ಆ್ಯಪ್ನಗರ

ಪ್ರೇಮಕುಮಾರ ಕೊಲೆ ಹಿಂದೆ ರಾಜಕಾರಣಿ ಕೈವಾಡ: ಆರೋಪ

ಕಾರವಾರ : ಇಲ್ಲಿನ ದಲಿತ ಸಂಘಟನೆಯ ಮುಖಂಡ ಪ್ರೇಮಕುಮಾರ ನಾಯರ್‌ ಕೊಲೆಯ ಹಿಂದೆ ಕಾರವಾರ ಬಂದರಿನ ವ್ಯಾಪಾರದಲ್ಲಿ ಆಸಕ್ತಿ ಹೊಂದಿರುವ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡವಿದೆ ಎಂದು ಪ್ರೇಮಕುಮಾರ ಕುಟುಂಬದವರು ಆರೋಪಿಸಿದ್ದಾರೆ.

Vijaya Karnataka 31 Oct 2018, 5:00 am
ಕಾರವಾರ : ಇಲ್ಲಿನ ದಲಿತ ಸಂಘಟನೆಯ ಮುಖಂಡ ಪ್ರೇಮಕುಮಾರ ನಾಯರ್‌ ಕೊಲೆಯ ಹಿಂದೆ ಕಾರವಾರ ಬಂದರಿನ ವ್ಯಾಪಾರದಲ್ಲಿ ಆಸಕ್ತಿ ಹೊಂದಿರುವ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡವಿದೆ ಎಂದು ಪ್ರೇಮಕುಮಾರ ಕುಟುಂಬದವರು ಆರೋಪಿಸಿದ್ದಾರೆ.
Vijaya Karnataka Web the politicians hand behind the murder of premakumara accused
ಪ್ರೇಮಕುಮಾರ ಕೊಲೆ ಹಿಂದೆ ರಾಜಕಾರಣಿ ಕೈವಾಡ: ಆರೋಪ


ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮಕುಮಾರ ಪತ್ನಿ ಮೀನಾಕ್ಷಿ, ಕೊಲೆಯ ಆರೋಪಿ ರಿಜ್ವಾನ್‌ ಬಂದರಿನಲ್ಲಿ ಕಚೇರಿ ಹೊಂದಿದ್ದಾನೆ. ಈತನಿಗೆ ಪ್ರಭಾವಿ ರಾಜಕಾರಣಿಯ ಬೆಂಬಲವಿದೆ. ರಿಜ್ವಾನ್‌ನನ್ನು ಪೊಲೀಸರು ಕೂಡಲೇ ಬಂಧಿಸಿ ತನಿಖೆ ನಡೆಸಿದರೆ ಕೊಲೆಯ ಹಿಂದಿನ ರಹಸ್ಯ ಬಯಲಾಗುತ್ತದೆ ಎಂದರು.

ಗಾಂಜಾ ಆರೋಪ ಸುಳ್ಳು

ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನನ್ನ ಪತಿಯನ್ನು ಕೊಲೆಗೈದ ಮುಶ್ತಾಕ್‌ ಮತ್ತು ಶಫಿಯನ್ನು ಬಂಧಿಸಿದ್ದಾರೆ. ಆದರೆ ಪ್ರೇಮಕುಮಾರ ಗಾಂಜಾ ವ್ಯವಹಾರದ ಸಲುವಾಗಿ ಉಳವಿಗೆ ಹೋಗಿದ್ದರು ಎಂದು ಪೊಲೀಸರು ಹೇಳುತ್ತಿರುವುದು ಸುಳ್ಳು. ಪ್ರೇಮಕುಮಾರ ಹೊಸ ಕಟ್ಟಡಗಳಿಗೆ ಕಿಟಕಿ ಬಾಗಿಲುಗಳನ್ನು ಪೂರೈಸುವ ವ್ಯವಹಾರ ಮಾಡುತ್ತಿದ್ದರು. ಅವರು ಕೊಲೆಯಾದ ದಿನ ಬೆಳಗ್ಗೆ ಮುಶ್ತಾಕ ಅವರ ಮೊಬೈಲ್‌ಗೆ ಕರೆ ಮಾಡಿ ಉಳಿವಿ ಬಳಿ ಕಟ್ಟಿಗೆ ಸಿಗುತ್ತದೆ ನೋಡಲು ಬಾ ಎಂದು ಕರೆದಿದ್ದರು. ಮುಶ್ತಾಕನ ಫೋನ್‌ ಬಂದಾಗ ನಾನು ಪ್ರೇಮಕುಮಾರ ಜತೆಯಲ್ಲೇ ಇದ್ದೆ ಎಂದು ಮೀನಾಕ್ಷಿ ಹೇಳಿದರು.

ಕೊಲೆಯ ಹಿಂದಿರುವ ರಿಜ್ವಾನ್‌, ಮುಶ್ತಾಕ ಇಬ್ಬರೂ ಪ್ರೇಮಕುಮಾರನ ಸ್ನೇಹಿತರೇ ಆಗಿದ್ದರು. ಬಂದರಿನ ಸರಕು ಸಾಗಣೆ ವ್ಯವಹಾರಕ್ಕೆ ಸಂಬಂಧಿಸಿ ಪ್ರೇಮಕುಮಾರಗೆ ಹೊಸ ಗುತ್ತಿಗೆ ಸಿಕ್ಕಿತ್ತು. ಪ್ರೇಮಕುಮಾರ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತಿರುವುದನ್ನು ಸಹಿಸದೇ ಹೊಟ್ಟೆ ಕಿಚ್ಚಿನಿಂದ ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು,

ಮಗುವಿನ ಮುಖ ನೋಡಿ ಬಿಡಬಹುದಿತ್ತು

ಪ್ರೇಮಕುಮಾರ ತಾಯಿ ಮಾತನಾಡಿ, ನನ್ನ ಮಗ ಯಾವತ್ತೂ ಯಾರ ತಂಟೆಗೂ ಹೋದವನಲ್ಲ, ಅಂಥವನ ಕೊಲೆ ಮಾಡಲು ಮನಸ್ಸಾದರೂ ಹೇಗೆ ಬಂತು ತಿಳಿಯುತ್ತಿಲ್ಲ ಎಂದು ಭಾವುಕರಾಗಿ ಕಣ್ಣೀರು ಸುರಿಸಿದರು. ನಮಗೆ ಚಿಕ್ಕ ಮಗಳಿದ್ದಾಳೆ, ರಿಜ್ವಾನ್‌ ನನ್ನ ಪತಿಯ ಸ್ನೇಹಿತನೇ ಆಗಿದ್ದು, ಮನೆಗೆ ಸಾಕಷ್ಟು ಸಲ ಬಂದು ಹೋಗಿದ್ದಾನೆ. ನನ್ನ ಮಗುವನ್ನೂ ನೋಡಿದ್ದಾನೆ. ಕೊನೇ ಪಕ್ಷ ಮಗುವಿನ ಸಲುವಾಗಾದರೂ ನನ್ನ ಪತಿಯನ್ನು ಬಿಡಬಹುದಿತ್ತು ಎಂದು ಅಳಲು ತೋಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ