ಆ್ಯಪ್ನಗರ

ಬುರುಡೆ ಜೋಗಫಾಲ್ಸ್‌ಗೆ ಜಾರಿ ಬಿದ್ದು ಮೂವರ ಸಾವು

ಸಿದ್ದಾಪುರ (ಉತ್ತರ ಕನ್ನಡ) : ತಾಲೂಕಿನ ಕ್ಯಾದಗಿ ಗ್ರಾ.ಪಂ. ವ್ಯಾಪ್ತಿಯ ಬುರುಡೆ ಜೋಗಫಾಲ್ಸ್‌ಗೆ ಪ್ರವಾಸಕ್ಕೆ ಹೋಗಿದ್ದ 6 ಜನರ ಯುವಕರ ತಂಡದಲ್ಲಿ ಮೂವರು ಆಕಸ್ಮಿಕವಾಗಿ ಕಾಲು ಜಾರಿ ಜಲಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

Vijaya Karnataka 10 Mar 2019, 5:00 am
ಸಿದ್ದಾಪುರ (ಉತ್ತರ ಕನ್ನಡ) : ತಾಲೂಕಿನ ಕ್ಯಾದಗಿ ಗ್ರಾ.ಪಂ. ವ್ಯಾಪ್ತಿಯ ಬುರುಡೆ ಜೋಗಫಾಲ್ಸ್‌ಗೆ ಪ್ರವಾಸಕ್ಕೆ ಹೋಗಿದ್ದ 6 ಜನರ ಯುವಕರ ತಂಡದಲ್ಲಿ ಮೂವರು ಆಕಸ್ಮಿಕವಾಗಿ ಕಾಲು ಜಾರಿ ಜಲಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
Vijaya Karnataka Web KWR-9SDPR2C


ಸಿದ್ದಾಪುರದ ಅಭಿಷೇಕ ಶ್ರೀಕಾಂತ ನಾಯ್ಕ (32), ಶಿರಸಿಯ ಮುರುಳಿ ನಾಯ್ಕ(24) ಹಾಗೂ ಕೇರಳ ಮೂಲದ ಸಿದ್ದಾಪುರ ಧನ್ವಂತರಿ ಆಯುರ್ವೇದ ಕಾಲೇಜ್‌ನ ವಿದ್ಯಾರ್ಥಿ ಸಾಯಿಚಂದ್ರ(22) ಎಂಬುವವರೇ ಮೃತರು.

ಸುದ್ದಿ ತಿಳಿದ ತಕ್ಷಣ ಸಿಪಿಐ ಜಾಯ್‌ ಅಂತೋನಿ ನೇತೃತ್ವದ ಸ್ಥಳೀಯ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಯುವಕರ ಶವಗಳನ್ನು ಜಲಪಾತದಿಂದ ಹೊರತೆಗೆದಿದೆ.

ಈ ಫಾಲ್ಸ್‌ನಲ್ಲಿ ಕಳೆದ ವರ್ಷವೂ ಮೂವರು ಡಿಪೊ್ಲೕಮಾ ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಪ್ರತಿ ವರ್ಷ ಮೂರು-ನಾಲ್ಕು ಜನರು ಇಲ್ಲಿ ದುರುಂತಕ್ಕೆ ಈಡಾಗುತ್ತಾರೆ. ಇಳಿಮನೆ ಹೊಳೆಯು ಅಘನಾಶಿನಿ ಹೊಳೆಗೆ ಸೇರುವ ಮೊದಲು ಎತ್ತರದ ಪ್ರದೇಶದಿಂದ ಧುಮುಕುತ್ತಿದ್ದು, ಕೊರಕಲುಗಳಿಂದ ಕೂಡಿರುವ ಈ ಜಲಪಾತ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೆ ಅಪಾಯಕಾರಿಯಾಗಿದೆ.

ಅಪಾಯದ ಅರಿವಿಲ್ಲದ ಪ್ರವಾಸಿಗಳು ಮುಂದಕ್ಕೆ ಹೋಗಿ ಇಂತಹ ಅನಾಹುತಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಪಾಯ ಸಂಭವಿದಾಗ ತಿಳಿಸಲು ಪಕ್ಕದಲ್ಲಿ ಜನವಸತಿ ಸಹ ಇಲ್ಲ. ಅಲ್ಲದೆ ಯಾವುದೇ ದೂರವಾಣಿ ಸೌಲಭ್ಯಗಳು ಇಲ್ಲಿ ಸಿಗುವುದಿಲ್ಲ. ಹೀಗಾಗಿ ರಕ್ಷ ಣಾ ಕಾರ್ಯ ವಿಳಂಬವಾಗುತ್ತದೆ. ಸರಕಾರ ಈ ಪ್ರದೇಶದಲ್ಲಿ ಸುರಕ್ಷ ತೆಗೆ ಆದ್ಯತೆ ನೀಡಬೇಕು. ಅಪಾಯಕಾರಿ ಸ್ಥಳದಲ್ಲಿ ಇಳಿಯದಂತೆ ನಿರ್ಬಂಧ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ