ಆ್ಯಪ್ನಗರ

ದಿ.ಉಲ್ಲಾಸ ಭಟ್‌ ಶ್ರದ್ಧಾಂಜಲಿ ಸಭೆ

ಕಾರವಾರ : ಇಲ್ಲಿನ ಹಿರಿಯ ಬಿಜೆಪಿ ಮುಖಂಡ ಉಲ್ಲಾಸ ಭಟ್‌ ಅವರ ನಿಧನಕ್ಕೆ ಸಂತಾಪ ಸೂಚಿಸಲು ಸದಾಶಿವಗಡದ ಗ್ರೊವರ್ಸ ಕ್ಲಬ್‌ ಸಭಾಂಗಣದಲ್ಲಿಭಾನುವಾರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

Vijaya Karnataka 6 Nov 2019, 5:00 am
ಕಾರವಾರ : ಇಲ್ಲಿನ ಹಿರಿಯ ಬಿಜೆಪಿ ಮುಖಂಡ ಉಲ್ಲಾಸ ಭಟ್‌ ಅವರ ನಿಧನಕ್ಕೆ ಸಂತಾಪ ಸೂಚಿಸಲು ಸದಾಶಿವಗಡದ ಗ್ರೊವರ್ಸ ಕ್ಲಬ್‌ ಸಭಾಂಗಣದಲ್ಲಿಭಾನುವಾರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web the ullasa bhat shraddhanjali meeting
ದಿ.ಉಲ್ಲಾಸ ಭಟ್‌ ಶ್ರದ್ಧಾಂಜಲಿ ಸಭೆ


ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ದಿವಂಗತ ಉಲ್ಲಾಸ ಭಟ್‌ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪೂಷ್ಪಾಂಜಲಿ ಸಲ್ಲಿಸಿದರು. ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಸಿದರು. ನಂತರ ಗ್ರಾಮೀಣ ಘಟಕದ ಅಧ್ಯಕ್ಷ ಮಾರುತಿ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್‌, ಜಿಲ್ಲಾವಕ್ತಾರ ರಾಜೇಶ ನಾಯ್ಕ, ನಾಗರಾಜ ಜೋಶಿ, ದೀಪಕ ದೇಸಾಯಿ ಮಾತನಾಡಿ, ಉಲ್ಲಾಸ ಭಟ್‌ ಪಕ್ಷವನ್ನ ತಳಮಟ್ಟದಿಂದ ಸಂಘಟಿಸುವಲ್ಲಿವಹಿಸಿದ ಪಾತ್ರವನ್ನು ಹಾಗೂ ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿನಿಸ್ವಾರ್ತದಿಂದ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಸಂದೀಪ ಕಾಂಬ್ಳೆ ವಂದಿಸಿದರು. ಸಭೆಯಲ್ಲಿರಾಜನ್‌ ಕೊಳಮಕರ, ಸತೀಶ ಅಮದಳ್ಳಿ, ಸುದೇಶ ಮರಾಠೆ, ನಾಗೇಶ ಕುರ್ಡೆಕರ, ಕೀಶನ್‌ ಕಾಂಬ್ಳೆ ಹಾಗೂ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ