ಆ್ಯಪ್ನಗರ

ಹಳಿಯಾಳ ಪಟ್ಟಣದ ಹಂದಿಗಳ ಸಾಗಣೆ

ಹಳಿಯಾಳ : ಪಟ್ಟಣದಲ್ಲಿ ಹಂದಿಗಳ ಕಾಟವು ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇವುಗಳಿಂದ ಮಳೆಗಾಲದಲ್ಲಿ ರೋಗಗಳು ಹರಡುವ ಸಂಭವವಿದ್ದು ಇವುಗಳನ್ನು ತಕ್ಷ ಣ ಹಿಡಿದು ಬೇರೆಡೆ ಸಾಗಿಸುವಂತೆ ಸಾರ್ವಜನಿಕರು ದೂರುಸಲ್ಲಿಸಿದ ಹಿನ್ನಲೆಯಲ್ಲಿ ಪುರಸಭೆಯವರು ಹಂದಿಗಳನ್ನು ಹಿಡಿದು ಸಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Vijaya Karnataka 15 Jul 2019, 5:00 am
ಹಳಿಯಾಳ : ಪಟ್ಟಣದಲ್ಲಿ ಹಂದಿಗಳ ಕಾಟವು ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇವುಗಳಿಂದ ಮಳೆಗಾಲದಲ್ಲಿ ರೋಗಗಳು ಹರಡುವ ಸಂಭವವಿದ್ದು ಇವುಗಳನ್ನು ತಕ್ಷ ಣ ಹಿಡಿದು ಬೇರೆಡೆ ಸಾಗಿಸುವಂತೆ ಸಾರ್ವಜನಿಕರು ದೂರುಸಲ್ಲಿಸಿದ ಹಿನ್ನಲೆಯಲ್ಲಿ ಪುರಸಭೆಯವರು ಹಂದಿಗಳನ್ನು ಹಿಡಿದು ಸಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
Vijaya Karnataka Web transportation of pigs in the town
ಹಳಿಯಾಳ ಪಟ್ಟಣದ ಹಂದಿಗಳ ಸಾಗಣೆ


ಹಂದಿಗಳ ಕಾಟ ತಡೆಗೆ ಆಗ್ರಹಿಸಿ ಇತ್ತೀಚೆಗೆ ಸಚಿವರ ಗಮನ ಸೆಳೆದು ಲಿಖಿತವಾಗಿ ಪಟ್ಟಣದ ಕೆಲ ನಾಗರಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ದೂರು ನೀಡಿದ್ದವು. ಪುರಸಭೆಯವರು ಹಂದಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಪರಿಣಾಮ ಹಂದಿಗಳನ್ನು ಸಾಕಿದ ಕೆಲ ಮಾಲೀಕರು ಇದಕ್ಕೆ ಸ್ಪಂಧಿಸಿ ಈಗಾಗಲೇ 200ಕ್ಕೂ ಅಧಿಕ ಹಂದಿಗಳನ್ನು ಸಾಗಿಸಿದ್ದಾರೆ ಎಂದು ಪುರಸಭೆ ಸಿಬ್ಬಂದಿ ಸಂಜಯ ಮುಳೆ ತಿಳಿಸಿದ್ದಾರೆ.

ಲಾರಿಗಟ್ಟಲೇ ಹಂದಿಗಳನ್ನು ಹಿಡಿದು ಸಾಗಿಸಿದರೂ ಸಹ ಇನ್ನೂ ಸುಮಾರು ಒಂದು ನೂರಕ್ಕೂ ಅಧಿಕ ಹಂದಿಗಳು ಪಟ್ಟಣದಲ್ಲಿ ಓಡಾಡುತ್ತಿವೆ. ಉಳಿದಿರುವ ಹಂದಿಗಳನ್ನು ಹಿಡಿದು ಆದಷ್ಟು ಬೇಗ ಬೇರೆಡೆ ಸಾಗಿಸುವುದಾಗಿ ಮುಖ್ಯಾಧಿಕಾರಿ ಕೇಶವ ಚೌಗುಲೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ