ಆ್ಯಪ್ನಗರ

ಎಲ್ಲಿಸ್ವಚ್ಛತೆಯೋ ಅಲ್ಲಿಆರೋಗ್ಯ

ಯಲ್ಲಾಪುರ : ಸ್ವಚ್ಛತೆ ಎಲ್ಲಿಇರುತ್ತದೆಯೋ ಅಲ್ಲಿಆರೋಗ್ಯ ವಿರುತ್ತದೆ. ಈ ಆರೋಗ್ಯ ಸಂಪತ್ತು ನಮಗೆ ಬಹಳ ಮುಖ್ಯ. ಶುಚ್ಚಿತ್ವದಿಂದ ಕೂಡಿದ ಆಹಾರ, ನೀರು, ಪರಿಸರವನ್ನು ಹೊಂದುವುದು ಪ್ರತಿಯೊಂದು ಮಗುವಿನ ಹಕ್ಕು ಇದನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹೇಳಿದರು.

Vijaya Karnataka 27 Sep 2019, 5:00 am
ಯಲ್ಲಾಪುರ : ಸ್ವಚ್ಛತೆ ಎಲ್ಲಿಇರುತ್ತದೆಯೋ ಅಲ್ಲಿಆರೋಗ್ಯ ವಿರುತ್ತದೆ. ಈ ಆರೋಗ್ಯ ಸಂಪತ್ತು ನಮಗೆ ಬಹಳ ಮುಖ್ಯ. ಶುಚ್ಚಿತ್ವದಿಂದ ಕೂಡಿದ ಆಹಾರ, ನೀರು, ಪರಿಸರವನ್ನು ಹೊಂದುವುದು ಪ್ರತಿಯೊಂದು ಮಗುವಿನ ಹಕ್ಕು ಇದನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹೇಳಿದರು.
Vijaya Karnataka Web there is sickness everywhere
ಎಲ್ಲಿಸ್ವಚ್ಛತೆಯೋ ಅಲ್ಲಿಆರೋಗ್ಯ


ತಾಲೂಕು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಹೋಲಿ ರೋಜರಿ ಪ್ರೌಢಶಾಲೆಯ ಆರೋಗ್ಯ ಸಂಘ ಸಂಯುಕ್ತವಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ಜಂತು ಹುಳು ನಿವಾರಣಾ ಕಾರ್ಯಕ್ರಮದಲ್ಲಿಭಾಗವಹಿಸಿ ಅವರು ಮಾತನಾಡಿದರು. ಜಂತು ಹುಳುವಿನಿಂದ ಉಂಟಾಗುವ ಅಪೌಷ್ಟಿಕತೆ, ರಕ್ತ ಹೀನತೆಯಂತಹ ತೊಂದರೆಗಳಿಂದ ತಪ್ಪಿಸುವುದು ಈ ದಿನದ ಮುಖ್ಯ ಉದ್ದೇಶ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ ಮಾತನಾಡಿ, ಪೋಷಣಾ ಅಭಿಯಾನದಡಿ ಪೌಷ್ಟಿಕ ಆಹಾರ, ಹಾಲು ಹಾಗೂ ಮಾತ್ರೆಗಳನ್ನು ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು.

ವೇದಿಕೆಯಲ್ಲಿಆರೋಗ್ಯ ಇಲಾಖೆಯ ಜಿಲ್ಲಾಸಂಯೋಜಕರಾದ ಪವನ ಪಾಯದೆ ಹಾಗೂ ಪ್ರವೀಣ ಉಪಸ್ಥಿತರಿದ್ದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಸ್‌.ಟಿ.ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಫಾ. ರೇಮಂಡ್‌ ಫÜರ್ನಾಂಡಿಸ್‌ ಅಧ್ಯಕ್ಷತೆ ವಹಿಸಿದ್ದರು. ಅಂತೋನ ರೋಡ್ರಿಗಸ್‌ ಸ್ವಾಗತಿಸಿದರು. ಜಗದೀಶ ಭಟ್ಟ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ