ಆ್ಯಪ್ನಗರ

ಮೊಂಬತ್ತಿ ಮೆರವಣಿಗೆಯಲ್ಲಿ ಅಪಾರ ಜನಸ್ತೋಮ

ಹಳಿಯಾಳ : ಪುಲ್ವಾಮಾದಲ್ಲಿ ವೀರಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಹಳಿಯಾಳ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದ ಮೇಣದಬತ್ತಿಯ ಮೆರವಣಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಜನರು ಜಾತಿ, ಮತ, ಪಕ್ಷ ಭೇದವಿಲ್ಲದೇ ಭಾಗವಹಿಸಿ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದು ತಾಲೂಕಿನ ಇತಿಹಾಸದಲ್ಲಿ ದಾಖಲಾಯಿತು.

Vijaya Karnataka 20 Feb 2019, 5:00 am
ಹಳಿಯಾಳ : ಪುಲ್ವಾಮಾದಲ್ಲಿ ವೀರಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಹಳಿಯಾಳ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದ ಮೇಣದಬತ್ತಿಯ ಮೆರವಣಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಜನರು ಜಾತಿ, ಮತ, ಪಕ್ಷ ಭೇದವಿಲ್ಲದೇ ಭಾಗವಹಿಸಿ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದು ತಾಲೂಕಿನ ಇತಿಹಾಸದಲ್ಲಿ ದಾಖಲಾಯಿತು.
Vijaya Karnataka Web there is a great crowd in the candle procession
ಮೊಂಬತ್ತಿ ಮೆರವಣಿಗೆಯಲ್ಲಿ ಅಪಾರ ಜನಸ್ತೋಮ


ಕತ್ತಲಾಗುತ್ತಿದ್ದಂತೆಯೇ ಗ್ರಾಮದೇವತಾ ದೇವಸ್ಥಾನ, ವಿವಿಧ ಮಸೀದಿ ಮತ್ತು ಚರ್ಚ್‌ಗಳು ಸೇರಿದಂತೆ ಇನ್ನಿತರ ಶ್ರದ್ಧಾ ಕೇಂದ್ರಗಳಿಂದ ಮೇಣದಬತ್ತಿಯ ಮೌನ ಮೆರವಣಿಗೆಯನ್ನು ನಡೆಸಿ ಪಟ್ಟಣದ ಹೃದಯಭಾಗದಲ್ಲಿರುವ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿ ಅಲ್ಲಿಂದ ರಾಷ್ಟ್ರಾಭಿಮಾನದ ಘೋಷಣೆಗಳನ್ನು ಕೂಗುತ್ತಾ ಮುಖ್ಯ ಬೀದಿ, ಬಜಾರ, ಸುಭಾಷಚಂದ್ರ ಭೋಸ್‌ ಏರಿಯಾ ಮೂಲಕ ಸಾಗಿ ಶಿವಾಜಿ ವೃತ್ತದಲ್ಲಿ ಮೇಣದ ಬತ್ತಿಗಳನ್ನು ಬೆಳಗಿಸಿ, ಹುತಾತ್ಮರಿಗೆ ನಮನ ಸಲ್ಲಿಸಿದರು. ಸುಮಾರು ಒಂದು ತಾಸು ವಾಹನ ಸಂಚಾರವನ್ನು ನಿಲ್ಲಿಸಲಾಗಿತ್ತು.

ಕೇವಲ ಅರ್ಧ ಕಿ.ಮೀ. ದೂರವನ್ನು ಮೆರವಣಿಗೆಯ ಮೂಲಕ ಸಾಗಲು ಜನಜಾತ್ರೆಯ ಪರಿಣಾಮ ಎರಡು ಗಂಟೆಗೂ ಅಧಿಕ ಕಾಲಾವಕಾಶ ಬೇಕಾಯಿತು. ಮಹಿಳೆಯರು, ವೃದ್ಧ್ದರು, ಮಾಜಿ ಮತ್ತು ಹಾಲಿ ಯೋಧರು, ಅವರ ಕುಟುಂಬ ವರ್ಗದವರು, ಹಿಂದೂ ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲ ಧರ್ಮದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಪಾಕಿಸ್ತಾನ ಧ್ವಜಕ್ಕೆ ಬೆಂಕಿ : ವೀರಯೋಧರ ಹತ್ಯೆಗೆ ಕಾರಣವಾದ ಪಾಕಿಸ್ತಾನದ ರಾಷ್ಟ್ರ ಧ್ವಜವನ್ನು ಯುವಕರು ಕಾಲಲ್ಲಿ ತುಳಿದು ತುಳಿದು ನಂತರ ಸುಟ್ಟು ಹಾಕಿದರು. ಅಲ್ಲದೇ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಯುವ ಪಡೆಯನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಮೆರವಣಿಗೆಯು ಶಾಂತಿಯುತವಾಗಿ ಸಂಪನ್ನಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ