ಆ್ಯಪ್ನಗರ

ಅಸ್ಥಿರ ಸರಕಾರ ಉಳಿಸುವ ಪ್ರಯತ್ನ: ಪ್ರಮೋದ ಹೆಗಡೆ

ಯಲ್ಲಾಪುರ : ಮುಳುಗಿದ ಹಡಗಾದ ಮೈತ್ರಿ ಸರಕಾರದ ವಿರುದ್ಧ ರಾಜ್ಯಾಧ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಅಸ್ಥಿರ ಸರಕಾರ ಉಳಿಸಿಕೊಳ್ಳವ ಪ್ರಯತ್ನ ಬಹಳ ದಿನ ಉಳಿಯುವುದಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಹೇಳಿದರು.

Vijaya Karnataka 10 Jul 2019, 5:00 am
ಯಲ್ಲಾಪುರ : ಮುಳುಗಿದ ಹಡಗಾದ ಮೈತ್ರಿ ಸರಕಾರದ ವಿರುದ್ಧ ರಾಜ್ಯಾಧ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಅಸ್ಥಿರ ಸರಕಾರ ಉಳಿಸಿಕೊಳ್ಳವ ಪ್ರಯತ್ನ ಬಹಳ ದಿನ ಉಳಿಯುವುದಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಹೇಳಿದರು.
Vijaya Karnataka Web the unstable governments attempt to save
ಅಸ್ಥಿರ ಸರಕಾರ ಉಳಿಸುವ ಪ್ರಯತ್ನ: ಪ್ರಮೋದ ಹೆಗಡೆ


ಅವರು ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿ, ಕುಮಾರಸ್ವಾಮಿಯವರು ಸರಕಾರ ಮುಳುಗುತ್ತಿರುವ ಸಂದರ್ಭದಲ್ಲೆ 800 ಸರಕಾರಿ ನೌಕರರ ವರ್ಗಾವಣೆಗೆ ಆದೇಶ ನೀಡುತ್ತಿದ್ದಾರೆ. ರೇವಣ್ಣನವರು ಕಾಮಗಾರಿ ನಡೆಯುವ ಮೊದಲೆ ಬಿಲ್‌ಗಳನ್ನು ಪಾಸು ಮಾಡುತ್ತಿದ್ದಾರೆ. ತರಾತುರಿಯಲ್ಲಿ ಉಪ ಸಂಪುಟ ಸಮಿತಿ 3600 ಜಮೀನನ್ನು ಜಿಂದಾಲ್‌ಗೆ ಅಗ್ಗದ ದರದಲ್ಲಿ ನೀಡಲು ನಿರ್ಧರಿಸಿದೆ ಎಂದು ಅರೋಪಿಸಿದರು.

ಇಂತಹ ಸರಕಾರ ತಕ್ಷ ಣ ತೊಲಗಬೇಕೆಂದು ಆಗ್ರಹಿಸುತ್ತೇನೆ. ಮತ್ತೊಂದು ಕಡೆ ಭೀಕರ ಬರಗಾಲ, ಕುಡಿಯಲು ನೀರಿಲ್ಲ. ಬಿಸಿಲಿನ ತಾಪಕ್ಕೆ ತೋಟಗಳು ಸುಟ್ಟು ಹೋಗಿವೆ. ಬೆಳೆಗಳಿಗೆ ರೋಗ ತಗುಲಿ ನಾಶವಾಗುತ್ತಿವೆ. ರಸ್ತೆಗಳು ಪೂರ್ಣ ಹಾಳಾಗಿವೆ. ಅಭಿವೃದ್ಧಿ ಕೆಲಸ ಕೇಳುವವರೆ ಇಲ್ಲ. ಇಂತಹ ಸರಕಾರದಿಂದಾಗಿ ಜನ ತತ್ತರಿಸಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ