ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಕುರಿತು ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿಪಾಲ್ಗೊಂಡ ಮೈಸೂರಿನ ಹಿರಣಯ್ಯ ಅವರು ಬ್ಯಾಂಕಿಂಗ್ ಕ್ಷೇತ್ರದ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿಎಲ್ಲಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಮಾರ್ಗದರ್ಶನದ ಕೊನೆಯಲ್ಲಿಲಿಖಿತ ಪರೀಕ್ಷೆ ನಡೆಸಲಾಯಿತು.
ಕಾಲೇಜಿನ ಪ್ರಾ. ಡಾ. ದಾಕ್ಷಾಯಣಿ ಜಿ. ಹೆಗಡೆ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿಸಂದರ್ಶನವನ್ನು ಎದುರಿಸಲು ವಿದ್ಯಾರ್ಥಿಗಳು ಸದಾ ಸಿದ್ಧರಾಗಿರಬೇಕು. ಲಿಖಿತ ಪರೀಕ್ಷೆಯನ್ನು ಹಾಗೂ ವಿವಿಧ ಹಂತದ ಸಂದರ್ಶನಗಳನ್ನು ಎದುರಿಸಲು ಈ ರೀತಿಯ ತರಬೇತಿ ಸಹಕಾರಿಯಾಗಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಜ್ಯೋತಿ ಕೆ. ಪ್ರಾರ್ಥಿಸಿದರು, ಕಾಲೇಜಿನ ಐ.ಕ್ಯು.ಎ.ಸಿ ಸಂಚಾಲಕ ಡಿ.ಎಸ್. ಭಟ್ ಸ್ವಾಗತಿಸಿದರು, ಪ್ಲೇಸ್ಮೆಂಟ್ ಸಂಚಾಲಕಿ ಸುರೇಖಾ ಎಸ್. ತಡವಲ ವಂದಿಸಿದರು. ರೋವರ್ ಸ್ಕೌಟ್ ಲೀಡರ್ ದತ್ತಾತ್ರೇಯ ಜಿ. ತಾಪಸ್ ಉಪಸ್ಥಿತರಿದ್ದರು. ಅರ್ಚನಾ ಹೆಗಡೆ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿಪಾಲ್ಗೊಂಡ ಮೈಸೂರಿನ ಹಿರಣಯ್ಯ ಅವರು ಬ್ಯಾಂಕಿಂಗ್ ಕ್ಷೇತ್ರದ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿಎಲ್ಲಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಮಾರ್ಗದರ್ಶನದ ಕೊನೆಯಲ್ಲಿಲಿಖಿತ ಪರೀಕ್ಷೆ ನಡೆಸಲಾಯಿತು.
ಕಾಲೇಜಿನ ಪ್ರಾ. ಡಾ. ದಾಕ್ಷಾಯಣಿ ಜಿ. ಹೆಗಡೆ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿಸಂದರ್ಶನವನ್ನು ಎದುರಿಸಲು ವಿದ್ಯಾರ್ಥಿಗಳು ಸದಾ ಸಿದ್ಧರಾಗಿರಬೇಕು. ಲಿಖಿತ ಪರೀಕ್ಷೆಯನ್ನು ಹಾಗೂ ವಿವಿಧ ಹಂತದ ಸಂದರ್ಶನಗಳನ್ನು ಎದುರಿಸಲು ಈ ರೀತಿಯ ತರಬೇತಿ ಸಹಕಾರಿಯಾಗಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಜ್ಯೋತಿ ಕೆ. ಪ್ರಾರ್ಥಿಸಿದರು, ಕಾಲೇಜಿನ ಐ.ಕ್ಯು.ಎ.ಸಿ ಸಂಚಾಲಕ ಡಿ.ಎಸ್. ಭಟ್ ಸ್ವಾಗತಿಸಿದರು, ಪ್ಲೇಸ್ಮೆಂಟ್ ಸಂಚಾಲಕಿ ಸುರೇಖಾ ಎಸ್. ತಡವಲ ವಂದಿಸಿದರು. ರೋವರ್ ಸ್ಕೌಟ್ ಲೀಡರ್ ದತ್ತಾತ್ರೇಯ ಜಿ. ತಾಪಸ್ ಉಪಸ್ಥಿತರಿದ್ದರು. ಅರ್ಚನಾ ಹೆಗಡೆ ನಿರೂಪಿಸಿದರು.