ಆ್ಯಪ್ನಗರ

ಹುಲಿ ಬಂದಿದೆ ವದಂತಿ: ಆತಂಕ

ಮುಂಡಗೋಡ: ಹಬ್ಬಳ್ಳಿ ರಸ್ತೆಯಲ್ಲಿ ಹುಲಿ ಬಂದಿದೆ ಎನ್ನುವ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಆತಂಕ ಸೃಷ್ಟಿಸಿದೆ. ತಾಲೂಕಿನಲ್ಲಿ ವಿವಿಧ ಭಾಗದಲ್ಲಿ ಚಿರತೆಗಳು ವಾಹನ ಸವಾರರಿಗೆ ಕಂಡು ಬಂದಿದ್ದವು. ಪಟ್ಟಣದ ಹೊರವಲಯ ಬಂಕಾಪುರ ರಸ್ತೆಯಲ್ಲಿ ಒಂದು ಚಿರತೆ ಕಂಡು ಬಂದರೆ ವಡಗಟ್ಟ ಹಾಗೂ ಹುಬ್ಬಳ್ಳಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಚಿರತೆಯೊಂದು ಹಲವಾರು ಬಾರಿ ದರ್ಶನ ನೀಡಿತ್ತು. ಇದರಿಂದ ಈ

Vijaya Karnataka 4 Dec 2018, 5:00 am
ಮುಂಡಗೋಡ: ಹಬ್ಬಳ್ಳಿ ರಸ್ತೆಯಲ್ಲಿ ಹುಲಿ ಬಂದಿದೆ ಎನ್ನುವ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಆತಂಕ ಸೃಷ್ಟಿಸಿದೆ. ತಾಲೂಕಿನಲ್ಲಿ ವಿವಿಧ ಭಾಗದಲ್ಲಿ ಚಿರತೆಗಳು ವಾಹನ ಸವಾರರಿಗೆ ಕಂಡು ಬಂದಿದ್ದವು. ಪಟ್ಟಣದ ಹೊರವಲಯ ಬಂಕಾಪುರ ರಸ್ತೆಯಲ್ಲಿ ಒಂದು ಚಿರತೆ ಕಂಡು ಬಂದರೆ ವಡಗಟ್ಟ ಹಾಗೂ ಹುಬ್ಬಳ್ಳಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಚಿರತೆಯೊಂದು ಹಲವಾರು ಬಾರಿ ದರ್ಶನ ನೀಡಿತ್ತು. ಇದರಿಂದ ಈ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸವಾರರು ಸಂಚರಿಸಲು ಭಯ ಪಡುತ್ತಿದ್ದಾರೆ.
Vijaya Karnataka Web KWR-3MND3A
ರಾತ್ರಿ ವೇಳೆ ಹುಲಿ ರಸ್ತೆ ದಾಟುತ್ತಿರುವುದು. ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಚಿತ್ರ.


ಹುಲಿ ಬಂದಿದೆ?: ಇದೀಗ ತಾಲೂಕಿನ ಹುಬ್ಬಳ್ಳಿ ರಸ್ತೆಯಲ್ಲಿ ಹುಲಿಯೊಂದು ಬಂದಿದೆ. ಈ ಹುಲಿಯು ಗದಗನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಿಮದ ತಪ್ಪಿಸಿಕೊಂಡು ಬಂದಿದೆ. ಎಂದು ಸುದ್ದಿ ಹಬ್ಬಿಸಿದ್ದು ವಾಟ್ಸಪ್‌ಗಳಲ್ಲಿ ಹುಲಿಯೂ ಹಸುವೊಂದನ್ನು ತಿನ್ನುತ್ತಿರುವ ಫೊಟೊ ಹರಿದಾಡುತ್ತಿದೆ. ಅದರ ಜೊತೆಯಲ್ಲಿ ಮುನುಷ್ಯನನ್ನು ತಿಂದು ಹಾಕಿರುವ ಚಿತ್ರ ಹಾಗೂ ಹುಲಿಯೂ ರಾತ್ರಿ ವೇಳೆ ರಸ್ತೆ ದಾಟುತ್ತಿರುವ ಪೋಟೋ ಹೀಗೆ ನಾಲ್ಕೈದು ಪೋಟೋಗಳು ಸದ್ಯ ಮುಂಡಗೋಡ ತಾಲೂಕಿನ ವಾಟ್ಸಪ್‌ಗಳಲ್ಲಿ ಹರಿದಾಡುತ್ತಿದೆ ಇದರಿಂದ ಜನರಲ್ಲಿ ಭಯವುಂಟಾಗಿದೆ.

ಸುಳ್ಳು ಸುದ್ದಿ: ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಚಿತ್ರಗಳು ಹಾಗೂ ಮಾಹಿತಿಯೂ ಸುಳ್ಳು ಸುದ್ದಿಯಾಗಿದ್ದು ಇದೂ ಯಾರೋ ಕಿಡಗೇಡಿಗಳು ಮಾಡಿರುವ ಕೃತ್ಯವಾಗಿದೆ ಮುಂಡಗೋಡ ತಾಲೂಕಿನಲ್ಲಿ ಯಾವೂದೆ ಹುಲಿಯೂ ಬಂದಿಲ್ಲ ಹಾಗೂ ಹಸು ಮನುಷ್ಯನನ್ನು ತಿಂದು ಹಾಕಿಲ್ಲ ಇದೂ ಸುಳ್ಳು ಸುದ್ದಿಯಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ