ಮೂರು ತಾಲೂಕು ಸುತ್ತಾಡುವ ಫಜೀತಿ
ಶಿರಸಿ : ಜಿಲ್ಲೆಯಲ್ಲಿಮೂರು ತಾಲೂಕುಗಳ ವ್ಯಾಪ್ತಿಯನ್ನು ಹೊಂದಿದ ಏಕೈಕ ವಿಧಾನಸಭಾ ಕ್ಷೇತ್ರ ಎಂಬುದು ಯಲ್ಲಾಪುರ ಕ್ಷೇತ್ರದ ವಿಶೇಷತೆಯಾಗಿದೆ. ಇದರಿಂದಾಗಿ ಈ ಕ್ಷೇತ್ರದ ವಿಭಿನ್ನ ಪ್ರದೇಶದಲ್ಲಿಮತ ಯಾಚನೆಗೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಸಮಸ್ಯೆ, ಸವಾಲುಗಳನ್ನು ಎದುರಿಸುವಂತಾಗಿದೆ.
Vijaya Karnataka 24 Nov 2019, 5:00 am
ಶಿರಸಿ : ಜಿಲ್ಲೆಯಲ್ಲಿಮೂರು ತಾಲೂಕುಗಳ ವ್ಯಾಪ್ತಿಯನ್ನು ಹೊಂದಿದ ಏಕೈಕ ವಿಧಾನಸಭಾ ಕ್ಷೇತ್ರ ಎಂಬುದು ಯಲ್ಲಾಪುರ ಕ್ಷೇತ್ರದ ವಿಶೇಷತೆಯಾಗಿದೆ. ಇದರಿಂದಾಗಿ ಈ ಕ್ಷೇತ್ರದ ವಿಭಿನ್ನ ಪ್ರದೇಶದಲ್ಲಿಮತ ಯಾಚನೆಗೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಸಮಸ್ಯೆ, ಸವಾಲುಗಳನ್ನು ಎದುರಿಸುವಂತಾಗಿದೆ.
ಪ್ರತಿ ಬಾರಿ ಚುನಾವಣೆ ಬಂತೆಂದರೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿಮೂರು ತಾಲೂಕುಗಳ ವ್ಯಾಪ್ತಿಯ ಗ್ರಾಮೀಣ ಹಳ್ಳಿಗಾಡಿನಲ್ಲಿಪ್ರಚಾರ ಕಾರ್ಯಕ್ಕೆ ಸುತ್ತಾಡಬೇಕು. ಬನವಾಸಿಯಿಂದ ಯಲ್ಲಾಪುರ ತಾಲೂಕಿನ ಗಡಿಯಂಚಿನ ಕಿರವತ್ತಿ, ಗುಳ್ಳಾಪುರದವರೆಗೆ ಮತ್ತು ಮುಂಡಗೋಡ ತಾಲೂಕಿನ ಬಾಚಣಕಿಯವರೆಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ನೂರು ಕಿ.ಮೀ.ನಷ್ಟು ದೂರ ಸಂಚರಿಸಬೇಕು ಎನ್ನುವಂತಾಗುತ್ತದೆ.
ವಿಭಿನ್ನ ಪರಿಸರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೂರು ತಾಲೂಕುಗಳು ವಿಭಿನ್ನ ಪರಿಸರ ಪ್ರದೇಶವನ್ನು ಹೊಂದಿವೆ ಎನ್ನುವುದು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರಿಗೆ ಮತ್ತೊಂದು ತೊಡಕಾಗುತ್ತದೆ.
ಅದರಲ್ಲೂವಿಭಿನ್ನ ಸ್ವಭಾವದ ಹಾಗೂ ದುಡಿಮೆಯ ಜನಜೀವನ ಈ ಮೂರು ತಾಲೂಕುಗಳಲ್ಲಿಕಂಡು ಬರುತ್ತದೆ. ಯಲ್ಲಾಪುರ ಕ್ಷೇತ್ರದಲ್ಲಿಅಡಕೆ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಅಪ್ಪಟ ಮಲೆನಾಡು ಪ್ರದೇಶವಾಗಿದೆ. ತಾಲೂಕಿನ ಕಿರವತ್ತಿ ಭಾಗದ ಕೆಲವು ಹಳ್ಳಿಗಳನ್ನು ಬಿಟ್ಟರೆ ಉಳಿದ ಶೇ.90ರಷ್ಟು ಹಳ್ಳಿಗಳು ಅಲ್ಲಲ್ಲಿಚದುರಿದಂತೆ ಇದ್ದು ನಿರ್ದಿಷ್ಟ ಸಮುದಾಯಗಳವರನ್ನು ಹೊಂದಿವೆ.
ಇನ್ನೊಂದೆಡೆ, ಶಿರಸಿ ತಾಲೂಕಿನ ಬನವಾಸಿ ಪ್ರದೇಶ ಹಾಗೂ ಬಿಸಲಕೊಪ್ಪ, ಉಂಚಳ್ಳಿ ಪ್ರದೇಶ ವ್ಯಾಪ್ತಿಯ ಹಳ್ಳಿಗಳು ಅರೆ ಮಲೆನಾಡು ಪ್ರದೇಶವಾಗಿದ್ದು, ಇಲ್ಲಿನ ಜನಜೀವನವೂ ವಿಭಿನ್ನವಾಗಿದೆ.
ಬಯಲುಸೀಮೆ ಪ್ರದೇಶ : ಮತ್ತೊಂದೆಡೆ, ಮುಂಡಗೋಡ ತಾಲೂಕಿನ ಸಂಪೂರ್ಣ ಪ್ರದೇಶವು ಯಲ್ಲಾಪುರ ಮತ್ತು ಬನವಾಸಿ ಹೋಬಳಿಗೆ ಹೋಲಿಸಿದರೆ ತದ್ವಿರುದ್ಧ ಸನ್ನಿವೇಶ ಹೊಂದಿದೆ. ಇಲ್ಲಿಅಡಕೆ ಬೆಳೆಗಾರರು ಇಲ್ಲವೇ ಇಲ್ಲಎನ್ನಬಹುದು. ಮುಂಡಗೋಡ ತಾಲೂಕಿನಲ್ಲಿಮಳೆಯನ್ನೇ ನಂಬಿದ ಭತ್ತ, ಶುಂಠಿ, ಜೋಳ ಬೆಳೆಯುವ ರೈತರಿದ್ದಾರೆ. ಈ ಪ್ರದೇಶ ಬಯಲು ಸೀಮೆಯ ವಾತಾವರಣವನ್ನು ಹೊಂದಿದೆ.
ಹೀಗೆ ಈ ಮೂರು ವಿಭಿನ್ನ ಪರಿಸರ, ಜನಜೀವನ ಪ್ರದೇಶದಲ್ಲಿರಾಜಕೀಯ ಪಕ್ಷಗಳು ಈಗ ಮತ ಬೇಟೆಗಾಗಿ ಜನರ ಮನವೊಲಿಸುವ ಪ್ರಯತ್ನ ಮಾಡುತ್ತಾ ಸುತ್ತಾಡುತ್ತಿದ್ದಾರೆ.
ತಲುಪುವುದಕ್ಕೆ ಸಾಧ್ಯವೇ ? : ಈ ಮಧ್ಯೆ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯ ಮೂರು ತಾಲೂಕುಗಳ ಎಲ್ಲಹಳ್ಳಿಗಳನ್ನು ಒಮ್ಮೆ ಈಗ ಸಂಪರ್ಕಿಸುವುದಕ್ಕೆ ಸಾಧ್ಯವೇ ಎನ್ನುವುದು ಅನುಮಾನದ ಸಂಗತಿಯಾಗಿದೆ. ಈ ಕಾರಣದಿಂದ ಅಭ್ಯರ್ಥಿಗಳು ತಮಗೆ ಭೇಟಿ ಸಾಧ್ಯವಾಗದೇ ಇರುವ ಕಡೆಗಳಲ್ಲಿತಮ್ಮ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರನ್ನು ನಂಬಿಕೊಳ್ಳುವಂತಾಗಿದೆ.
ಪ್ರತಿ ಬಾರಿ ಚುನಾವಣೆ ಬಂತೆಂದರೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿಮೂರು ತಾಲೂಕುಗಳ ವ್ಯಾಪ್ತಿಯ ಗ್ರಾಮೀಣ ಹಳ್ಳಿಗಾಡಿನಲ್ಲಿಪ್ರಚಾರ ಕಾರ್ಯಕ್ಕೆ ಸುತ್ತಾಡಬೇಕು. ಬನವಾಸಿಯಿಂದ ಯಲ್ಲಾಪುರ ತಾಲೂಕಿನ ಗಡಿಯಂಚಿನ ಕಿರವತ್ತಿ, ಗುಳ್ಳಾಪುರದವರೆಗೆ ಮತ್ತು ಮುಂಡಗೋಡ ತಾಲೂಕಿನ ಬಾಚಣಕಿಯವರೆಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ನೂರು ಕಿ.ಮೀ.ನಷ್ಟು ದೂರ ಸಂಚರಿಸಬೇಕು ಎನ್ನುವಂತಾಗುತ್ತದೆ.
ವಿಭಿನ್ನ ಪರಿಸರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೂರು ತಾಲೂಕುಗಳು ವಿಭಿನ್ನ ಪರಿಸರ ಪ್ರದೇಶವನ್ನು ಹೊಂದಿವೆ ಎನ್ನುವುದು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರಿಗೆ ಮತ್ತೊಂದು ತೊಡಕಾಗುತ್ತದೆ.
ಅದರಲ್ಲೂವಿಭಿನ್ನ ಸ್ವಭಾವದ ಹಾಗೂ ದುಡಿಮೆಯ ಜನಜೀವನ ಈ ಮೂರು ತಾಲೂಕುಗಳಲ್ಲಿಕಂಡು ಬರುತ್ತದೆ. ಯಲ್ಲಾಪುರ ಕ್ಷೇತ್ರದಲ್ಲಿಅಡಕೆ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಅಪ್ಪಟ ಮಲೆನಾಡು ಪ್ರದೇಶವಾಗಿದೆ. ತಾಲೂಕಿನ ಕಿರವತ್ತಿ ಭಾಗದ ಕೆಲವು ಹಳ್ಳಿಗಳನ್ನು ಬಿಟ್ಟರೆ ಉಳಿದ ಶೇ.90ರಷ್ಟು ಹಳ್ಳಿಗಳು ಅಲ್ಲಲ್ಲಿಚದುರಿದಂತೆ ಇದ್ದು ನಿರ್ದಿಷ್ಟ ಸಮುದಾಯಗಳವರನ್ನು ಹೊಂದಿವೆ.
ಇನ್ನೊಂದೆಡೆ, ಶಿರಸಿ ತಾಲೂಕಿನ ಬನವಾಸಿ ಪ್ರದೇಶ ಹಾಗೂ ಬಿಸಲಕೊಪ್ಪ, ಉಂಚಳ್ಳಿ ಪ್ರದೇಶ ವ್ಯಾಪ್ತಿಯ ಹಳ್ಳಿಗಳು ಅರೆ ಮಲೆನಾಡು ಪ್ರದೇಶವಾಗಿದ್ದು, ಇಲ್ಲಿನ ಜನಜೀವನವೂ ವಿಭಿನ್ನವಾಗಿದೆ.
ಬಯಲುಸೀಮೆ ಪ್ರದೇಶ : ಮತ್ತೊಂದೆಡೆ, ಮುಂಡಗೋಡ ತಾಲೂಕಿನ ಸಂಪೂರ್ಣ ಪ್ರದೇಶವು ಯಲ್ಲಾಪುರ ಮತ್ತು ಬನವಾಸಿ ಹೋಬಳಿಗೆ ಹೋಲಿಸಿದರೆ ತದ್ವಿರುದ್ಧ ಸನ್ನಿವೇಶ ಹೊಂದಿದೆ. ಇಲ್ಲಿಅಡಕೆ ಬೆಳೆಗಾರರು ಇಲ್ಲವೇ ಇಲ್ಲಎನ್ನಬಹುದು. ಮುಂಡಗೋಡ ತಾಲೂಕಿನಲ್ಲಿಮಳೆಯನ್ನೇ ನಂಬಿದ ಭತ್ತ, ಶುಂಠಿ, ಜೋಳ ಬೆಳೆಯುವ ರೈತರಿದ್ದಾರೆ. ಈ ಪ್ರದೇಶ ಬಯಲು ಸೀಮೆಯ ವಾತಾವರಣವನ್ನು ಹೊಂದಿದೆ.
ಹೀಗೆ ಈ ಮೂರು ವಿಭಿನ್ನ ಪರಿಸರ, ಜನಜೀವನ ಪ್ರದೇಶದಲ್ಲಿರಾಜಕೀಯ ಪಕ್ಷಗಳು ಈಗ ಮತ ಬೇಟೆಗಾಗಿ ಜನರ ಮನವೊಲಿಸುವ ಪ್ರಯತ್ನ ಮಾಡುತ್ತಾ ಸುತ್ತಾಡುತ್ತಿದ್ದಾರೆ.
ತಲುಪುವುದಕ್ಕೆ ಸಾಧ್ಯವೇ ? : ಈ ಮಧ್ಯೆ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯ ಮೂರು ತಾಲೂಕುಗಳ ಎಲ್ಲಹಳ್ಳಿಗಳನ್ನು ಒಮ್ಮೆ ಈಗ ಸಂಪರ್ಕಿಸುವುದಕ್ಕೆ ಸಾಧ್ಯವೇ ಎನ್ನುವುದು ಅನುಮಾನದ ಸಂಗತಿಯಾಗಿದೆ. ಈ ಕಾರಣದಿಂದ ಅಭ್ಯರ್ಥಿಗಳು ತಮಗೆ ಭೇಟಿ ಸಾಧ್ಯವಾಗದೇ ಇರುವ ಕಡೆಗಳಲ್ಲಿತಮ್ಮ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರನ್ನು ನಂಬಿಕೊಳ್ಳುವಂತಾಗಿದೆ.