ಆ್ಯಪ್ನಗರ

ದೇಶದಲ್ಲಿ ಪರಿವರ್ತನೆ ಗಾಳಿ

ಭಟ್ಕಳ :2014ಕ್ಕೂ ಪೂರ್ವದಲ್ಲಿ ದೇಶದಲ್ಲಿ ಇದ್ದ ಸ್ಥಿತಿ ಈಗ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಸರಕಾರದ ಹಗರಣ ಮುಕ್ತ ಆಡಳಿತದಿಂದ ದೇಶದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ ಎಂದು ಗುಜರಾತ್‌ ಬಿಜೆಪಿ ಸಂಸದ ದೇವಸಿಂಹ ಚೌಹಾಣ್‌ ಹೇಳಿದರು.

Vijaya Karnataka 29 Apr 2018, 5:00 am
ಭಟ್ಕಳ :2014ಕ್ಕೂ ಪೂರ್ವದಲ್ಲಿ ದೇಶದಲ್ಲಿ ಇದ್ದ ಸ್ಥಿತಿ ಈಗ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಸರಕಾರದ ಹಗರಣ ಮುಕ್ತ ಆಡಳಿತದಿಂದ ದೇಶದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ ಎಂದು ಗುಜರಾತ್‌ ಬಿಜೆಪಿ ಸಂಸದ ದೇವಸಿಂಹ ಚೌಹಾಣ್‌ ಹೇಳಿದರು.
Vijaya Karnataka Web transition air in the country karnataka election commission 2018
ದೇಶದಲ್ಲಿ ಪರಿವರ್ತನೆ ಗಾಳಿ


ಅವರು ಶುಕ್ರವಾರ ಸಂಜೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗುಜರಾತ್‌ನಲ್ಲಿ 3 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ಅಭಿವೃದ್ಧಿಯ ಹರಿಕಾರರಾಗಿರುವ ಮೋದಿಯವರ ಆಡಳಿತದಲ್ಲಿ ನೈಜ ಬಡವರನ್ನು ಗುರುತಿಸುವ ಕೆಲಸ ಆಗುತ್ತಿದೆ. ಜನಧನ, ಜೀವನ ಜ್ಯೋತಿ, ಆರೋಗ್ಯ ಸುರಕ್ಷಾ, ನೋಟು ಅಮಾನ್ಯೀಕರಣ, ಜಿಎಸ್‌ಟಿ, ಉಚಿತ ಅನಿಲ ವಿತರಣೆಯಂತಹ ಕಾರ್ಯಕ್ರಮಗಳ ಪ್ರಯೋಜನಗಳು ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಜನರನ್ನು ತಲುಪುತ್ತಿವೆ. ದೇಶದಲ್ಲಿ ಮೋದಿ ಪರ ಅಲೆ ಕಾಣಿಸಿಕೊಂಡಿದೆ ಎಂದ ಅವರು ವಿರೋಧಿ ಕಾಂಗ್ರೆಸ್‌ ಪಕ್ಷ ಕೆಳಕ್ಕೆ ಕುಸಿಯುತ್ತಿದ್ದು, ರಾಹುಲ್‌ ಮಾತ್ರ ವೈಯಕ್ತಿಕವಾಗಿ ಮೇಲಕ್ಕೇರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಗುಜರಾತ್‌ನಲ್ಲಿ ಮಂದಿರ ಸುತ್ತುತ್ತಿದ್ದ ರಾಹುಲ್‌ ಗಾಂಧಿ ಮುರುಡೇಶ್ವರದಲ್ಲಿಯೇ ಉಳಿದುಕೊಂಡಿದ್ದರೂ ವಿಶ್ವ ವಿಖ್ಯಾತ ಮುರುಡೇಶ್ವರ ದೇವಸ್ಥಾನಕ್ಕೆ ಹೋಗದಿರಲು ಕಾರಣವೇನು ಎಂದು ಪ್ರಶ್ನಿಸಿದ ಚೌಹಾಣ, ಭಟ್ಕಳದಲ್ಲಿ ಬಿಜೆಪಿ ಗೆಲುವು ಸಿದ್ಧವಾಗಿದೆ ಎಂದು ವಿವರಿಸಿದರು. ಭಟ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್‌ ನಾಯ್ಕ, ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ರಾಜೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ