ಆ್ಯಪ್ನಗರ

6 ತಿಂಗಳಿಂದ ವೇತನವಿಲ್ಲ: ಧರಣಿ

ಜೊಯಿಡಾ : ತಾಲೂಕಿನ ಬಿಎಸ್‌ಎನ್‌ಎಲ್‌ ಗುತ್ತಿಗೆ ಆಧಾರಿತ ನೌಕರರು ಆರು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜೊಯಿಡಾ ದೂರವಾಣಿ ಕೇಂದ್ರದಲ್ಲಿ ಧರಣಿ ನಡೆಸಿದರು.

Vijaya Karnataka 7 May 2019, 5:00 am
ಜೊಯಿಡಾ : ತಾಲೂಕಿನ ಬಿಎಸ್‌ಎನ್‌ಎಲ್‌ ಗುತ್ತಿಗೆ ಆಧಾರಿತ ನೌಕರರು ಆರು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜೊಯಿಡಾ ದೂರವಾಣಿ ಕೇಂದ್ರದಲ್ಲಿ ಧರಣಿ ನಡೆಸಿದರು.
Vijaya Karnataka Web KWR-6 JYD 01
ಆರು ತಿಂಗಳ ವೇತನ ಪಾವತಿ ಮಾಡುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಎಚ್ಚರಿಸಿ ಜೊಯಿಡಾ ತಾಲೂಕಿನ ಬಿಎಸ್‌ಎನ್‌ಎಲ್‌ ಗುತ್ತಿಗೆ ಆಧಾರಿತ ನೌಕರರು ಎಸ್‌.ಡಿ. ಶ್ರೀನಿವಾಸಲು ಇವರಿಗೆ ಮನವಿ ನೀಡಿದರು.


''ಜೊಯಿಡಾ ತಾಲೂಕಿನ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್‌ ಗುತ್ತಿಗೆ ಕಾರ್ಮಿಕರಾಗಿ 15-20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಆರು ತಿಂಗಳಿಂದ ವೇತನ ನೀಡಿಲ್ಲ. ನಮ್ಮದೂ ಕುಟುಂಬವಿದ್ದು ನಮ್ಮ ದುಡಿಮೆಯಿಂದಲೇ ಕುಟುಂಬದ ನಿರ್ವಹಣೆಯನ್ನು ಮಾಡಬೇಕಾಗಿದೆ. ಹಾಗೋ ಹೀಗೋ ಪರಿಚಯಸ್ಥರಿಂದ ಸಾಲ ಪಡೆದು ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಗೊಂಡಿದೆ. ನಮ್ಮ ಪರಿಸ್ಥಿತಿ ಬಗ್ಗೆ ಸಾಕಷ್ಟು ಬಾರಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆರು ತಿಂಗಳ ವೇತನ ಪಾವತಿ ಮಾಡುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ. ಈ ಸಂದರ್ಭದಲ್ಲಿ ಇಲಾಖೆಗೆ ಹಾಗೂ ದೂರವಾಣಿ ಕೇಂದ್ರದಲ್ಲಿ ಆಗುವ ಹಾನಿಗೆ ನಾವು ಜವಾಬ್ದಾರರಲ್ಲ ಎಂದು ಎಸ್‌.ಡಿ. ಗ್ರೂಪ್‌ ಜೊಯಿಡಾ ಇವರಿಗೆ ಮನವಿ ನೀಡಿದ್ದೇವೆ'' ಎಂದು ತಿಳಿಸಿದ್ದಾರೆ.

ವನಿತಾ ಕಸಲಕರ, ರಾಮನಾಥ ಎಂ. ವೇಳಿಪ, ಜಗದೀಶ ಎ ಗಾವಡಾ, ದೀಪಕ ದೇವಳಿ, ಶಿವರಾಮ ಕುಟ್ಟಿಕರ, ರಂಜಿತ ಎಲ್‌.ದೇಸಾಯಿ, ಮಂಜುನಾಥ ದೇವಳಿ, ಕಾಳು ಸಿ.ಸಿಲ್ವಾರಕರ, ವಿಷ್ಣು ಪೆಡ್ನೆಕರ, ಪ್ರಶಾಂತ ನೇತ್ರೆಕರ, ವಿನೋದ ಬಿ ಗಾಯಕ, ಶ್ರೀನಾಥ ಪಿ ಮಳಿಕ, ದಿನೇಶ ವಿ ನಾಯ್ಕ, ವಿಶ್ವನಾಥ ಗಾಂವ್ಕರ, ದುಲ್ಲಟ ಆರ್‌ ಬಿಡಿಕರ, ಸಿದ್ದಪ್ಪ ಗರಗೂಟಿ, ಜ್ಞಾನೇಶ್ವರ ಗೌಡ, ಪುಂಡಲಿಕ ಕಾಮತ, ರವಿ ಜಿ ಗೋಕುಲಕರ್‌, ಮಹೇಶ ಕುಂಬಗಾಳ್ಕರ, ಭರತ ಹರುಣ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ