ಆ್ಯಪ್ನಗರ

ಇಂದು ಅಟಲ್‌ ಚಿತಾಭಸ್ಮ ವಿಸರ್ಜನೆ

ಹೊನ್ನಾವರ :ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಆ.25 ರಂದು ಮಧ್ಯಾಹ್ನ 12 ಕ್ಕೆ ಹೊನ್ನಾವರ ಬಂದರಿನ ಬಳಿ ಶರಾವತಿ ನದಿಯಲ್ಲಿ ವಿಧಿವಿಧಾನಗಳೊಂದಿಗೆ ವಿಸರ್ಜನೆ ಮಾಡಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಾಯ ನಾಯ್ಕ, ಕಾರ್ಯದರ್ಶಿ ರಾಜು ಭಂಡಾರಿ ತಿಳಿಸಿದ್ದಾರೆ.

Vijaya Karnataka 25 Aug 2018, 5:00 am
ಹೊನ್ನಾವರ :ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಆ.25 ರಂದು ಮಧ್ಯಾಹ್ನ 12 ಕ್ಕೆ ಹೊನ್ನಾವರ ಬಂದರಿನ ಬಳಿ ಶರಾವತಿ ನದಿಯಲ್ಲಿ ವಿಧಿವಿಧಾನಗಳೊಂದಿಗೆ ವಿಸರ್ಜನೆ ಮಾಡಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಾಯ ನಾಯ್ಕ, ಕಾರ್ಯದರ್ಶಿ ರಾಜು ಭಂಡಾರಿ ತಿಳಿಸಿದ್ದಾರೆ.
Vijaya Karnataka Web today atal urn discharge
ಇಂದು ಅಟಲ್‌ ಚಿತಾಭಸ್ಮ ವಿಸರ್ಜನೆ


ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಅವರ ನೇತೃತ್ವದಲ್ಲಿ ಕುಮಟಾದಿಂದ ಮೆರವಣಿಗೆಯಲ್ಲಿ ಚಿತಾಭಸ್ಮ ಬೆಳಿಗ್ಗೆ ಹೊನ್ನಾವರಕ್ಕೆ ಆಗಮಿಸಲಿದೆ. ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ ಸುನೀಲ ನಾಯ್ಕ ಹಾಗೂ ಮುಖಂಡರು, ಕಾರ್ಯಕರ್ತರು ಪಾಲ್ಗೋಳ್ಳುವರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.

ನಂತರ ಬಂದರಿನ ಬಳಿ ಶರಾವತಿ ನದಿಯಲ್ಲಿ ಶಾಸ್ತ್ರೋಕ್ತವಾಗಿ ಚಿತಾಭಸ್ಮದ ವಿಸರ್ಜನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಚಿತಾಭಸ್ಮವನ್ನು ಉತ್ತರ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ರಾಜು ಭಂಡಾರಿ ಗುರುವಾರ ಬೆಂಗಳೂರಿನ ಪಕ್ಷ ದ ಕಚೇರಿಯಲ್ಲಿ ಸ್ವೀಕರಿಸಿ ಶಿರಸಿಯ ಮೂಲಕ ತಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ