ಆ್ಯಪ್ನಗರ

ಹಡಪದ ಅಪ್ಪಣ್ಣ ಪ್ರವಚನ ಇಂದಿಗೂ ಪ್ರಸ್ತುತ

ಹಳಿಯಾಳ : ಸಮಾಜಕ್ಕೆ ಶಿವಶರಣ ಕೂಡುಗೆಯು ಅಪಾರವಾಗಿದ್ದು ಶಿವಶರಣರ ಪದಗಳನ್ನು ಹಾಗೂ ವಚನಗಳನ್ನು ಅಧ್ಯಯನ ಮಾಡುವುದರ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದ್ದು ಇದಕ್ಕಾಗಿ ಯುವ ಜನಾಂಗ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದು ತಹಸೀಲ್ದಾರ್‌ ವಿದ್ಯಾಧರ ಗುಳಗುಳಿ ಹೇಳಿದರು.

Vijaya Karnataka 18 Jul 2019, 5:00 am
ಹಳಿಯಾಳ : ಸಮಾಜಕ್ಕೆ ಶಿವಶರಣ ಕೂಡುಗೆಯು ಅಪಾರವಾಗಿದ್ದು ಶಿವಶರಣರ ಪದಗಳನ್ನು ಹಾಗೂ ವಚನಗಳನ್ನು ಅಧ್ಯಯನ ಮಾಡುವುದರ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದ್ದು ಇದಕ್ಕಾಗಿ ಯುವ ಜನಾಂಗ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದು ತಹಸೀಲ್ದಾರ್‌ ವಿದ್ಯಾಧರ ಗುಳಗುಳಿ ಹೇಳಿದರು.
Vijaya Karnataka Web the ships appanna discourse is still relevant today
ಹಡಪದ ಅಪ್ಪಣ್ಣ ಪ್ರವಚನ ಇಂದಿಗೂ ಪ್ರಸ್ತುತ


ತಾಲೂಕು ಆಡಳಿತ,ತಾ.ಪಂ., ಶಿಕ್ಷ ಣ ಇಲಾಖೆ ಹಾಗೂ ಪುರಸಭೆ ಇವುಗಳ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಆಗಿ ಹೋದ ಮಹಾನ್‌ ಶಿವಶರಣರಲ್ಲಿ ಹಡಪದ ಅಪ್ಪಣ್ಣ ವಿಶೇಷ ಸ್ಥಾನ ಮಾನ ಪಡೆದಿದ್ದಾರೆ. ವಚನಗಳು ಇಂದಿಗೂ ಪ್ರಸ್ತುತವಾಗಿದ್ದು ಇಂದಿನ ಗಡಿಬಿಡಿಯ ಜೀವನದಲ್ಲಿಯೂ ಅವುಗಳು ಮಹತ್ವ ಪಡೆದಿವೆ ಎಂದಿದ್ದಾರೆ.

ಆಧ್ಯಾತ್ಮ ಚಿಂತಕ ಎಮ್‌.ಎನ್‌.ತಳವಾರ ಅವರು ಹಡಪದ ಅಪ್ಪಣ್ಣ ಕುರಿತು ವಿಶೇಷ ಉಪನ್ಯಾಸ ನೀಡಿ, ಜೀವನವನ್ನು ಅರ್ಥಪೂರ್ಣ ಹಾಗೂ ಸಾರ್ಥಕತೆಯಿಂದ ನಡೆಸುವುದರ ಕುರಿತು ಹಾಗೂ ಕಾಯಕದಿಂದ ಆತ್ಮತೃಪ್ತಿ ಪಡೆಯುವುದರ ಬಗ್ಗೆ ಹಲವಾರು ವಚನಗಳ ಮೂಲಕ ತೋರಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ತಮ್ಮ ಕಾಯಕದಿಂದ ಇಂದಿಗೂ ಖ್ಯಾತಿ ಪಡೆದಿರುವ ಹಡಪದ ಅಪ್ಪಣ್ಣ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಪಂ ಇಒ ಡಾ.ಮಹೇಶ ಕುರಿಯವರ್‌, ಗ್ರೇಡ್‌ 2 ತಹಶೀಲದಾರ ಜಿ.ಕೆ.ರತ್ನಾಕರ, ಸಿಪಿಐ ಬಿ.ಎಸ್‌.ಲೋಕಾಪೂರ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಜೀಜಾಮಾತಾ ಸಂಘದ ಮಂಗಲಾ ಕಶೀಲ್ಕರ, ಈರಣ್ಣಾ ನಾವಲಗಿ, ಸುನೀಲ್‌ ಪನ್ನಾಳಕರ, ಯಲ್ಲಪ್ಪಾ ಹೊನ್ನೋಜಿ, ಮಂಜುನಾಥ ಮಾದರ, ಶಶಿಕಾಂತ ಆಯಟ್ಟಿ, ರಮೇಶ ನಾವಲಗಿ, ಮಾರುತಿ ಆನಗೊಂಡ, ಕಿಶೋರ ಸಾಳುಂಕೆ, ನಾರಾಯಣ ಮುತ್ತಲ್‌, ಪರಶುರಾಮ ಪೋಪಳೆ, ಶ್ರೀನಿವಾಸ ಆನಗೊಂಡ ಸೇರಿದಂತೆ ಮಹರ್ಷಿ ಸವಿತಾ ಸಮಾಜದ ಹಿರಿಯರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ