರು ಸಂಪೂರ್ಣ ಚೇತರಿಸಿಕೊಳ್ಳುವವರೆಗೂ ಆಸ್ಪತ್ರೆಯ ಹಾಗೂ ಇತರೆ ವೆಚ್ಚಗಳನ್ನು ಇಲಾಖೆಯಿಂದ ನೀಡಲಾಗುವುದು, ಈ ಬಗ್ಗೆ ಪಂಚನಾಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ