ಆ್ಯಪ್ನಗರ

ಬಿಜೆಪಿಯಿಂದ ವಸ್ತುನಿಷ್ಠ ಪ್ರಣಾಳಿಕೆ: ಪ್ರಮೋದ ಹೆಗಡೆ

ಯಲ್ಲಾಪುರ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ದವರು ಹಳೆಯ ಪ್ರಣಾಳಿಕೆಯನ್ನೇ ಮತ್ತೊಮ್ಮೆ ಮುದ್ರಿಸಿ ಹುಸಿ ಬರವಸೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಟೀಕಿಸಿದ್ದಾರೆ.

Vijaya Karnataka 4 Apr 2019, 5:00 am
ಯಲ್ಲಾಪುರ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ದವರು ಹಳೆಯ ಪ್ರಣಾಳಿಕೆಯನ್ನೇ ಮತ್ತೊಮ್ಮೆ ಮುದ್ರಿಸಿ ಹುಸಿ ಬರವಸೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಟೀಕಿಸಿದ್ದಾರೆ.
Vijaya Karnataka Web the objective manifesto from the bjp pramodh hegde
ಬಿಜೆಪಿಯಿಂದ ವಸ್ತುನಿಷ್ಠ ಪ್ರಣಾಳಿಕೆ: ಪ್ರಮೋದ ಹೆಗಡೆ


ಅವರು ಈ ಕುರಿತು ಬುಧವಾರ ಹೇಳಿಕೆ ನೀಡಿ, ಕಾಂಗ್ರೆಸಿನವರು ಪ್ರಕಟಿಸಿದ ಹತ್ತು ಅಂಶಗಳಲ್ಲಿ ಯಾವುದನ್ನೂ ಅವರಿಂದ ಜಾರಿಮಾಡಲು ಸಾಧ್ಯವಿಲ್ಲ. ಅವರು ಪ್ರತ್ಯೇಕ ಕೃಷಿ ಬಜೆಟ್‌ ಎಂಬುದನ್ನು ನಮೂದಿಸಿದ್ದು, ಯಡಿಯೂರಪ್ಪನವರ ಯೋಜನೆ ಕಾಪಿ ಮಾಡಿದ್ದಾರೆ. ರಫೆಲ್‌ ಬಗ್ಗೆ ಮಾತನಾಡುವ ಪ್ರಣಾಳಿಕೆ ಬೊಫೋರ್ಸ್‌ ಮತ್ತು ಅಗಸ್ತಾ ಹಗರಣಗಳನ್ನು ಮುಚ್ಚುವ ತಂತ್ರವಾಗಿದೆ. 24 ತಾಸಿನಲ್ಲಿ ಸಾಲಮನ್ನಾ ಮಾಡುವ ಮೈತ್ರಿ ಸರಕಾರ 9 ತಿಂಗಳಾದರೂ ಸಾಲಮನ್ನಾ ಮಾಡಲು ಸಾಧ್ಯವಾಗಲಿಲ್ಲ. ಘಟಬಂಧನದ ಹಠಬಂಧನದಿಂದ ಪ್ರಧಾನಿ ಅಭ್ಯರ್ಥಿಯೇ ನಿರ್ಣಯವಾಗದಿರುವ ಈ ಅಸಾಧ್ಯ ಮೈತ್ರಿ ಪ್ರಣಾಳಿಕೆಯನ್ನು ಈಡೇರಿಸುವದಿಲ್ಲ ಎಂದು ಕುಟುಕಿದ್ದಾರೆ.

ಉತ್ತರಕನ್ನಡ ಜಿಲ್ಲೆಗೆ ಬಿಜೆಪಿ ಜಿಲ್ಲಾಧ್ಯಕ್ಷ ರಾದ ಕೆ. ಜಿ. ನಾಯ್ಕ ಅವರು ಅತ್ಯಂತ ವಸ್ತುನಿಷ್ಠವಾದ ವಾಸ್ತವಿಕ ಪ್ರಣಾಳಿಕೆಯನ್ನು ನೀಡಿದ್ದಾರೆ. ಇದರಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಟ್ಟ, ಹಾಡಿ ಇವುಗಳ ಜೊತೆಗೆ ತರಕಾರಿ, ಮೀನುಗಾರಿಕೆ, ಕೌಶಲ, ಕರಕುಶಲ, ಗುಡಿ ಕೈಗಾರಿಕೆ, ಹೈನುಗಾರಿಕೆ ಇಂತಹ ವೈಜ್ಞಾನಿಕ ಪ್ರಣಾಳಿಕೆಯನ್ನು ಜನತೆಗೆ ನೀಡಿದ್ದೇವೆ. ವಿಶೇಷವಾಗಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ, ಜ್ಞಾನ ಆಧಾರಿತ ಉದ್ಯೋಗ ಸೃಷ್ಟಿಗೆ ಕ್ರಿಯಾಶೀಲ ಆಲೊಚನೆಗಳನ್ನು ನೀಡಿದ್ದೇವೆ. ಅನಾರೋಗ್ಯ ಪೀಡಿತರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಬಲ ನೀಡಿದ್ದೇವೆ. ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸಿ 12 ತಿಂಗಳೂ ನೀರಿನ ಸೌಲಭ್ಯ ನೀಡಲು ಕಾರ್ಯಕ್ರಮ ರೂಪಿಸಿದ್ದೇವೆ. ಹಿಂದುಳಿದ ವರ್ಗ, ಅತಿಕ್ರಮಣದಾರರು, ಎಸ್‌ಸಿ, ಎಸ್‌ಟಿಗಳಿಗೆ ಅವರ ಜೀವನ ಮಟ್ಟ ಸುಧಾರಿಸಲು ವಿಶೇಷ ಪ್ಯಾಕೇಜ್‌ ನಿರ್ಮಿಸಿದ್ದೇವೆ. ನಿಶ್ಚಯವಾಗಿ ರಚನೆ ಆಗಲಿರುವ ಮೋದಿ ಸರಕಾರ ಹೊಸ ಬೆಳಕನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ