ಆ್ಯಪ್ನಗರ

ಯಲ್ಲಾಪುರ ತಾಲೂಕಿನಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖ

ಯಲ್ಲಾಪುರ : ತಾಲೂಕಿನಲ್ಲಿ ಸುಮಾರು ಐದು ಸಾವಿರ ಹೆಕ್ಟೇರ್‌ ಪ್ರದೇಶದ ಕೃಷಿ ಭೂಮಿ ಇದ್ದು ಈ ಭೂಮಿಯಲ್ಲಿ ರೈತರು ಪ್ರಮುಖವಾಗಿ ಭತ್ತವನ್ನು ಬೆಳೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ, ಸರಿಯಾದ ಸಮಯಕ್ಕೆ ಮಳೆ ಬಾರದೇ ಗದ್ದೆ ನಾಟಿ ಮಾಡಲು ತೊಂದರೆ ಹಾಗೂ ಪ್ರಮುಖವಾಗಿ ಹಳ್ಳಿಯ ಯುವ ಜನತೆ ಪೇಟೆಯ ಕಡೆ ಮುಖ ಮಾಡಿರುವುದು, ಭತ್ತದ ಗದ್ದೆಗಳು ಅಡಕೆ ತೋಟಗಳಾಗಿ ಮಾರ್ಪಾಟಾಗುತ್ತಿರುವುದು ಸೇರಿದಂತೆ ನಾನಾ ಕಾರಣಗಳಿಂದ ಭತ್ತ ಬೆಳೆಯುವವರ ಸಂಖ್ಯೆ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದೆ. ಇವೆಲ್ಲವುಗಳ ಸೈಡ್‌ ಇಫೆಕ್ಟ್ ಎಂಬಂತೆ ಹೊಸದೊಂದು ಸಮಸ್ಯೆ ರೈತರನ್ನು ಕಾಡುತ್ತಿದೆ.

Vijaya Karnataka 20 Apr 2019, 7:36 pm
ಯಲ್ಲಾಪುರ : ತಾಲೂಕಿನಲ್ಲಿ ಸುಮಾರು ಐದು ಸಾವಿರ ಹೆಕ್ಟೇರ್‌ ಪ್ರದೇಶದ ಕೃಷಿ ಭೂಮಿ ಇದ್ದು ಈ ಭೂಮಿಯಲ್ಲಿ ರೈತರು ಪ್ರಮುಖವಾಗಿ ಭತ್ತವನ್ನು ಬೆಳೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ, ಸರಿಯಾದ ಸಮಯಕ್ಕೆ ಮಳೆ ಬಾರದೇ ಗದ್ದೆ ನಾಟಿ ಮಾಡಲು ತೊಂದರೆ ಹಾಗೂ ಪ್ರಮುಖವಾಗಿ ಹಳ್ಳಿಯ ಯುವ ಜನತೆ ಪೇಟೆಯ ಕಡೆ ಮುಖ ಮಾಡಿರುವುದು, ಭತ್ತದ ಗದ್ದೆಗಳು ಅಡಕೆ ತೋಟಗಳಾಗಿ ಮಾರ್ಪಾಟಾಗುತ್ತಿರುವುದು ಸೇರಿದಂತೆ ನಾನಾ ಕಾರಣಗಳಿಂದ ಭತ್ತ ಬೆಳೆಯುವವರ ಸಂಖ್ಯೆ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದೆ. ಇವೆಲ್ಲವುಗಳ ಸೈಡ್‌ ಇಫೆಕ್ಟ್ ಎಂಬಂತೆ ಹೊಸದೊಂದು ಸಮಸ್ಯೆ ರೈತರನ್ನು ಕಾಡುತ್ತಿದೆ.
Vijaya Karnataka Web KWR-19 YLP 1 A


ಗ್ರಾಮೀಣ ಭಾಗದಲ್ಲಿ ಒಣ ಮೇವಿಗೆ ಬರ : ಭತ್ತವನ್ನು ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಿಸಿ ಕೇವಲ ರೈತರಿಗೆ ಮಾತ್ರವಲ್ಲ ರೈತರು ಸಾಕಿದ ಜಾನುವಾರುಗಳಿಗೂ ತಟ್ಟಿದೆ. ಈ ಮೊದಲು ಸಾಕಷ್ಟು ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದಾಗ ರೈತರ ಜಾನುವಾರುಗಳಿಗೆ ಬೇಕಾದಷ್ಟು ಒಣ ಹುಲ್ಲು (ಬಿಳಿಹುಲ್ಲು) ಲಭ್ಯವಾಗುತ್ತಿತ್ತು. ರೈತರು ತಮ್ಮ ಮನೆಯಲ್ಲಿ ಸಾಕಿದ ಆಕಳು,ಎಮ್ಮೆ,ಎತ್ತು ಮುಂತಾದ ಜಾನುವಾರುಗಳಿಗೆ ವರ್ಷಪೂರ್ತಿ ಸಾಕಾಗುವಷ್ಟು ಒಣ ಹುಲ್ಲನ್ನು ಕೊಟ್ಟಿಗೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಆದರೆ ಭತ್ತದ ಕೃಷಿ ಕ್ರಮೇಣ ಕಡಿಮೆಯಾಗುತ್ತ ಬಂದಂತೆ ಒಣಹುಲ್ಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಬೆಳೆಯುವ ಭತ್ತದ ಹುಲ್ಲು ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಇದರಿಂದ ಹೊರಪ್ರದೇಶಗಳಿಂದ ಒಣಹುಲ್ಲನ್ನು ಖರೀದಿ ಮಾಡುವ ಪ್ರಕ್ರಿಯೆ ಬೇಸಿಗೆಯಲ್ಲಿ ಜೋರಾಗಿ ನಡೆಯುತ್ತಿದೆ. ಸಾಧಾರಣವಾಗಿ ಜನವರಿಯಿಂದ ಏಪ್ರಿಲ್‌ ತಿಂಗಳ ಅಂತ್ಯದವರೆಗೆ ಮೇವು ಖರೀದಿಯ ಭರಾಟೆ ಜೋರಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಮೊದಲಿನ ಹಾಗೆ ಈಗ ಹಸಿಹುಲ್ಲು ಕೂಡ ಸಾಕಷ್ಟು ಪ್ರಮಾಣದಲ್ಲಿ ಸಿಗದಿರುವ ಕಾರಣ ರಾಸುಗಳಿಗೆ ಒಣಮೇವನ್ನು ಖರಿದಿಸುವುದು ರೈತರಿಗೆ ಅನಿವಾರ್ಯವಾಗಿದೆ. ಪ್ರಸ್ತುತ ತಾಲೂಕಿನಹಲವು ಭಾಗಗಳಲ್ಲಿ ಹಾಲುಉತ್ಪಾದಕ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಾಲಿಗೆ ಬೇಡಿಕೆ ಇರುವ ಕಾರಣ ಈಗ ಬಹುತೇಕ ರೈತರು ತಮ್ಮ ಮನೆಗಳಲ್ಲಿ ಜರ್ಸಿ ಮುಂತಾದ ಮಿಶ್ರ ತಳಿಯ ಆಕಳುಗಳನ್ನು ಸಾಕುವ ಪರಿಪಾಠ ಬೆಳೆದಿದೆ. ಹೈನೋದ್ಯಮವು ರೈತರಿಗೆ ಉತ್ತಮ ಆದಾಯದ ಮೂಲವೂ ಆಗಿದೆ. ಹೀಗಾಗಿ ಹಸು ಸಾಕಣೆಯನ್ನು ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಹೀಗಾಗಿ ಒಣ ಹುಲ್ಲಿನ ಅನಿವಾರ್ಯತೆ ಹೆಚ್ಚಿದೆ.

ಹೊರ ತಾಲೂಕುಗಳ ಹುಲ್ಲಿಗೆ ಬೇಡಿಕೆ : ಸುತ್ತಲಿನ ಮುಂಡಗೋಡ,ಕಲಘಟಗಿ,ಹಾನಗಲ್ಲ ತಾಲೂಕುಗಳಿಂದ ಯಲ್ಲಾಪುರ ತಾಲೂಕಿಗೆ ಪ್ರತಿನಿತ್ಯ ಹತ್ತಾರು ವಾಹನಗಳಲ್ಲಿ ಒಣಹುಲ್ಲು ಬರುತ್ತಿದೆ. ಹೀಗೆ ತಂದ ಒಣಹುಲ್ಲನ್ನು ಪಟ್ಟಣದ ವಿವಿಧ ಭಾಗಗಳಲ್ಲಿ ಹಾಗೂ ಪಟ್ಟಣದ ಅಂಚಿನ ಮಾಗೋಡ ಕ್ರಾಸ್‌ ಬಳಿ ವ್ಯಾಪಾರ ನಡೆಸುತ್ತಾರೆ. ಇಲ್ಲಿಂದ ರೈತರು ತಮಗೆ ಬೇಕಾಗುವಷ್ಟು ಒಣ ಹುಲ್ಲನ್ನು ಖರೀದಿಸುತ್ತಾರೆ. ಹೊರ ಊರಿನ ಒಣಹುಲ್ಲು ಖರೀದಿ ಅನಿವಾರ್ಯವಾದರೂ ಹೀಗೆ ಒಣಮೇವು ಖರೀದಿ ತಮ್ಮ ಜೇಬಿಗೆ ಭಾರವಾಗುತ್ತಿದೆ ಎಂಬ ಅಭಿಪ್ರಾಯ ರೈತರದ್ದು.

ಹೆಚ್ಚಾಗುತ್ತಿದೆ ಜೋಳದ ದಂಟಿನ ಬಳಕೆ; :ಇತ್ತೀಚೆಗೆ ಭತ್ತದ ಒಣ ಹುಲ್ಲಿನ ಬದಲಾಗಿ ಜೋಳದ ದಂಟನ್ನು ಜಾನುವಾರುಗಳಿಗೆಂದು ಖರೀದಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಹಿಂದೆ ಜೋಳದ ದಂಟನ್ನು ಮೇವಿಗಾಗಿ ಬಳಸುವ ಪದ್ಧತಿ ಈ ಪ್ರದೇಶದಲ್ಲಿ ಇಲ್ಲವಾಗಿತ್ತು. ಈಗ ಈ ಜೋಳದ ದಂಟು ಕಲಘಟಗಿ ಮುಂತಾದ ಭಾಗಗಳಿಂದ ತಾಲೂಕಿಗೆ ಬರುತ್ತಿದೆ. ಜೋಳದ ದಂಟಿಗೂ ಈಗ ಬೇಡಿಕೆ ಶುರುವಾಗಿದೆ. ಭತ್ತದ ಹುಲ್ಲಿಗಿಂತ ಕಡಿಮೆ ಖರ್ಚಿನಲ್ಲಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಜೋಳದ ದಂಟು ಸಿಗುತ್ತಿರುವುದು ಬೇಡಿಕೆ ಹೆಚ್ಚಲು ಕಾರಣವಾಗಿದೆ. ಜೋಳದ ದಂಟಿನ ಮೇವಿನಿಂದ ಜಾನುವಾರುಗಳಿಗೆ ಹೆಚ್ಚಿನ ಪೋಷಕಾಂಶಗಳು ಸಿಗುತ್ತವೆ ಎಂಬುದು ಕೆಲವು ರೈತರ ಅಂಬೋಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ