ಆ್ಯಪ್ನಗರ

ಸಾಧಕ ಕವಿ ರಮೇಶ ಹೆಗಡೆ ಇನ್ನಿಲ್ಲ

ಶಿರಸಿ (ಉತ್ತರ ಕನ್ನಡ): ತಮ್ಮ ತೀವ್ರ ದೈಹಿಕ ತೊಂದರೆಯಿಂದ ಅನೇಕ ವರ್ಷಗಳಿಂದ ಮನೆ ಜಗುಲಿಯಲ್ಲಿ ಸದಾ ಹಾಸಿಗೆಯಲ್ಲಿ ಮಲಗಿರುತ್ತಿದ್ದರೂ ಸಾಹಿತ್ಯ ಬರವಣಿಗೆಯಲ್ಲಿ ನಿರಂತರ ಸಕ್ರಿಯರಾಗಿದ್ದ ಕವಿ ರಮೇಶ ಹೆಗಡೆ (40) ಶನಿವಾರ ನಿಧನ ಹೊಂದಿದರು.

Vijaya Karnataka 14 Apr 2019, 5:00 am
ಶಿರಸಿ (ಉತ್ತರ ಕನ್ನಡ): ತಮ್ಮ ತೀವ್ರ ದೈಹಿಕ ತೊಂದರೆಯಿಂದ ಅನೇಕ ವರ್ಷಗಳಿಂದ ಮನೆ ಜಗುಲಿಯಲ್ಲಿ ಸದಾ ಹಾಸಿಗೆಯಲ್ಲಿ ಮಲಗಿರುತ್ತಿದ್ದರೂ ಸಾಹಿತ್ಯ ಬರವಣಿಗೆಯಲ್ಲಿ ನಿರಂತರ ಸಕ್ರಿಯರಾಗಿದ್ದ ಕವಿ ರಮೇಶ ಹೆಗಡೆ (40) ಶನಿವಾರ ನಿಧನ ಹೊಂದಿದರು.
Vijaya Karnataka Web the poet ramesh hegde is no more
ಸಾಧಕ ಕವಿ ರಮೇಶ ಹೆಗಡೆ ಇನ್ನಿಲ್ಲ


ನಗರದ ವಿನಾಯಕ ಕಾಲೋನಿಯ ನಿವಾಸಿಯಾಗಿದ್ದ ಅವರು, ಚಿಕ್ಕಂದಿನಿಂದಲೇ ಆಸ್ಟಿಯೋ ಜೆನಿಸಿಸ್‌ ಇಂಪರ್ಫೆಕ್ಟಾ ಎಂಬ ವಿರಳ ಕಾಯಿಲೆಗೆ ತುತ್ತಾಗಿ ನಡೆದಾಡುವ, ಕುಳಿತುಕೊಳ್ಳುವ ಸಾಮರ್ಥ್ಯ‌ ಕಳೆದುಕೊಂಡಿದ್ದರು.

ಆದರೆ ಹಾಸಿಗೆಯಿಂದ ಏಳಲಾಗದೇ ಇದ್ದರೂ ಕಾವ್ಯ ರಚನೆಯಲ್ಲಿ ನಿರಂತರ ತೊಡಗಿಕೊಂಡಿದ್ದ ರಮೇಶ ಹೆಗಡೆ, ಗಝಲ್‌ ಕವಿಯಾಗಿಯೂ ಹೆಸರು ಗಳಿಸಿದ್ದರು. ಮನೆಯಲ್ಲೇ ಪರೀಕ್ಷೆ ಬರೆದು ಪದವಿ ಶಿಕ್ಷ ಣವನ್ನೂ ಪೂರೈಸಿದ್ದರು.

ಅಲ್ಲದೇ, ಅವರ 'ಕಿಟಕಿಯೊಳಗಿನ ಕಣ್ಣು' ಸೇರಿದಂತೆ ಆರು ಕವನ ಸಂಕಲನ ಪ್ರಕಟವಾಗಿವೆ. ದೈಹಿಕ ಅಡೆತಡೆ ಸವಾಲು ಸ್ವೀಕರಿಸಿ ಸ್ಪಂದನಶೀಲರಾಗಿದ್ದ ಇವರು ಜಯಂತ ಕಾಯ್ಕಿಣಿ ಸೇರಿದಂತೆ ಹಿರಿಯ ಸಾಹಿತಿಗಳ ಒಡನಾಟ ಹೊಂದಿದ್ದರು.

ರಮೇಶ ಅವರಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರು, ಒಬ್ಬ ಸಹೋದರ, ಬಂಧು ಬಳಗ ಇದ್ದಾರೆ. ಅವರ ಇಚ್ಛೆಯಂತೆ ಮರಣಾನಂತರ ಅವರ ನೇತ್ರದಾನ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ