ಆ್ಯಪ್ನಗರ

ಕಷ್ಟಪಟ್ಟರೆ ಮಾತ್ರ ದೇವರ ದರ್ಶನ

ಸಿದ್ದಾಪುರ : ಶೈವ-ವೈಷ್ಣವ ಭಕ್ತರು ದೇವರ ಸಲುವಾಗಿ ಜಗಳವಾಡುತ್ತಾರೆ ಎಂದು ಹರಿ-ಹರರಾಗಲಿ ಯಾವುದೇ ಬೇಧವಿಲ್ಲಎಂದು ಸಾರುವ ಸಲುವಾಗೇ ಹರಿಹರ ಸ್ವರೂಪನಾದ ಅಯ್ಯಪ್ಪಸ್ವಾಮಿಯ ಅವತಾರವಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

Vijaya Karnataka 16 Jan 2020, 5:00 am
ಸಿದ್ದಾಪುರ : ಶೈವ-ವೈಷ್ಣವ ಭಕ್ತರು ದೇವರ ಸಲುವಾಗಿ ಜಗಳವಾಡುತ್ತಾರೆ ಎಂದು ಹರಿ-ಹರರಾಗಲಿ ಯಾವುದೇ ಬೇಧವಿಲ್ಲಎಂದು ಸಾರುವ ಸಲುವಾಗೇ ಹರಿಹರ ಸ್ವರೂಪನಾದ ಅಯ್ಯಪ್ಪಸ್ವಾಮಿಯ ಅವತಾರವಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
Vijaya Karnataka Web the vision of god is the only thing that is difficult
ಕಷ್ಟಪಟ್ಟರೆ ಮಾತ್ರ ದೇವರ ದರ್ಶನ


ಅವರು ಮಂಗಳವಾರ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿಶ್ರೀ ಅಯ್ಯಪ್ಪಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅಂಬಾರಿಯಲ್ಲಿಶ್ರೀ ಅಯ್ಯಪ್ಪಸ್ವಾಮಿಯ ಮೆರವಣಿಗೆಗೆ ಚಾಲನೆ ನೀಡಿ ಶ್ರೀಧರ್ಮಶಾಸ್ತ ವೇದಿಕೆಯಲ್ಲಿಆಶೀರ್ವಚನ ನೀಡಿದರು.

ಧಾರ್ಮಿಕ ಸಂಘರ್ಷಗಳು ಇತಿಹಾಸದಲ್ಲಿಸಾಕಷ್ಟು ದಾಖಲಾಗಿವೆ. ಇದು ಭಕ್ತರ ನಡುವೆ ನಡೆದಿದೆಯೇ ಹೊರತು ದೇವರ ನಡುವೆ ನಡೆಯುವುದಲ್ಲಎಂಬುದನ್ನು ತೋರಿಸುವುದು ಈ ಅವತಾರದ ಉದ್ದೇಶವಾಗಿದೆ. ಇಲ್ಲಿ18 ಮೆಟ್ಟಿಲನ್ನು ಏರಿ ದೇವರ ದರ್ಶನ ಮಾಡಬೇಕು. ಹದಿನೆಂಟು ಎಂಬ ಸಂಖ್ಯೆ ಬಹಳ ಮಹತ್ವದ್ದು. ಭಗವದ್ಗೀತೆಯ ಹದಿನೆಂಟು ಅಧ್ಯಾಯ, ಮಹಾಭಾರತದ ಹದಿನೆಂಟು ಪರ್ವಗಳು ಇವೆಲ್ಲಜಯದ ಸಂಕೇತಗಳು. ಹೀಗಾಗಿ ಹದಿನೆಂಟು ಎನ್ನುವುದು ಜಯ ಎನ್ನುವುದಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬರುವವರು 45ದಿನದ ವ್ರತ ಆಚರಣೆ ಮಾಡಬೇಕು. ಇದು ತಪಸ್ಸಿನ ಇನ್ನೊಂದು ಮುಖ. ದೇವರ ದರ್ಶನ ಕಷ್ಟಪಟ್ಟರೆ ಮಾತ್ರ ದೊರೆಯುತ್ತದೆ. ದೇವರನ್ನು ನಾವು ಕೇವಲ ಶಿಲೆಯಾಗಿ ನೋಡದೆ ದೇವರನ್ನಾಗಿ ನೋಡಬೇಕು. ನಾವು ಯಾವ ಭಾವನೆಯಿಂದ ನೋಡುತ್ತೇವೆಯೋ ಅದೇ ರೀತಿಯಲ್ಲಿದೇವರು ನಮಗೆ ದರ್ಶನ ನೀಡುತ್ತಾನೆ. ಉತ್ತರಾಯಣ ಪುಣ್ಯಕಾಲವು ಪ್ರಾರಂಭವಾಗುತ್ತಿದೆ. ಭೌಗೋಳಿಕ ಕಾರಣದಿಂದ ಉತ್ತರಾಯಣ 22 ದಿನ ಮೊದಲೇ ಪ್ರಾರಂಭವಾಗಿದೆ. ಆದರೆ ಮಕರ ಮಾಸ ಪ್ರಾರಂಭವಾಗುವುದು ಇಂದು ಮಧ್ಯರಾತ್ರಿಯಾದ್ದರಿಂದ ಇದು ಪರ್ವ ಕಾಲ ಎಂದು ಹೇಳಿದರು.

ಸುಂದರ ಪರಿಸರದಲ್ಲಿಶಬರಿಮಲೆಯ ಮಾದರಿಯಲ್ಲಿಯೆ ಅಯ್ಯಪ್ಪ ಸ್ವಾಮಿಯ ಮಂದಿರ ನಿರ್ಮಾಣವಾಗಿದೆ. ಹದಿನೆಂಟು ಮೆಟ್ಟಿಲನ್ನು ನಿರ್ಮಿಸಿದ್ದೀರಿ. ಸಿದ್ದಾಪುರದಂತಹ ಸಿದ್ದಿ ಸ್ಥಳಕ್ಕೆ ಇದು ಮುಕುಟ ಪ್ರಾಯವಾಗಿದೆ. ಇದು ಉತ್ತರೋತ್ತರ ಅಭಿವೃದ್ಧಿ ಸಾಧಿಸಲಿ ಎಂದು ಆಶೀರ್ವದಿಸಿದರು. ಅಯ್ಯಪ್ಪ ಸ್ವಾಮಿ ದೇವಾಲಯದ ಡಾ.ಶ್ರೀಧರ ವೈದ್ಯ ಪ್ರಾಸ್ತಾವಿಕ ಮಾತನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ