ಕಂಚೀಕೈ ವಿರೂಪಾಕ್ಷ ಹೆಗಡೆ
ಶಿರಸಿ: ನಾಲ್ಕು ದಶಕಗಳ ಹಿಂದೆ ಭಾರತೀಯ ಸೇನೆ ಸೇರಿ ಕಾರ್ಗಿಲ್ ಯುದ್ಧದಲ್ಲೂಭಾಗವಹಿಸಿದ್ದ ಯೋಧನ ಪುತ್ರನೀಗ ತಂದೆಯ ಮಾರ್ಗದರ್ಶನದಲ್ಲಿಸೈನ್ಯಕ್ಕೆ ಸೇರ್ಪಡೆಯಾಗಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ಸಮೀಪದ ಕಡಗೋಡ ಗ್ರಾಮದ ಸುಬೇದಾರ್ ಭೀಮರಾವ್ ಮಹಾದೇವ ನಾಯ್ಕ ಅವರ ಪುತ್ರ ಭೂಷಣ್ ದೇಶಸೇವೆಯ ಇಂಥದೊಂದು ಅನುಕರಣೀಯ ಮಾರ್ಗದಲ್ಲಿಸಾಗಿದ್ದಾರೆ.
1981ರಲ್ಲಿಬೆಳಗಾವಿ ನೇಮಕಾತಿ ಶಿಬಿರದಲ್ಲಿಸೈನ್ಯಕ್ಕೆ ಆಯ್ಕೆಯಾದ ಭೀಮರಾವ್ ನಾಯ್ಕ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಸುಬೇದಾರ್ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಸೇವೆಯ ಅವಧಿಯಲ್ಲಿಫಿರೋಜ್ಕೋಟ್, ಜಲಂಧರ್, ನಾಗಪುರ, ನಜಿರಾಬಾದ್, ಸಿಕ್ಕಿಂ ಮುಂತಾದ ಹಲವು ಕಡೆಗಳಲ್ಲಿಕರ್ತವ್ಯ ನಿರ್ವಹಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿಕೂಡ ಇವರು ದೇಶ ರಕ್ಷಣೆಯ ಮಹತ್ಕಾರ್ಯದಲ್ಲಿಪಾಲ್ಗೊಂಡಿದ್ದರು ಎನ್ನುವುದು ಹೆಮ್ಮೆಯ ಸಂಗತಿ.
ಪುತ್ರದ್ವಯರಿಗೂ ತವಕ:
ಸದ್ಯ ನಾಸಿಕ್ ನಿವಾಸಿಯಾಗಿರುವ ಭೀಮರಾವ್ ಅವರ ಇಬ್ಬರು ಮಕ್ಕಳು ಆರ್ಮಿ ಸ್ಕೂಲ್ನಲ್ಲಿಓದಿದ್ದು ಭಾರತೀಯ ಸೈನ್ಯದಲ್ಲಿಸೇವೆ ಸಲ್ಲಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದಾರೆ. ಹಿರಿಯ ಮಗ ಕೀರ್ತಿನಾಥ ಈಗಾಗಲೇ ಒಮ್ಮೆ ಸೈನಿಕ ನೇಮಕಾತಿ ಕಠಿಣ ಸವಾಲು ಎದುರಿಸಿ ಪ್ರಯತ್ನಿಸಿದ್ದು, ಮತ್ತೊಂದು ಅವಕಾಶಕ್ಕಾಗಿ ಸಜ್ಜಾಗಿದ್ದಾರೆ.
ಈ ಮಧ್ಯೆ, ಕಿರಿಯ ಮಗ ಭೂಷಣ್ ಸೈನಿಕ ನೇಮಕಾತಿ ಶಿಬಿರದಲ್ಲಿಪಾಲ್ಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದು ಚೆನ್ನೈದಲ್ಲಿಸೇರ್ಪಡೆಯಾಗಿದ್ದಾರೆ.
''ನನ್ನ ಇಬ್ಬರು ಮಕ್ಕಳು ಕೂಡ ಸೈನ್ಯದ ಸೇವೆ ಮತ್ತು ನಾಗರಿಕ ಸೇವಾ ನೇಮಕಾತಿಯನ್ವಯ ಕಾರ್ಯನಿರ್ವಹಣೆಯ ಅರಿವು ಹೊಂದಿದ್ದಾರೆ. ಅವೆರಡನ್ನೂ ತುಲನೆ ಮಾಡಿ ದೇಶ ಕಾಯುವ ಅಮೂಲ್ಯ ಅವಕಾಶ ಲಭ್ಯವಾಗುವ ಸೈನ್ಯದಲ್ಲಿಕಾರ್ಯನಿರ್ವಹಿಸುವುದಕ್ಕೆ ತೀರ್ಮಾನ ಮಾಡಿದ್ದಾರೆ'' ಎನ್ನುತ್ತಾರೆ ತಂದೆ ಭೀಮರಾವ್.
ಗ್ರಾಮಸ್ಥರ ಹೆಮ್ಮೆ:
ರಾಜಕಾರಣಿ ಮಗ ರಾಜಕೀಯ ಸೇರುವುದು, ವೈದ್ಯನ ಮಗ ವೈದ್ಯನಾಗುವುದು ಸಾಮಾನ್ಯವಾಗಿದೆ. ಆದರೆ ಸೈನಿಕನ ಮಗ ಸೈನಿಕ ಆಗುವುದು ವಿರಳ ಮತ್ತು ವಿಶೇಷ ಸಂಗತಿಯಾಗಿದೆ. ಹೀಗೆ ತಮ್ಮ ಊರಿನ ಯೋಧ ಸುಬೇದಾರ್ ಭೀಮರಾವ್ ಅವರಂತೆಯೇ ಪುತ್ರ ಭೂಷಣ್ ಕೂಡ ಈಗ ಸೈನ್ಯಕ್ಕೆ ಆಯ್ಕೆ ಆಗಿರುವ ಬಗ್ಗೆ ಹೆಮ್ಮೆಯಾಗುತ್ತಿದೆ ಎಂಬುದಾಗಿ ಸ್ಥಳೀಯರು ಸಂತಸ ವ್ಯಕ್ತಡಿಸುತ್ತಾರೆ.
ತರಬೇತಿ ಕೇಂದ್ರಗಳ ಅನಿವಾರ್ಯತೆ
ಭಾರತೀಯ ಸೇನೆಯಲ್ಲಿಸೇವೆ ಸಲ್ಲಿಸುವ ಅವಕಾಶಗಳು ಹಾಗೂ ನೇಮಕಾತಿ ಪ್ರಕ್ರಿಯೆ ಬಗ್ಗೆ ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆಗಳ ಯುವಜನರಲ್ಲಿಹೆಚ್ಚಿನ ಅರಿವು ಇಲ್ಲ. ಅದಕ್ಕಾಗಿ ಮಾಹಿತಿ, ತರಬೇತಿ ಕೇಂದ್ರಗಳು ಹೆಚ್ಚಾಗಬೇಕು. ಅಲ್ಲದೇ ಸೇನೆಯಿಂದ ನಿವೃತ್ತರಾದವರು ಕೂಡ ಸಂಘಟಿತರಾಗಿ ಕಾಲೇಜು ಮಟ್ಟದಲ್ಲಿಮಾಹಿತಿ, ಮಾರ್ಗದರ್ಶನ ನೀಡುವ ಕಾರ್ಯವಾಗಬೇಕು ಎನ್ನುತ್ತಾರೆ ಸುಬೇದಾರ್ ಭೀಮರಾವ್.
ಶಿರಸಿ: ನಾಲ್ಕು ದಶಕಗಳ ಹಿಂದೆ ಭಾರತೀಯ ಸೇನೆ ಸೇರಿ ಕಾರ್ಗಿಲ್ ಯುದ್ಧದಲ್ಲೂಭಾಗವಹಿಸಿದ್ದ ಯೋಧನ ಪುತ್ರನೀಗ ತಂದೆಯ ಮಾರ್ಗದರ್ಶನದಲ್ಲಿಸೈನ್ಯಕ್ಕೆ ಸೇರ್ಪಡೆಯಾಗಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ಸಮೀಪದ ಕಡಗೋಡ ಗ್ರಾಮದ ಸುಬೇದಾರ್ ಭೀಮರಾವ್ ಮಹಾದೇವ ನಾಯ್ಕ ಅವರ ಪುತ್ರ ಭೂಷಣ್ ದೇಶಸೇವೆಯ ಇಂಥದೊಂದು ಅನುಕರಣೀಯ ಮಾರ್ಗದಲ್ಲಿಸಾಗಿದ್ದಾರೆ.
1981ರಲ್ಲಿಬೆಳಗಾವಿ ನೇಮಕಾತಿ ಶಿಬಿರದಲ್ಲಿಸೈನ್ಯಕ್ಕೆ ಆಯ್ಕೆಯಾದ ಭೀಮರಾವ್ ನಾಯ್ಕ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಸುಬೇದಾರ್ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಸೇವೆಯ ಅವಧಿಯಲ್ಲಿಫಿರೋಜ್ಕೋಟ್, ಜಲಂಧರ್, ನಾಗಪುರ, ನಜಿರಾಬಾದ್, ಸಿಕ್ಕಿಂ ಮುಂತಾದ ಹಲವು ಕಡೆಗಳಲ್ಲಿಕರ್ತವ್ಯ ನಿರ್ವಹಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿಕೂಡ ಇವರು ದೇಶ ರಕ್ಷಣೆಯ ಮಹತ್ಕಾರ್ಯದಲ್ಲಿಪಾಲ್ಗೊಂಡಿದ್ದರು ಎನ್ನುವುದು ಹೆಮ್ಮೆಯ ಸಂಗತಿ.
ಪುತ್ರದ್ವಯರಿಗೂ ತವಕ:
ಸದ್ಯ ನಾಸಿಕ್ ನಿವಾಸಿಯಾಗಿರುವ ಭೀಮರಾವ್ ಅವರ ಇಬ್ಬರು ಮಕ್ಕಳು ಆರ್ಮಿ ಸ್ಕೂಲ್ನಲ್ಲಿಓದಿದ್ದು ಭಾರತೀಯ ಸೈನ್ಯದಲ್ಲಿಸೇವೆ ಸಲ್ಲಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದಾರೆ. ಹಿರಿಯ ಮಗ ಕೀರ್ತಿನಾಥ ಈಗಾಗಲೇ ಒಮ್ಮೆ ಸೈನಿಕ ನೇಮಕಾತಿ ಕಠಿಣ ಸವಾಲು ಎದುರಿಸಿ ಪ್ರಯತ್ನಿಸಿದ್ದು, ಮತ್ತೊಂದು ಅವಕಾಶಕ್ಕಾಗಿ ಸಜ್ಜಾಗಿದ್ದಾರೆ.
ಈ ಮಧ್ಯೆ, ಕಿರಿಯ ಮಗ ಭೂಷಣ್ ಸೈನಿಕ ನೇಮಕಾತಿ ಶಿಬಿರದಲ್ಲಿಪಾಲ್ಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದು ಚೆನ್ನೈದಲ್ಲಿಸೇರ್ಪಡೆಯಾಗಿದ್ದಾರೆ.
''ನನ್ನ ಇಬ್ಬರು ಮಕ್ಕಳು ಕೂಡ ಸೈನ್ಯದ ಸೇವೆ ಮತ್ತು ನಾಗರಿಕ ಸೇವಾ ನೇಮಕಾತಿಯನ್ವಯ ಕಾರ್ಯನಿರ್ವಹಣೆಯ ಅರಿವು ಹೊಂದಿದ್ದಾರೆ. ಅವೆರಡನ್ನೂ ತುಲನೆ ಮಾಡಿ ದೇಶ ಕಾಯುವ ಅಮೂಲ್ಯ ಅವಕಾಶ ಲಭ್ಯವಾಗುವ ಸೈನ್ಯದಲ್ಲಿಕಾರ್ಯನಿರ್ವಹಿಸುವುದಕ್ಕೆ ತೀರ್ಮಾನ ಮಾಡಿದ್ದಾರೆ'' ಎನ್ನುತ್ತಾರೆ ತಂದೆ ಭೀಮರಾವ್.
ಗ್ರಾಮಸ್ಥರ ಹೆಮ್ಮೆ:
ರಾಜಕಾರಣಿ ಮಗ ರಾಜಕೀಯ ಸೇರುವುದು, ವೈದ್ಯನ ಮಗ ವೈದ್ಯನಾಗುವುದು ಸಾಮಾನ್ಯವಾಗಿದೆ. ಆದರೆ ಸೈನಿಕನ ಮಗ ಸೈನಿಕ ಆಗುವುದು ವಿರಳ ಮತ್ತು ವಿಶೇಷ ಸಂಗತಿಯಾಗಿದೆ. ಹೀಗೆ ತಮ್ಮ ಊರಿನ ಯೋಧ ಸುಬೇದಾರ್ ಭೀಮರಾವ್ ಅವರಂತೆಯೇ ಪುತ್ರ ಭೂಷಣ್ ಕೂಡ ಈಗ ಸೈನ್ಯಕ್ಕೆ ಆಯ್ಕೆ ಆಗಿರುವ ಬಗ್ಗೆ ಹೆಮ್ಮೆಯಾಗುತ್ತಿದೆ ಎಂಬುದಾಗಿ ಸ್ಥಳೀಯರು ಸಂತಸ ವ್ಯಕ್ತಡಿಸುತ್ತಾರೆ.
ತರಬೇತಿ ಕೇಂದ್ರಗಳ ಅನಿವಾರ್ಯತೆ
ಭಾರತೀಯ ಸೇನೆಯಲ್ಲಿಸೇವೆ ಸಲ್ಲಿಸುವ ಅವಕಾಶಗಳು ಹಾಗೂ ನೇಮಕಾತಿ ಪ್ರಕ್ರಿಯೆ ಬಗ್ಗೆ ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆಗಳ ಯುವಜನರಲ್ಲಿಹೆಚ್ಚಿನ ಅರಿವು ಇಲ್ಲ. ಅದಕ್ಕಾಗಿ ಮಾಹಿತಿ, ತರಬೇತಿ ಕೇಂದ್ರಗಳು ಹೆಚ್ಚಾಗಬೇಕು. ಅಲ್ಲದೇ ಸೇನೆಯಿಂದ ನಿವೃತ್ತರಾದವರು ಕೂಡ ಸಂಘಟಿತರಾಗಿ ಕಾಲೇಜು ಮಟ್ಟದಲ್ಲಿಮಾಹಿತಿ, ಮಾರ್ಗದರ್ಶನ ನೀಡುವ ಕಾರ್ಯವಾಗಬೇಕು ಎನ್ನುತ್ತಾರೆ ಸುಬೇದಾರ್ ಭೀಮರಾವ್.