ಆ್ಯಪ್ನಗರ

ಮಿನಿವಿಧಾನಸೌಧಕ್ಕೆ ಅಂತೂ ಲಿಫ್ಟ್‌ ಭಾಗ್ಯ

ಶಿರಸಿ : ವಿವಿಧ ಸರಕಾರಿ ಕಚೇರಿಗಳು ಒಂದೇ ಸೂರಿನಡಿ ಇರುವ ಮಿನಿ ವಿಧಾನಸೌಧಕ್ಕೆ ದಶಕದ ಬೇಡಿಕೆಯಾದ ಲಿಫ್ಟ್‌ ಸೌಲಭ್ಯ ದೊರೆಯಲಿದೆ. ಈ ಮೂಲಕ ಕಚೇರಿ ಕೆಲಸಕ್ಕೆ ಬರುವ ವೃದ್ಧರು, ವಿಶೇಷಚೇತನರು ಮೆಟ್ಟಿಲು ಹತ್ತಿಳಿಯುವ ಸಂಕಷ್ಟ ದೂರವಾಗುವ ಕಾಲ ಸನ್ನಿಹಿತವಾಗಿದೆ.

Vijaya Karnataka 21 Dec 2019, 5:00 am
ಶಿರಸಿ : ವಿವಿಧ ಸರಕಾರಿ ಕಚೇರಿಗಳು ಒಂದೇ ಸೂರಿನಡಿ ಇರುವ ಮಿನಿ ವಿಧಾನಸೌಧಕ್ಕೆ ದಶಕದ ಬೇಡಿಕೆಯಾದ ಲಿಫ್ಟ್‌ ಸೌಲಭ್ಯ ದೊರೆಯಲಿದೆ. ಈ ಮೂಲಕ ಕಚೇರಿ ಕೆಲಸಕ್ಕೆ ಬರುವ ವೃದ್ಧರು, ವಿಶೇಷಚೇತನರು ಮೆಟ್ಟಿಲು ಹತ್ತಿಳಿಯುವ ಸಂಕಷ್ಟ ದೂರವಾಗುವ ಕಾಲ ಸನ್ನಿಹಿತವಾಗಿದೆ.
Vijaya Karnataka Web the lift is also a blessing to the mini system
ಮಿನಿವಿಧಾನಸೌಧಕ್ಕೆ ಅಂತೂ ಲಿಫ್ಟ್‌ ಭಾಗ್ಯ


ಜಿಲ್ಲೆಯ ಪ್ರಮುಖ ನಗರವಾದ ಶಿರಸಿಯಲ್ಲಿ2016ರಲ್ಲಿಮಿನಿವಿಧಾನಸೌಧ ಕಟ್ಟಡ ನಿರ್ಮಾಣವಾಗಿತ್ತು. ನೆಲಮಹಡಿ ಹಾಗೂ ಎರಡು ಅಂತಸ್ತಿನ ಬೃಹತ್‌ ಕಟ್ಟಡ ನಿರ್ಮಾಣದ ಕ್ರಿಯಾಯೋಜನೆಯಲ್ಲಿಲಿಫ್ಟ್‌ ಸೇರಿರಲಿಲ್ಲ. ಆದರೆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿಲಿಫ್ಟ್‌ ಸೌಲಭ್ಯ ಅಳವಡಿಸಲು ಪೂರಕ ವ್ಯವಸ್ಥೆ ಕಲ್ಪಿಸಿಡಲಾಗಿತ್ತು.

ನಂತರ ಅನುದಾನದ ಕೊರತೆಯಿಂದ ಇದು ಸಾಧ್ಯವಾಗಿರಲಿಲ್ಲ, ಲಿಫ್ಟ್‌ ಅಳವಡಿಕೆಯ ಬಗ್ಗೆ ಆಗ್ರಹ ಕೇಳಿ ಬರುತ್ತಲೇ ಇತ್ತು. ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿಲಿಫ್ಟ್‌ ಅಳವಡಿಕೆಗೆ ಅನುದಾನ ಒದಗಿಸಲು ನಗರಸಭೆಗೆ ಸಹ ಸೂಚಿಸಲಾಗಿತ್ತು. ಆದರೆ ಅನುದಾನ ಲಭ್ಯವಾಗದೇ ಇದು ನನೆಗುದಿಗೆ ಬಿದ್ದಿತ್ತು. ಅದೀಗ ಈಡೇರುವ ಕಾಲ ಸಮೀಪಿಸಿದೆ. ಸರಕಾರದಿಂದ ಇದೀಗ 28 ಲಕ್ಷ ರೂ. ಮಂಜೂರಾಗಿದೆ. ಇನ್ನು ಕೆಲವು ತಿಂಗಳಲ್ಲಿಈ ಸೌಲಭ್ಯ ತೆರೆದುಕೊಳ್ಳುವ ಆಶಾಭಾವ ಜನರಲ್ಲಿಮೂಡುವಂತಾಗಿದೆ.

ಇಲ್ಲಿಯ ಮಿನಿವಿಧಾನಸೌಧ ಕಟ್ಟಡದಲ್ಲಿಕಂದಾಯ ಇಲಾಖೆ ಒಳಗೊಂಡು ಸಬ್‌ ರಜಿಸ್ಟ್ರಾರ್‌, ಬಿಸಿಎಂ, ಭೂಮಾಪನ ಹೀಗೆ ವಿವಿಧ ವಿಭಾಗಗಳು ಕಾರ್ಯ ನಿರ್ವಹಿಸುತ್ತವೆ. ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ. ನಿತ್ಯ ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಕಚೇರಿ ಕೆಲಸಗಳಿಗೆ ಆಗಮಿಸುತ್ತಾರೆ. ಹಾಗೇ ಎರಡನೇ ಅಂತಸ್ತಿನಲ್ಲಿಸಭಾಭವನ ಇದೆ. ಇಲ್ಲಿಅಧಿಕಾರಿಗಳ ಸಭೆ, ಸಾರ್ವಜನಿಕರ ಸಭೆ, ಜಯಂತಿಗಳು ನಡೆಯುತ್ತಿರುತ್ತವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬರುತ್ತಿರುತ್ತಾರೆ. ಹೀಗೆ ಪ್ರತಿದಿನ ಜನರಿಂದ ತುಂಬಿರುವ ಮಿನಿವಿಧಾನಸೌಧಕ್ಕೆ ಲಿಫ್ಟ್‌ ಸೌಲಭ್ಯ ಕಲ್ಪಿಸಲು ಅನುದಾನ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆ ಶೀಘ್ರ ಕಾಮಗಾರಿ ನಿರ್ವಹಿಸುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಈಗಾಗಲೆ ಸೂಚಿಸಿದ್ದಾರೆ.

ವೃದ್ಧರು, ವಿಶೇಷಚೇತನರ ಫಜೀತಿ : ಎರಡು ಅಂತಸ್ತಿನ ಕಟ್ಟಡದಲ್ಲಿಮುಖ್ಯ ಕಚೇರಿಗಳು ಮೇಲಂತಸ್ತಿನಲ್ಲೇ ಇವೆ. ಅದರಲ್ಲೂದಸ್ತಾವೇಜು, ವಿವಾಹ ನೋಂದಣಿ ಸೇರಿದಂತೆ ಪ್ರಮುಖ ಕೆಲಸ ಆಗಬೇಕಾದ ಸಬ್‌ ರಜಿಸ್ಟ್ರಾರ್‌ ಕಚೇರಿ ಮೊದಲ ಅಂತಸ್ತಿನಲ್ಲಿದೆ. ಇದೇ ಅಂತಸ್ತಿನಲ್ಲಿಸರ್ವೆ ಕಚೇರಿ ಸಹ ಇದೆ. ಅದೇ ರೀತಿ ಬಿಸಿಎಂ ಕಚೇರಿ ಎರಡನೇ ಅಂತಸ್ತಿನಲ್ಲಿದೆ. ಇಲ್ಲಿನ ಕೆಲಸಗಳಿಗೆ ಸಾಕಷ್ಟು ಸಂಖ್ಯೆಯಲ್ಲಿವೃದ್ಧರು, ಹಿರಿಯರು, ವಿಶೇಷಚೇತನರು ಆಗಮಿಸುತ್ತಾರೆ. ಅವರೆಲ್ಲ30ಕ್ಕೂ ಹೆಚ್ಚು ಮೆಟ್ಟಿಲು ಹತ್ತಿಳಿಯಲು ಪ್ರಯಾಸಪಡುವ ಸ್ಥಿತಿಯಿದೆ. ಬೇರೆಯವರ ನೆರವಿಲ್ಲದೇ ಮೇಲಕ್ಕೆ ತೆರಳುವುದು ಕಷ್ಟವಾಗುತ್ತಿದೆ. ಕೆಲವರನ್ನು ಹೊತ್ತೊಯ್ಯುವ ಪ್ರಸಂಗ ಎದುರಾಗುತ್ತದೆ. ಹೀಗಾಗಿ ಲಿಫ್ಟ್‌ ಅಳವಡಿಕೆಯ ಬಗ್ಗೆ ಒತ್ತಾಯ ಕೇಳಿ ಬಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ