ಆ್ಯಪ್ನಗರ

ಗೀತೆಯು ಸರ್ವ ಶಾಸ್ತ್ರಗಳ ಸಾರ: ಶಂಕರ ಭಟ್ಟ

ಯಲ್ಲಾಪುರ : ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಅಂಗವಾಗಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಗೀತಾ ಕಂಠಪಾಠ ಮತ್ತು ಭಾಷಣ ಸ್ಪರ್ಧೆಯು ಇಲ್ಲಿನ ನಾಯಕನಕೆರೆ ಶ್ರೀ ಶಾರದಾಂಬಾ ಶಿಕ್ಷ ಣ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ನಡೆಯಿತು.

Vijaya Karnataka 9 Dec 2018, 5:00 am
ಯಲ್ಲಾಪುರ : ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಅಂಗವಾಗಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಗೀತಾ ಕಂಠಪಾಠ ಮತ್ತು ಭಾಷಣ ಸ್ಪರ್ಧೆಯು ಇಲ್ಲಿನ ನಾಯಕನಕೆರೆ ಶ್ರೀ ಶಾರದಾಂಬಾ ಶಿಕ್ಷ ಣ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ನಡೆಯಿತು.
Vijaya Karnataka Web KWR-8 YLP 1


ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ವರ್ಣವಲ್ಲೀ ಸಂಸ್ಕೃತ ವಿದ್ಯಾಲಯದ ಪ್ರಾಧ್ಯಾಪಕ ವಿದ್ವಾನ್‌ ಶಂಕರ ಭಟ್ಟ ಬಾಲೀಗದ್ದೆ ಮಾತನಾಡಿ, ಮನುಷ್ಯನ ಮಾನಸಿಕ ಹಾಗೂ ದೈಹಿಕ ಸ್ವಾಸ್ತ್ಯಕ್ಕೆ ಪೂರಕವಾದ ಭಗವದ್ಗೀತೆಯು ಜೀವನದ ಎಲ್ಲ ಉತ್ಕೃಷ್ಠ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶೋಕ, ಮೋಹವೆಂಬ ಸಮುದ್ರದಲ್ಲಿ ಮುಳುಗಿದ್ದ ಅರ್ಜುನನಿಗೆ ಶ್ರೀಕೃಷ್ಣನು ಉಪದೇಶಿದ ಗೀತೆಯು ಸರ್ವ ಶಾಸ್ತ್ರಗಳ ಸಾರವಾಗಿದೆ. ಗೀತೆಯು ವೇದ, ಉಪನಿಷತ್ತುಗಳಿಗೆ ಸಮಾನವಾಗಿದೆ ಎಂದರು.

ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಜೋಯಿಡಾ, ಶಿರಸಿ, ಯಲ್ಲಾಪುರ, ಕುಮಟಾ, ಅಂಕೋಲಾ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜುಗಳ 58 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಭಿಯಾನ ಸಮಿತಿಯ ಜಿಲ್ಲಾ ಸಂಚಾಲಕರಾದ ಸುಬ್ರಾಯ ನಾಯ್ಕ ಕುಮಟಾ, ಜಿಲ್ಲಾ ಸಮಿತಿಯ ಸದಸ್ಯರಾದ ಶಂಕರ ಭಟ್ಟ ತಾರೀಮಕ್ಕಿ, ಡಿ.ಎನ್‌.ಗಾಂವ್ಕಾರ್‌, ತಾಲೂಕಾ ಸಮಿತಿಯ ಅಧ್ಯಕ್ಷ ಎಸ್‌.ಎಲ್‌.ಜಾಲೀಸತ್ಗಿ, ಗೀತಾ ಉಪನ್ಯಾಸಕ ಗಣಪತಿ ಭಟ್ಟ ಯಲ್ಲಾಪುರ, ಕಾರ್ಯದರ್ಶಿ ಭಾಸ್ಕರ್‌ ಹೆಗಡೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜೇತರು: ಭಾಷಣ ಕಾಲೇಜು ವಿಭಾಗ: ದೀಪ್ತಿ ಭಟ್ಟ ಶಿರಸಿ ಪ್ರಥಮ, ನವ್ಯಾ ಭಟ್ಟ ಶಿರಸಿ ದ್ವಿತೀಯ, ಸ್ನೇಹಾ ನಾಯ್ಕ್‌ ಕುಮಟಾ ತೃತೀಯ

ಪ್ರೌಢ ಶಾಲೆ ವಿಭಾಗ; ವಿನಾಯಕ ಭಟ್ಟ ವಾನಳ್ಳಿ ಶಿರಸಿ (ಪ್ರ), ಮಹಾಲಸಾ ಪೈ ಹೆಗಡೆಕಟ್ಟಾ ಶಿರಸಿ (ದ್ವಿ), ಅಜಯ್‌ ಎಸ್‌.ಹೆಗಡೆ (ತೃತೀಯ) ಭಗವದ್ಗೀತಾ ಕಂಠ ಪಾಠ ಸ್ಪರ್ಧೆ; ಪ್ರಾಥಮಿಕ ಶಾಲೆ ವಿಭಾಗ ; ಯಶಸ್ವಿನಿ ಹೆಗಡೆ ಗದ್ದೇಹಳ್ಳಿ ಶಿರಸಿ ಪ್ರಥಮ, ಚೇತನಾ ಭಾಗ್ವತ್‌ ಛಾಪಖಂಡ ಜೋಯಿಡಾ ದ್ವಿತೀಯ, ಅಖಿಲಾ ಹೆಗಡೆ ತೃತೀಯ. ಪ್ರೌಢ ಶಾಲೆ ವಿಭಾಗ ಕಂಠಪಾಠ ; ಮಹಿಮಾ ಹೆಗಡೆ ಶಿರಸಿ ಪ್ರಥಮ, ಶ್ರೇಯಾ ಶಾನುಭಾಗ ಕುಮಟಾ ದ್ವಿತೀಯ, ಕಾರ್ತಿಕ್‌ ಗುರುಪ್ರಸಾದ ಶುಕ್ಲ ಕುಮಟಾ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.

ನಿರ್ಣಾಯಕರಾಗಿ ಯಕ್ಷ ಗಾನ ಅರ್ಥಧಾರಿ ಎಮ್‌.ಎನ್‌.ಹೆಗಡೆ ಹಳವಳ್ಳಿ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಶಾರದಾಂಬಾ ಸಂಸ್ಕೃತ ಪಾಠ ಶಾಲೆಯ ಅಧ್ಯಾಪಕರಾದ ನರಸಿಂಹ ಭಟ್ಟ, ಶಿವರಾಮ ಭಾಗ್ವತ್‌, ಉಮ್ಮಚಗಿ ಸಂಸ್ಕೃತ ಪಾಠಶಾಲೆಯ ವಿ.ರಾಜೇಶ ಶಾಸ್ತ್ರಿ, ಸ್ವರ್ಣವಲ್ಲೀ ಸಂಸ್ಕೃತ ಪಾಠಶಾಲೆಯ ವಿ.ಶಂಕರ ಭಟ್ಟ ಬಾಲೀಗದ್ದೆ ಕಾರ್ಯ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ