ಆ್ಯಪ್ನಗರ

ಡಿಕೆಶಿ ವಿಷಯದಲಿ ಕೇಂದ್ರದ್ದು ದ್ವೇಷದ ರಾಜಕೀಯ

ಕುಮಟಾ : ಸಮಾಜವನ್ನು ಕಟ್ಟುವ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ ಅವರನ್ನು ಕಾನೂನಿನ ನೆಪವೊಡ್ಡಿ ಸರಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈ ಕ್ರಮವನ್ನು ಒಕ್ಕಲಿಗ ಸಮುದಾಯ ಪಕ್ಷಾತೀತವಾಗಿ ವಿರೋಧಿಸುತ್ತದೆ ಎಂದು ಒಕ್ಕಲಿಗ ಸಮುದಾಯದ ಮುಖಂಡ ಭಾಸ್ಕರ ಪಟಗಾರ ತಿಳಿಸಿದರು.

Vijaya Karnataka 8 Sep 2019, 5:00 am
ಕುಮಟಾ : ಸಮಾಜವನ್ನು ಕಟ್ಟುವ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ ಅವರನ್ನು ಕಾನೂನಿನ ನೆಪವೊಡ್ಡಿ ಸರಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈ ಕ್ರಮವನ್ನು ಒಕ್ಕಲಿಗ ಸಮುದಾಯ ಪಕ್ಷಾತೀತವಾಗಿ ವಿರೋಧಿಸುತ್ತದೆ ಎಂದು ಒಕ್ಕಲಿಗ ಸಮುದಾಯದ ಮುಖಂಡ ಭಾಸ್ಕರ ಪಟಗಾರ ತಿಳಿಸಿದರು.
Vijaya Karnataka Web the theme of dikeshi is the politics of hate
ಡಿಕೆಶಿ ವಿಷಯದಲಿ ಕೇಂದ್ರದ್ದು ದ್ವೇಷದ ರಾಜಕೀಯ


ಶನಿವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು ದೇಶದಲ್ಲಿಇಡಿ, ಐಟಿ ಇಲಾಖೆ ಕಣ್ಣು ತಪ್ಪಿಸಿ ಅದೆಷ್ಟೋ ಅಕ್ರಮ ಹಣ ಹೊಂದಿದವರೂ ಇದ್ದಾರೆ. ಆದರೆ ಇಂತಹ ಸ್ವಾಯತ್ತ ಇಲಾಖೆಗಳು ಸರಕಾರದ ದ್ವೇಷದ ರಾಜಕಾರಣಕ್ಕೆ ಕೆಲಸ ಮಾಡುತ್ತಿರುವುದು ಆಘಾತಕಾರಿ ಸಂಗತಿ. ಡಿ.ಕೆ.ಶಿವಕುಮಾರ ಒಕ್ಕಲಿಗರ ನಾಯಕ. ಇಂತಹ ನಾಯಕನನ್ನು ನಿರಂತರ ವಿಚಾರಣೆಯ ನೆಪದಲ್ಲಿಶೋಷಣೆ ಮಾಡುತ್ತಿರುವುದು ಖಂಡನೀಯ. ಸರಕಾರ ಇಂತಹ ದುರುದ್ದೇಶಪೂರಿತ ಧೋರಣೆ ತಳೆದರೆ ದಂಗೆ ಏಳಬೇಕಾಗುತ್ತದೆ ಎಂದು ಭಾಸ್ಕರ ಪಟಗಾರ ಎಚ್ಚರಿಸಿದ್ದಾರೆ. ಡಿ.ಕೆ.ಶಿವಕುಮಾರ ಅವರನ್ನು ತಕ್ಷಣ ವಿಚಾರಣೆ ಪೂರ್ಣಗೊಳಿಸಿ 13ನೇ ತಾರೀಖಿನೊಳಗೆ ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಜಿ.ಪಂ. ಮಾಜಿ ಸದಸ್ಯ ಕೃಷ್ಣ ಗೌಡ ಮಾತನಾಡಿ, ಕೇಂದ್ರ ಸರಕಾರ ಇಡಿ ಬಳಸಿಕೊಂಡು ಡಿ.ಕೆ.ಶಿವಕುಮಾರ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದೆ. ಡಿ.ಕೆ.ಶಿವಕುಮಾರ ಅವರು ಇಡಿ ವಿಚಾರಣೆಗೆ ಪ್ರತಿಯೊಂದು ಹಂತದಲ್ಲೂಸ್ಪಂದಿಸುತ್ತಿದ್ದಾರೆ. ಅವರೊಬ್ಬ ಒಕ್ಕಲಿಗರ ಸಮುದಾಯದ ಪ್ರಭಾವಿ ನಾಯಕ. ಎಲ್ಲಹಂತದಲ್ಲೂಕಾನೂನನ್ನು ಅವರು ಗೌರವಿಸಿದ್ದಾರೆ. ಅವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರದ ಇದೇ ರೀತಿ ಮುಂದುವರೆಸಿದರೆ ಭಾರಿ ಪ್ರಮಾಣದಲ್ಲಿಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ದಿವಗಿ ಗ್ರಾ.ಪಂ. ಅಧ್ಯಕ್ಷ ಕೃಷ್ಣ ಗೌಡ, ನಿವೃತ್ತ ಮುಖ್ಯಾಧ್ಯಾಪಕ ಜಿ.ಕೆ.ಪಟಗಾರ, ಹಿರಿಯರಾದ ಶಿವಪ್ಪ ಪಟಗಾರ, ಹೊನ್ನಾವರದ ಮಂಜುನಾಥ ಗೌಡ, ಬರ್ಗಿ ಗ್ರಾಮ ಪಂಚಾಯತ ಅಧ್ಯಕ್ಷ ರಾಮಾ ಪಟಗಾರ, ಸುರೇಶ ಪಟಗಾರ, ಮಂಜುನಾಥ ಗೌಡ, ಹನುಮಂತ ಪಟಗಾರ ಮೊದಲಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ