ಆ್ಯಪ್ನಗರ

ಮಠದ ವ್ಯವಸ್ಥೆಯಲ್ಲಿ ಗುರಿಕಾರರ ಪಾತ್ರ ಮುಖ್ಯ

ಸಿದ್ದಾಪುರ: ಧಾರ್ಮಿಕ ಮಠದ ವ್ಯವಸ್ಥೆಯಲ್ಲಿ ಗುರಿಕಾರರ ಪಾತ್ರ ಮುಖ್ಯವಾದು. ಮಠದ ಕಾರ್ಯಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ಬರುವಂತೆ ಮಾಡುವ ಗುರುತರ ಜವಾಬ್ದಾರಿ ಗುರಿಕಾರರ ಮೇಲಿರುತ್ತದೆ ಎಂದು ಪಡೀಲು ಮಹಾಬಲೇಶ್ವರ ಭಟ್ಟ ಹೇಳಿದರು.

Vijaya Karnataka 12 Jul 2019, 5:00 am
ಸಿದ್ದಾಪುರ: ಧಾರ್ಮಿಕ ಮಠದ ವ್ಯವಸ್ಥೆಯಲ್ಲಿ ಗುರಿಕಾರರ ಪಾತ್ರ ಮುಖ್ಯವಾದು. ಮಠದ ಕಾರ್ಯಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ಬರುವಂತೆ ಮಾಡುವ ಗುರುತರ ಜವಾಬ್ದಾರಿ ಗುರಿಕಾರರ ಮೇಲಿರುತ್ತದೆ ಎಂದು ಪಡೀಲು ಮಹಾಬಲೇಶ್ವರ ಭಟ್ಟ ಹೇಳಿದರು.
Vijaya Karnataka Web KWR-11SDPR-1


ಪಟ್ಟಣದ ಎಪಿಎಂಸಿಯ ಶ್ರೀ ಗುರುಜ್ಯೋತಿಯಲ್ಲಿ ಬುಧವಾರ ಕರೆಯಲಾಗಿದ್ದ ಸಿದ್ದಾಪುರ ವಲಯ ಗುರಿಕಾರರ ಸಭೆಯಲ್ಲಿ ಅವರು ಮಾತನಾಡಿದರು. ಆದಿಗುರು ಶಂಕರಾಚಾರ್ಯರು ಮೂರುಸಲ ಭೇಟಿ ನೀಡಿ ವಾಸಮಾಡಿದ ಪವಿತ್ರ ತಾಣದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪಿಸಲು ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರು ತಮ್ಮ ಗುರುಭವನವನ್ನೇ ನೀಡಿದ್ದಾರೆ. ಇದೊಂದು ಮಹತ್ವದ ಕಾರ್ಯವಾಗಿದ್ದು ಈ ಕಾರ್ಯ ಯಶಸ್ವಿಯಾಗಲು ಎಲ್ಲಾ ಗುರಿಕಾರರು ಕೈಜೋಡಿಸಬೇಕು ಎಂದು ಹೇಳಿದರು.

ಮೂಲಮಠ ನಿರ್ಮಾಣ ಸಮಿತಿಯ ಪ್ರಮಖ ಆರ್‌.ಎಸ್‌.ಹೆಗಡೆ ಹರಗಿ ಮಾತನಾಡಿ, ಶ್ರೀರಾಘವೇಶ್ವರ ಭಾರತೀ ಶ್ರೀಯವರು ಹಾಕಿದ ಅನುಶಾನವನ್ನು ಪಾಲಿಸಬೇಕು. ನಾಡಿನಲ್ಲಿ ಖ್ಯಾತಿಗೆ ಬರಲಿರುವ ವಿಶ್ವವಿದ್ಯಾಪೀಠದ ಯೋಜಿತ ಗುರಿಯನ್ನು ಜನತೆಗೆ ಮನದಟ್ಟು ಮಾಡಬೇಕು ಎಂದರು.

ಮೂಲಮಠ ಪ್ರಧಾನ ಕಾರ್ಯದರ್ಶಿ ಯು.ಎಸ್‌.ಜಿ.ಭಟ್ಟ ಬೆಂಗಳೂರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಸಿದ್ದಾಪುರ ಮಂಡಲ ಅಧ್ಯಕ್ಷ ಜಿ.ಎಸ್‌.ಭಟ್ಟ ಕಲ್ಲಾಳ ಧಾರಾರಾಮಾಯಣ ಕಾರ್ಯಕ್ರಮ ಕುರಿತು ವಿವರಿಸಿ ಮಂಡಲ, ವಲಯಗಳ ಜವಾಬ್ದಾರಿಯನ್ನು ತಿಳಿಸಿಕೊಟ್ಟರು.

ಮೂಲಮಠ ಸಮಿತಿ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕೊಡಗಿಬೈಲ, ಸಿದ್ದಾಪುರ ಮಂಡಲ ನಿಯೋಜಿತ ಅಧ್ಯಕ್ಷ ಸುಬ್ರಾಯ ಹೆಗಡೆ ಸುಂಗೋಳಿಮನೆ, ಗುರಿಕ್ಕಾರರು, ಪದಾಧಿಕಾರಿಗಳಾದ ಹರ್ಷ ಭಟ್ಟ ಗುಂಜಗೋಡ, ಎಂ.ವಿ.ಹೆಗಡೆ ವಡ್ಡಿನಗದ್ದೆ, ರಾಮಮೂರ್ತಿ ಹೆಗಡೆ, ಸತೀಶ ಹೆಗಡೆ, ಎಂ.ಎನ್‌.ಹೆಗಡೆ, ವಿ.ಜಿ.ಹೆಗಡೆ ಕೊಳಗಿ, ಮಂಜುನಾಥ ಬತ್ತಗೆರೆ, ಚಂದನ ಶಾಸ್ತ್ರಿ,ಲತಾ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು.

ಗುರುವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಿದ್ದಾಪುರ ವಲಯ ಅಧ್ಯಕ್ಷ ಶ್ರೀಕಾಂತ ಭಟ್ಟ ಕೊಳಗಿ ಸ್ವಾಗತಿಸಿದರು. ವಲಯ ದಿಗ್ದರ್ಶಕ ಕೆಕ್ಕಾರ ನಾಗರಾಜ ಭಟ್ಟ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ