ದೇಶದ ಭವಿಷ್ಯ ಕುರಿತು ಚಿಂತನೆ ಮಾಡಿ
ಭಟ್ಕಳ : ಇತಿಹಾಸ ನಮಗೆ ಮನರಂಜನೆಯ ವಿಷಯವಾಗಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ಬಲಿದಾನ ಮಾಡಿದ್ದು, ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.
Vijaya Karnataka 27 Jan 2019, 5:00 am
ಭಟ್ಕಳ : ಇತಿಹಾಸ ನಮಗೆ ಮನರಂಜನೆಯ ವಿಷಯವಾಗಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ಬಲಿದಾನ ಮಾಡಿದ್ದು, ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.
ಅವರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.
ಗಣರಾಜ್ಯೋತ್ಸವ ದಿನವನ್ನು ರಜೆ ದಿನವನ್ನಾಗಿ ಮಾಡಿಕೊಳ್ಳದೇ ದೇಶದ ಭವಿತವ್ಯಕ್ಕಾಗಿ ಚಿಂತನೆ ನಡೆಸಿ ಮುಂದುವರೆಯಬೇಕಾಗಿದೆ ಎಂದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ, ಭಾರತ ಅಖಂಡ ದೇಶವಾಗಿದ್ದು, ದೇಶದ ಸುಭದ್ರತೆಗೆ ಸಂವಿಧಾನ ತಳಪಾಯವಾಗಿದೆ ಎಂದರು.
ತಹಸೀಲ್ದಾರ ವಿ.ಎನ್.ಬಾಡ್ಕರ್ ಸ್ವಾಗತಿಸಿದರು. ಭಟ್ಕಳ ಪುರಸಭಾ ಅಧ್ಯಕ್ಷ ಸಾದೀಕ್ ಮಟ್ಟಾ, ಉಪಾಧ್ಯಕ್ಷ ಕೆ.ಎಂ.ಆಶ್ಫಾಕ್, ಜಾಲಿ ಪ.ಪಂ. ಅಧ್ಯಕ್ಷ ಆದಂ ಪಣಂಬೂರು, ತಾ.ಪಂ. ಇಒ ಪ್ರಭಾಕರ, ಸಿಪಿಐ ಕೆ.ಎಲ್.ಗಣೇಶ ಮೊದಲಾದವರು ಉಪಸ್ಥಿತರಿದ್ದರು.
ಭಟ್ಕಳ ಕ್ಷೇತ್ರ ಶಿಕ್ಷ ಣಾಧಿಕಾರಿ ಎಂ.ಆರ್.ಮುಂಜಿ ವಂದಿಸಿದರು. ಶಿಕ್ಷ ಕ, ಕವಿ ಶ್ರೀಧರ ಶೇಟ್ ನಿರೂಪಿಸಿದರು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾದ ಕ್ರೀಡಾ ಪಟುಗಳು, ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳು ಹಾಗೂ ಶಿಕ್ಷ ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳ ಪರೇಡ್ ಹಾಗೂ ವಿವಿಧ ನೃತ್ಯ ಕಾರ್ಯಕ್ರಮಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು.
ಅವರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.
ಗಣರಾಜ್ಯೋತ್ಸವ ದಿನವನ್ನು ರಜೆ ದಿನವನ್ನಾಗಿ ಮಾಡಿಕೊಳ್ಳದೇ ದೇಶದ ಭವಿತವ್ಯಕ್ಕಾಗಿ ಚಿಂತನೆ ನಡೆಸಿ ಮುಂದುವರೆಯಬೇಕಾಗಿದೆ ಎಂದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ, ಭಾರತ ಅಖಂಡ ದೇಶವಾಗಿದ್ದು, ದೇಶದ ಸುಭದ್ರತೆಗೆ ಸಂವಿಧಾನ ತಳಪಾಯವಾಗಿದೆ ಎಂದರು.
ತಹಸೀಲ್ದಾರ ವಿ.ಎನ್.ಬಾಡ್ಕರ್ ಸ್ವಾಗತಿಸಿದರು. ಭಟ್ಕಳ ಪುರಸಭಾ ಅಧ್ಯಕ್ಷ ಸಾದೀಕ್ ಮಟ್ಟಾ, ಉಪಾಧ್ಯಕ್ಷ ಕೆ.ಎಂ.ಆಶ್ಫಾಕ್, ಜಾಲಿ ಪ.ಪಂ. ಅಧ್ಯಕ್ಷ ಆದಂ ಪಣಂಬೂರು, ತಾ.ಪಂ. ಇಒ ಪ್ರಭಾಕರ, ಸಿಪಿಐ ಕೆ.ಎಲ್.ಗಣೇಶ ಮೊದಲಾದವರು ಉಪಸ್ಥಿತರಿದ್ದರು.
ಭಟ್ಕಳ ಕ್ಷೇತ್ರ ಶಿಕ್ಷ ಣಾಧಿಕಾರಿ ಎಂ.ಆರ್.ಮುಂಜಿ ವಂದಿಸಿದರು. ಶಿಕ್ಷ ಕ, ಕವಿ ಶ್ರೀಧರ ಶೇಟ್ ನಿರೂಪಿಸಿದರು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾದ ಕ್ರೀಡಾ ಪಟುಗಳು, ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳು ಹಾಗೂ ಶಿಕ್ಷ ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳ ಪರೇಡ್ ಹಾಗೂ ವಿವಿಧ ನೃತ್ಯ ಕಾರ್ಯಕ್ರಮಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು.