ಆ್ಯಪ್ನಗರ

ಮತಗಟ್ಟೆಗೆ ತೆರಳಿದ ಸಿಬ್ಬಂದಿ

ಶಿರಸಿ : ಚುನಾವಣೆ ಕರ್ತವ್ಯ ನಿಮಿತ್ತ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತೆರೆಯಲಾಗಿರುವ ಮತಗಟ್ಟೆಗಳತ್ತ ಮತಯಂತ್ರದೊಂದಿಗೆ ಸೋಮವಾರ ಸಿಬ್ಬಂದಿ ತೆರಳಿದರು.

Vijaya Karnataka 23 Apr 2019, 5:00 am
ಶಿರಸಿ : ಚುನಾವಣೆ ಕರ್ತವ್ಯ ನಿಮಿತ್ತ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತೆರೆಯಲಾಗಿರುವ ಮತಗಟ್ಟೆಗಳತ್ತ ಮತಯಂತ್ರದೊಂದಿಗೆ ಸೋಮವಾರ ಸಿಬ್ಬಂದಿ ತೆರಳಿದರು.
Vijaya Karnataka Web SRS-22SRS2B


ತಾಲೂಕು ಮತಗಟ್ಟೆಗಳು
ಶಿರಸಿ 147
ಸಿದ್ದಾಪುರ 117
ಒಟ್ಟು 264

ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು
ಮತಗಟ್ಟೆ ಅಧಿಕಾರಿಗಳು 1164
ಸೆಕ್ಟರ್‌ ಅಧಿಕಾರಿಗಳು 25
ಪ್ಲಾಯಿಂಗ್‌ ಅಧಿಕಾರಿಗಳು 7
ವಿಎಸ್‌ಟಿ ತಂಡದ ಅಧಿಕಾರಿಗಳು 5
ಎಸ್‌ಎಸ್‌ಟಿ ತಂಡದ ಅಧಿಕಾರಿಗಳು 4

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೋಮವಾರ ಬೆಳಗ್ಗೆ ಇಲ್ಲಿಯ ಮಾರಿಕಾಂಬಾ ಪ್ರೌಢಶಾಲಾ ಆವಾರದಲ್ಲಿ ಜಮಾವಣೆಗೊಂಡಿದ್ದರು. ಮಸ್ಟರಿಂಗ್‌ ಕಾರ್ಯವು ಬೆಳಗ್ಗೆಯಿಂದ ಆರಂಭಗೊಂಡಿತ್ತು. ಸಿಬ್ಬಂದಿಗೆ ಮತಗಟ್ಟೆ ಸಲಕರಣೆಗಳನ್ನು ನೀಡಿ ತರಬೇತಿ ನೀಡಲಾಯಿತು. ಅವರನ್ನು ಕರೆದೊಯ್ಯಲು ಬಸ್‌ಗಳು, ಖಾಸಗಿ ವಾಹನಗಳು ಸರತಿಯಲ್ಲಿ ನಿಂತಿದ್ದವು. ತಮಗೆ ನಿಯೋಜಿಸಿದ ಮತಗಟ್ಟೆಗಳಿಗೆ ಮತ ಯಂತ್ರ ಹಿಡಿದು ವಾಹನವೇರಿ ತೆರಳಿದರು. ಇಲ್ಲಿಯ ಮಾರಿಕಾಂಬಾ ಪ್ರೌಢಶಾಲಾ ಕಟ್ಟಡದಲ್ಲಿರುವ ಭದ್ರತಾ ಕೊಠಡಿಯಲ್ಲಿ ಭದ್ರತೆಯಲ್ಲಿರುವ 304 ಬಿಯು ಮತ್ತು ಸಿಯು ಹಾಗೂ 317ವಿವಿ ಪ್ಯಾಟ್‌ ಮತಯಂತ್ರಗಳನ್ನು ಆಯಾ ಮತಗಟ್ಟೆಗೆ ಸಾಗಿಸಲಾಯಿತು.

ಮತಗಟ್ಟೆ ಸ್ಥಳ ಬದಲಾವಣೆ

ನಗರದಲ್ಲಿ ಈ ಬಾರಿ ನಾಲ್ಕು ಮತಗಟ್ಟೆ ಸ್ಥಳಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಮತಗಟ್ಟೆ ಸಂಖ್ಯೆ 98ನ್ನು ಪ್ರೊಗ್ರೆಸ್ಸಿವ್‌ ಹೈಸ್ಕೂಲ್‌ನಿಂದ ಶಿವಾಜಿ ಚೌಕದ ಸರಕಾರಿ ಉರ್ದು ಹೈಸ್ಕೂಲ್‌ಗೆ, ಮತಗಟ್ಟೆ ಸಂಖ್ಯೆ 99ನ್ನು ಪ್ರೊಗ್ರೆಸ್ಸಿವ್‌ ಹೈಸ್ಕೂಲ್‌ನಿಂದ ಮಾರಿಗುಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮತಗಟ್ಟೆ ಸಂಖ್ಯೆ 67ನ್ನು ಕೆಎಸ್‌ಆರ್‌ಟಿಸಿ ಡಿಪೋದಿಂದ ಹುಬ್ಬಳ್ಳಿ ರಸ್ತೆ ಶ್ರೀ ಮಹಾಲಿಂಗಪ್ಪ ಭೂಮಾ ಹೈಸ್ಕೂಲ್‌ಗೆ, ಮತಗಟ್ಟೆ ಸಂಖ್ಯೆ 210 ಹುಲಿಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹುಲಿಮನೆ ಅಂಗನವಾಡಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.

ಮತಗಟ್ಟೆಯ ನೂರು ಮೀಟರ್‌ ಒಳಗೆ ಯಾರು ನಿಲ್ಲದಂತೆ ನೋಡಿಕೊಳ್ಳಬೇಕು ಎಂಬ ಸೂಚನೆಯನ್ನು ಪೊಲೀಸ್‌ ಸಿಬ್ಬಂದಿಗಳಿಗೆ ಹಿರಿಯ ಅಧಿಕಾರಿಗಳು ನೀಡಿದರು. ಅದೇ ರೀತಿ ಈ ಗಡಿ ಗುರುತನ್ನು ಹಾಕಲು ಸುಣ್ಣದ ಪ್ಯಾಕೇಟ್‌ಗಳನ್ನು ಸಾಗಿಸಲಾಯಿತು.

ಸರತಿಯಲ್ಲಿ ನಿಂತ ವಾಹನಗಳು

ಮತಗಟ್ಟೆ ಸಿಬ್ಬಂದಿಗಳನ್ನು ಕರೆದೊಯ್ಯಲು ಮಾರಿಕಾಂಬಾ ಸರಕಾರಿ ಪ್ರೌಢಶಾಲಾ ಆವಾರದಲ್ಲಿ ವಾಹನಗಳು ಸರತಿಯಲ್ಲಿ ನಿಂತಿದ್ದವು. ಸಿಬ್ಬಂದಿಗಳನ್ನು ಮತಗಟ್ಟೆಗೆ ತಲುಪಿಸಲು 26ಕೆಎಸ್‌ಆರ್‌ಟಿಸಿ ಬಸ್‌ಗಳು, 39ಟೆಂಪೋ, 29ಜೀಪ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ಕೊನೆಯ ಹಂತದ ತರಬೇತಿಯೊಂದಿಗೆ...

ಮತಗಟ್ಟೆಗಳಿಗೆ ನಿಯೋಜಿಸಿದ ಸಿಬ್ಬಂದಿಗಳಿಗೆ ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಲಾಗಿತ್ತು. ಅದರಂತೆ ಮತಗಟ್ಟೆಗೆ ತೆರಳುವ ಮುನ್ನ ಸೋಮವಾರ ಬೆಳಗ್ಗೆ ಇಲ್ಲಿನ ಮಾರಿಕಾಂಬಾ ಪ್ರೌಢಶಾಲಾ ಕೊಠಡಿಗಳಲ್ಲಿ ಇವಿಎಂ ಯಂತ್ರಗಳ ನೀಡಿ ಇನ್ನೊಮ್ಮೆ ತರಬೇತಿ ನೀಡಲಾಯಿತು. ಸಹಾಯಕ ಚುನಾವಣಾ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಹಾಗೂ ಇತರ ಅಧಿಕಾರಿಗಳು ಸಿಬ್ಬಂದಿಗಳಿಗೆ ಮಾಹಿತಿ, ಮಾರ್ಗದರ್ಶನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ