ಆ್ಯಪ್ನಗರ

ಕಾರ್ಮಿಕರ ಕಿಟ್‌ ಪಡೆಯಲು ಮುಗಿಬಿದ್ದ ಸಾರ್ವಜನಿಕರು

ಕಾರವಾರ : ನಗರದಲ್ಲಿಅಸಂಘಟಿತ ವಲಯದ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸುವ ಸಮಯದಲ್ಲಿಕಾರ್ಮಿಕರಿಗಿಂತ ಹೆಚ್ಚಾಗಿ ಸಾರ್ವಜನಿಕರೆ ಕಿಟ್‌ ಪಡೆಯಲು ಮುಗಿ ಬಿದ್ದ ಘಟನೆ ಭಾನುವಾರ ನಡೆದಿದೆ. ಸರಕಾರ ಈಗಾಗಲೆ ಅಸಂಘಟಿತ ಕಾರ್ಮಿಕ ವಲಯಕ್ಕೆ ಕಿಟ್‌ ನೀಡುತ್ತಿದ್ದು ಅದೇರೀತಿ ಕಾರವಾರದಲ್ಲೂ ಅಸಂಘಟಿತ ಕಾರ್ಮಿಕರಾಗಿರುವ ಫೋಟೋಗ್ರಾಫರ್‌, ಮೆಕ್ಯಾನಿಕಲ್‌, ಟೈಲರ್‌ ಸೇರಿ ಇತರೆ ಕಾರ್ಮಿಕರಿಗೆ ಕಿಟ್‌ ನೀಡುವುದಕ್ಕೆ

Vijaya Karnataka 1 Jun 2020, 5:00 am
ಕಾರವಾರ : ನಗರದಲ್ಲಿಅಸಂಘಟಿತ ವಲಯದ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸುವ ಸಮಯದಲ್ಲಿಕಾರ್ಮಿಕರಿಗಿಂತ ಹೆಚ್ಚಾಗಿ ಸಾರ್ವಜನಿಕರೆ ಕಿಟ್‌ ಪಡೆಯಲು ಮುಗಿ ಬಿದ್ದ ಘಟನೆ ಭಾನುವಾರ ನಡೆದಿದೆ. ಸರಕಾರ ಈಗಾಗಲೆ ಅಸಂಘಟಿತ ಕಾರ್ಮಿಕ ವಲಯಕ್ಕೆ ಕಿಟ್‌ ನೀಡುತ್ತಿದ್ದು ಅದೇರೀತಿ ಕಾರವಾರದಲ್ಲೂ ಅಸಂಘಟಿತ ಕಾರ್ಮಿಕರಾಗಿರುವ ಫೋಟೋಗ್ರಾಫರ್‌, ಮೆಕ್ಯಾನಿಕಲ್‌, ಟೈಲರ್‌ ಸೇರಿ ಇತರೆ ಕಾರ್ಮಿಕರಿಗೆ ಕಿಟ್‌ ನೀಡುವುದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಮುಂದಾಗಿದ್ದರು. ಕಿಟ್‌ ವಿತರಣೆ ಮಾಡತ್ತಿರುವ ಸುದ್ದಿ ಸಿಕ್ಕಿದ್ದೇ ತಡ ಮೀನು, ಸಾಮಗ್ರಿ ಖರೀದಿ ಮಾಡೋದಕ್ಕೆ ಹೋಗುತ್ತಿದ್ದವರೂ ಎಲ್ಲಾಬಿಟ್ಟು ಓಡೋಡಿ ಬಂದು ಕಿಟ್‌ ಪಡೆಯಲು ಮುಗಿ ಬಿದ್ದರು. ಇದು ನಿಮಗಲ್ಲ, ಅಸಂಘಟಿತ ಕಾರ್ಮಿಕರಿಗೆ ಮಾತ್ರ ವಿತರಣೆ ಮಾಡುವುದು ಎಂದು ಹೇಳಿದರೂ ಯಾರೂ ಕೂಡ ಕೇಳೋ ಪರಿಸ್ಥಿತಿಯಲ್ಲಿಇರಲಿಲ್ಲ. ಇದರಿಂದ ಸಾಕಷ್ಟು ಸಮಯ ಕಿಟ್‌ ವಿತರಣೆಯಲ್ಲಿಗೊಂದಲ ಉಂಟಾಯಿತು. ಕೊರೊನಾ ಸಂದರ್ಭದಲ್ಲಿಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು ಎನ್ನುವ ಸರಕಾರದ ಆದೇಶ ಇದ್ದರೂ ಈ ಜನ ಮಾತ್ರ ಅದನ್ನು ಲೆಕ್ಕಿಸದೇ ಕಿಟ್‌ ಪಡೆಯಲು ದೂಡಾಡಿಕೊಂಡರು. ಪೊಲೀಸರು ಎಲ್ಲರನ್ನೂ ಚಂದುರಿಸಲು ಹರಸಾಹಸ ಪಡಬೇಕಾಯಿತು. ಸಾರ್ವಜನಿಕರ ಈ ವರ್ತನೆಯಿಂದ ನಿಜವಾಗಿ ಕಿಟ್‌ ಪಡೆಯಲು ಬಂದಿದ್ದ ಕಾರ್ಮಿಕರು ವಾಪಸ್‌ ಹೋಗುವಂತಾಯಿತು.
Vijaya Karnataka Web the public who was out to get the workers kit
ಕಾರ್ಮಿಕರ ಕಿಟ್‌ ಪಡೆಯಲು ಮುಗಿಬಿದ್ದ ಸಾರ್ವಜನಿಕರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ