ಆ್ಯಪ್ನಗರ

ಶಾಲೆ ಗೋಡೆ ಮೇಲೆ ಚಿತ್ತ ಸೆಳೆಯುವ ಚಿತ್ತಾರ

ಶಿರಸಿ : ಇಲ್ಲಿನ ಶಾಲಾ ಕಂಪೌಂಡ್‌ ಗೋಡೆ ಮೇಲೆ ರಚನೆಯಾದ ಕಲೆ, ಸಂಸ್ಕೃತಿ, ಇತಿಹಾಸ, ದೇಶಪ್ರೇಮ ಬಿಂಬಿಸುವ ಚಿತ್ತಾರಗಳು ಚಿತ್ತ ಸೆಳೆಯುತ್ತವೆ.

Vijaya Karnataka 28 Sep 2019, 5:00 am
ಶಿರಸಿ : ಇಲ್ಲಿನ ಶಾಲಾ ಕಂಪೌಂಡ್‌ ಗೋಡೆ ಮೇಲೆ ರಚನೆಯಾದ ಕಲೆ, ಸಂಸ್ಕೃತಿ, ಇತಿಹಾಸ, ದೇಶಪ್ರೇಮ ಬಿಂಬಿಸುವ ಚಿತ್ತಾರಗಳು ಚಿತ್ತ ಸೆಳೆಯುತ್ತವೆ.
Vijaya Karnataka Web the wall painted on the school wall
ಶಾಲೆ ಗೋಡೆ ಮೇಲೆ ಚಿತ್ತ ಸೆಳೆಯುವ ಚಿತ್ತಾರ


ಜ್ಞಾನ ದೇಗುಲ ಪ್ರವೇಶಿಸುವ ಮಕ್ಕಳಲ್ಲಿಚಿತ್ರಕಲೆಯ ಆಸಕ್ತಿ ಹೆಚ್ಚಿಸುವಂತಿವೆ.

ನಗರದ ಹುಬ್ಬಳ್ಳಿ ಮಾರ್ಗದ 5 ನಂ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮಾರಿಕಾಂಬಾ ದೇವಸ್ಥಾನ ಹಿಂಬಾಗದ ಮಾರಿಗುಡಿ ಪ್ರಾಥಮಿಕ ಶಾಲೆ ಮುಂತಾದೆಡೆ ಇಂತಹ ದೃಶ್ಯಗಳು ಮನ ಸೆಳೆಯುತ್ತವೆ. ತಾಲೂಕಿನ ವದ್ದಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಮುಖ್ಯಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಕಲಾವಿದ ಮನೋಜ ಪಾಲೇಕರ್‌ ತಂಡದವರು ಇಂತಹ ನೂರಾರು ಕಲಾಚಿತ್ರವನ್ನು ರಚಿಸಿದ್ದಾರೆ. ಈ ಮೂಲಕ ಹಸ್ತ ಚಿತ್ರ ಕಲೆಯ ಕೌಶಲ ತೆರೆದಿಟ್ಟಿದ್ದಾರೆ.

ಕಳೆದ ಹಲವು ವರ್ಷಗಳಿಂದ ಶಾಲಾ ಕಂಪೌಂಡ್‌ ಗೋಡೆ, ನಲಿಕಲಿ ಕೊಠಡಿಗಳಲ್ಲಿಚಿತ್ತಾರ ಬಿಡಿಸುತ್ತಾ ಬಂದಿರುವ ಮನೋಜ ಪಾಲೇಕರ್‌ ಅವರು ಕಲೆಯ ಸೊಬಗು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಇಲ್ಲಿಯ 5ನೇ ನಂಬರ್‌ ಶಾಲಾ ಕಂಪೌಂಡ್‌ ಗೋಡೆಗೆ ಸರ್ವಧರ್ಮ ಭಾವೈಕ್ಯತೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ, ವಿಶ್ವಕ್ಕೆ ಶಿಲ್ಪಕಲೆ ಪರಿಚಯಿಸಿದ ಭಾರತದ ವೈಭವವನ್ನು ಚಿತ್ರದ ಮೂಲಕ ಪರಿಚಯಿಸಲಾಗಿದೆ. ಮಕ್ಕಳಿಗೆ ಮೊಬೈಲ್‌ ಕೊಡಿಸುವ ಬದಲು ಕುಂಚ ಕೊಡಿಸಿ ಸಂದೇಶ ಸಾರಲಾಗಿದೆ. ನಮ್ಮಂತೆ ನೀವು ಬಾಳಿ ಎಂದು ಪ್ರಾಣಿಗಳ ರಕ್ಷಣೆ ಜಾಗೃತಿ ಮೂಡಿಸಲಾಗಿದೆ. ಹೀಗೆ ಹತ್ತಾರು ಕಲಾ ಚಿತ್ತಾರಗಳು ಶಾಲೆ ಕಂಪೌಂಡ್‌ ಗೋಡೆಯ ಮೇಲೆ ರಾರಾಜಿಸುತ್ತಿವೆ.

4ಸಾವಿರಕ್ಕೂ ಹೆಚ್ಚು ಚಿತ್ತಾರ.. : ಬೆಂಗಳೂರಿಗೆ ಹೋದ ಸಂದರ್ಭದಲ್ಲಿಈ ಕಲ್ಪನೆ ಹೊಳೆಯಿತು. ಇದರಿಂದ ಪ್ರೇರಣೆಗೊಂಡು ಶಾಲಾ ಗೋಡೆಯ ಮೇಲೆ ಚಿತ್ರ ರಚನೆಗೆ ಮುಂದಾದೆ. ಶಿರಸಿಯ 5 ನಂಬರ್‌ ಪ್ರಾಥಮಿಕ ಶಾಲೆ, ಮಾರಿಗುಡಿ ಪ್ರಾಥಮಿಕ ಶಾಲೆ, ಚಿಪಗಿಯ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಂಪೌಂಡ್‌ ಗೋಡೆಯ ಮೇಲೆ ಚಿತ್ತಾರಗಳನ್ನು ಅರಳಿಸುತ್ತಾ ಬಂದಿದ್ದೇನೆ. ಇನ್ನು ನಲಿಕಲಿ ಕೊಠಡಿಗಳಲ್ಲೂಚಿತ್ರಗಳನ್ನು ಬಿಡಿಸಿದ್ದು ಈವರೆಗೆ 4ಸಾವಿರ ಚಿತ್ತಾರಗಳನ್ನು ಮೂಡಿಸಿದ್ದೇನೆ. ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಹಕಾರದಲ್ಲಿಸಾಧ್ಯವಾಗಿದೆ. ಸುರೇಶ ಭಟ್ಟ ಮತ್ತು ಪ್ರಕಾಶ ಭಟ್ಟ ಸಹ ಕಲಾವಿದರಾಗಿ ಸಹಕರಿಸಿದ್ದಾರೆ ಎನ್ನುತ್ತಾರೆ ಕಲಾವಿದ ಮನೋಜ ಪಾಲೇಕರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ