ಆ್ಯಪ್ನಗರ

ಸೊಳ್ಳೆ ಕಾಟ, ನೆಮ್ಮದಿಗೆ ಭಂಗ

ಯಲ್ಲಾಪುರ : ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ಬಿಸಿಲಿನ ತಾಪ ತಾಲೂಕಿನ ಜನರನ್ನು ಕಾಡುತ್ತಿದೆ. ಬೇಸಿಗೆಯ ಸೆಖೆಯ ತಾಪವು ಜನರ ರಾತ್ರಿಯ ನಿದ್ದೆಯನ್ನು ಕಸಿಯುತ್ತಿದೆ. ಫ್ಯಾನ್‌, ಕೂಲರ್‌ ಮುಂತಾದ ಯಾವುದೇ ಸಾಧನಗಳನ್ನು ಬಳಸಿದರೂ ನೆಮ್ಮದಿಯಿಂದ ನಿದ್ರೆ ಮಾಡುವುದು ಸಾಧ್ಯವಿಲ್ಲವಾಗಿದೆ. ಈ ತಲೆ ಬಿಸಿಯ ನಡುವೆಯೇ ಇನ್ನೊಂದು ದೊಡ್ಡ ಸಮಸ್ಯೆ ಇದೇ ಸಂದರ್ಭದಲ್ಲಿ ಪಟ್ಟಣದ ಜನರನ್ನು ಹೈರಾಣಾಗಿಸುತ್ತಿದೆ.

Vijaya Karnataka 16 May 2019, 5:00 am
ಯಲ್ಲಾಪುರ : ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ಬಿಸಿಲಿನ ತಾಪ ತಾಲೂಕಿನ ಜನರನ್ನು ಕಾಡುತ್ತಿದೆ. ಬೇಸಿಗೆಯ ಸೆಖೆಯ ತಾಪವು ಜನರ ರಾತ್ರಿಯ ನಿದ್ದೆಯನ್ನು ಕಸಿಯುತ್ತಿದೆ. ಫ್ಯಾನ್‌, ಕೂಲರ್‌ ಮುಂತಾದ ಯಾವುದೇ ಸಾಧನಗಳನ್ನು ಬಳಸಿದರೂ ನೆಮ್ಮದಿಯಿಂದ ನಿದ್ರೆ ಮಾಡುವುದು ಸಾಧ್ಯವಿಲ್ಲವಾಗಿದೆ. ಈ ತಲೆ ಬಿಸಿಯ ನಡುವೆಯೇ ಇನ್ನೊಂದು ದೊಡ್ಡ ಸಮಸ್ಯೆ ಇದೇ ಸಂದರ್ಭದಲ್ಲಿ ಪಟ್ಟಣದ ಜನರನ್ನು ಹೈರಾಣಾಗಿಸುತ್ತಿದೆ.
Vijaya Karnataka Web the mosquito catastrophe frustrated with comfort
ಸೊಳ್ಳೆ ಕಾಟ, ನೆಮ್ಮದಿಗೆ ಭಂಗ


ಕೆಲವು ವರ್ಷಗಳಲ್ಲಿ ಇದೇ ಮೊದಲ ಬಾರಿ ಎಂಬಂತೆ ಪಟ್ಟಣದ ಬಹುತೇಕ ಎಲ್ಲ ವಾರ್ಡುಗಳಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರಾತ್ರಿಯ ಸಮಯದಲ್ಲಿ ಸೊಳ್ಳೆಗಳು ಜನರ ನಿದ್ರಾಭಂಗಕ್ಕೆ ಕಾರಣವಾಗುತ್ತಿವೆ. ಮೊದಲೇ ವಿಪರೀತ ಸೆಖೆಯಿಂದಾಗಿ ರಾತ್ರಿ ನೆಮ್ಮದಿಯ ನಿದ್ರೆಯನ್ನು ಕಳೆದುಕೊಂಡಿರುವ ಜನರಿಗೆ ಈಗ ಸೊಳ್ಳೆಗಳ ಕಾಟ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಸೊಳ್ಳೆ ಕಾಟ ಜಾಸ್ತಿ, ನಿದ್ರೆ ನಾಸ್ತಿ : ಈ ವರ್ಷ ಪಟ್ಟಣದ ಎಲ್ಲ ಭಾಗಗಳಲ್ಲಿ ಸೊಳ್ಳೆಗಳ ಕಾಟ ವಿಪರೀತ ಜಾಸ್ತಿ ಇದೆ ಎಂಬುದು ನಿವಾಸಿಗಳ ಅಭಿಪ್ರಾಯವಾಗಿದೆ. ರಾತ್ರಿ ಸಮಯದಲ್ಲಿ ಮಾತ್ರವಲ್ಲ, ಹಗಲಿನಲ್ಲಿಯೂ ಇವುಗಳ ಕಡಿತದಿಂದ ಜನರು ಬೇಸತ್ತಿದ್ದಾರೆ. ರಾತ್ರಿಯ ಸಮಯದಲ್ಲಿ ಇವುಗಳ ಕಾಟ ಎಷ್ಟಿದೆ ಎಂದರೆ ಇವು ಯಾವುದೇ ಸೊಳ್ಳೆ ಕಾಯಿಲ್‌ಗಳಿಗೆ ಅಥವಾ ಸೊಳ್ಳೆ ಪರದೆಗಳಿಗೂ ಕ್ಯಾರೇ ಎನ್ನುತ್ತಿಲ್ಲ. ಇವುಗಳ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಗಿದೆ. ಸೊಳ್ಳೆಗಳ ಹೆಚ್ಚಳ ಹಾಗೂ ಇವುಗಳ ಕಡಿತದಿಂದಾಗಿ ಚಿಕೂನ್‌ಗುನ್ಯಾ, ಮಲೇರಿಯಾ, ಡೆಂಗೆ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಕೂಡಲೇ ಇವುಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತದವರು ಗಮನ ನೀಡಬೇಕು ಎಂಬ ವ್ಯಾಪಕ ಆಗ್ರಹ ಕೇಳಿ ಬಂದಿದೆ.

ಫಾಗಿಂಗ್‌ ಮಾಡಲು ವಿಳಂಬ : ಪ್ರತೀ ವರ್ಷ ಸ್ಥಳೀಯ ಪಟ್ಟಣ ಪಂಚಾಯತಿಯವರು ಬೇಸಿಗೆಯ ಸಂದರ್ಭದಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲ ವಾರ್ಡುಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಔಷಧಿಯುಕ್ತ ರಾಸಾಯನಿಕವನ್ನು ಮಶಿನ್‌ ಮೂಲಕ ಸಿಂಪಡಿಸುತ್ತ ಧೂಮೀಕರಣದ ಮೂಲಕ ಫಾಗಿಂಗ್‌ ಮಾಡುತ್ತಿದ್ದರು. ಇದರಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಫಾಗಿಂಗ್‌ ಮಾಡಿಲ್ಲ. ಹೀಗಾಗಿ ಸೊಳ್ಳೆಗಳ ಸಂಖ್ಯೆ ವೃದ್ಧಿಸಿದೆ. ಈಗಾಗಲೇ ಫಾಗಿಂಗ್‌ ಮಾಡಲು ವಿಳಂಬವಾಗಿದೆ. ಇನ್ನಷ್ಟು ವಿಳಂಬವಾದರೆ ಪರಿಸ್ಥಿತಿ ಇನ್ನೂ ಉಲ್ಬಣಿಸಬಹುದು, ಹೀಗಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೊಳ್ಳೆ ಹೆಚ್ಚಲು ಕಸ ಕಾರಣ :ಪಟ್ಟಣ ವ್ಯಾಪ್ತಿಯ ಹಲವೆಡೆ ರಸ್ತೆಯ ಅಂಚುಗಳಲ್ಲಿ ವಿಪರೀತ ಕಸ ಸಂಗ್ರಹ ಕಂಡು ಬರುತ್ತಿದೆ. ಗಟಾರಗಳಲ್ಲಿ ಕೊಳೆಯುತ್ತಿರುವ ಕಸ ಹಾಗೂ ಕಸ-ಕಡ್ಡಿಗಳಿಂದ ಮುಚ್ಚಿದ ಗಟಾರಗಳು ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಕಾರಣವಾಗುತ್ತಿವೆ. ಹೀಗಾಗಿ ಗಟಾರವನ್ನು ಸ್ವಚ್ಛಗೊಳಿಸುವತ್ತಲೂ ಸ್ಥಳೀಯ ಆಡಳಿತದವರು ಗಮನ ನೀಡಬೇಕಾಗಿದೆ. ಸದ್ಯವೇ ಮಳೆಗಾಲ ಎದುರಾಗಲಿದ್ದು, ಮಳೆಗಾಲದ ಒಳಗಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವತ್ತ ಹಾಗೂ ತಕ್ಷ ಣ ಫಾಗಿಂಗ್‌ ಕಾರ್ಯ ಕೈಗೊಳ್ಳಲು ಮುಂದಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ