ಶಿರಸಿ : ಶಿರಸಿ-ಯಲ್ಲಾಪುರ ರಸ್ತೆಯ ಪಕ್ಕದಲ್ಲೇ ಇರುವ ದಾಸನಗದ್ದೆಯಲ್ಲಿಅಡಕೆ ಮರದ ಚಂಡೆ ಕೊಳೆ ರೋಗ ತೀವ್ರ ಬಾಧಿಸಿದೆ. ಎಂಟು ಎಕರೆ ಅಡಕೆ ತೋಟದಲ್ಲಿನೂರಾರು ಅಡಕೆ ಮರಗಳ ಚಂಡೆ ಹಳದಿಯಾಗಿ ಕೊಳೆಯುತ್ತಿದೆ.
ತಾಲೂಕಿನ ತಾರಗೋಡ ಸಮೀಪದ ದಾಸನಗದ್ದೆ ಏಳು ಜನ ರೈತರ ಅಡಕೆ ತೋಟದಲ್ಲಿಇಂಥ ಪರಿಸ್ಥಿತಿಯಿದ್ದು, ಇನ್ನೂ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿವೆ. ಚಂಡೆ ಕೊಳೆರೋಗ ಬಾಧಿತ ತೋಟಕ್ಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ ಹೆಗಡೆ ಮತ್ತು ಹಾರ್ಟಿ ಕ್ಲಿನಿಕ್ನ ವಿಷಯ ತಜ್ಞ ವಿ.ಎಂ.ಹೆಗಡೆ ಭೇಟಿ ನೀಡಿ ಪರಿಶೀಲಿಸಿದರು.
ಈ ವರ್ಷದ ಅತಿವೃಷ್ಟಿಯ ತೀವ್ರ ಪರಿಣಾಮಗಳು ವಿವಿಧ ಬೆಳೆಗಳಲ್ಲಿಗೋಚರವಾಗುತ್ತಿವೆ. ಅಡಕೆಯ ಬೆಳೆಯಲ್ಲಿಕೊಳೆ ರೋಗದ ಮುಂದಿನ ಭಾಗವಾದ ಚಂಡೆ ಕೊಳೆ ರೋಗವು ಭೂಮಿಯಲ್ಲಿಮತ್ತು ವಾತಾವರಣದಲ್ಲಿಹೆಚ್ಚಾದ ತೇವಾಂಶದಿಂದ ತೀವ್ರವಾಗುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಸತೀಶ ಹೆಗಡೆ ತಿಳಿಸಿದರು.
ಕಾಯಿ ಕೊಳೆ ರೋಗವು ಅಡಕೆ ಗೊನೆ ಭಾಗಗಳಿಗೆ ಮಾತ್ರ ಸೀಮಿತವಾಗಿರದೇ ಮರದ ಸುಳಿ ಮತ್ತು ಇತರೆ ಮೃದು ಭಾಗಗಳಿಗೂ ತಗುಲಬಹುದು. ನಂತರ ಚಂಡೆಯೇ ಕೊಳೆತು ಹೋಗಿ ಮುರಿದು ಬಿದ್ದು ಮರ ಸಾಯುತ್ತದೆ. ಇಲ್ಲಿರೋಗಾಣು ಅಡಕೆ ಗೊನೆಯ ಬುಡಭಾಗದ ಮೂಲಕ ಅಥವಾ ಎಲೆಯ ಬುಡ ಭಾಗದಲ್ಲಿರುವ ಹಾಳೆಯ ಮೂಲಕ ಕಾಂಡದೊಳಗೆ ಪ್ರವೇಶ ಪಡೆಯಬಹುದು. ಈ ರೋಗದಿಂದಾಗಿ ಜನೆವರಿ-ಫೆಬ್ರವರಿವರೆಗೂ ಮರದ ಚಂಡೆ ಹಳದಿಯಾಗಿ ಸಾಯುತ್ತಿರುತ್ತದೆ ಎಂದು ತಜ್ಞ ವಿ.ಎಂ.ಹೆಗಡೆ ಮಾಹಿತಿ ನೀಡಿದರು.
ಈ ರೋಗದ ನಿಯಂತ್ರಣಕ್ಕೆ ರೋಗ ಬಂದ ನಂತರ ಹತೋಟಿ ಮಾಡುವುದಕ್ಕಿಂತ ಬರದಂತೆ ಮುಂಜಾಗ್ರತೆಯಾಗಿ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಕೊಳೆ ರೋಗವಿರುವ ತೋಟಗಳಲ್ಲಿಮಳೆಗಾಲದ ಕೊನೆಯಲ್ಲಿಮಳೆ ಕಡಿಮೆಯಾದಾಗ ಮೆಟಾಲಾಕ್ಸಿಲ್ 35 ಡಬ್ಲೂತ್ರ್ಯಎಸ್ 1 ಗ್ರಾಂ ಅಥವಾ ಮೆಟಾಲಾಕ್ಸಿಲ್ ಎಂ.ಜೆಡ್. 2 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿದ ದ್ರಾವಣ ಗೊನೆ ಮತ್ತು ಚಂಡೆಗೆ ಸಿಂಪಡಿಸುವುದರಿಂದ ಚಂಡೆ ಕೊಳೆ ಬಾರದಂತೆ ತಡೆಯಬಹುದು. ತೋಟಕ್ಕೆ ಸುಣ್ಣ ಹಾಕುವುದು ಮತ್ತು ಬಸಿಗಾಲುವೆಗಳನ್ನು ವ್ಯವಸ್ಥಿತವಾಗಿಡುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕು. ರೋಗದಿಂದ ಸತ್ತಿರುವ ಮರದ ಚಂಡೆಗಳನ್ನು ತೆಗೆದು ತೋಟದಿಂದ ಹೊರಹಾಕಿ ಸುಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿಅಪ್ಪು ಶೆಟ್ಟಿ, ಜನಾರ್ಧನ ಶೆಟ್ಟಿ, ಕೃಷ್ಣ ಶೆಟ್ಟಿ, ಗಣಪತಿ ಶೆಟ್ಟಿ, ಪಾಂಡುರಂಗ ಶೆಟ್ಟಿ, ಸುರೇಶ ಶೆಟ್ಟಿ, ಜಗನ್ನಾಥ ಶೆಟ್ಟಿ ಹಾಜರಿದ್ದರು.
ತಾಲೂಕಿನ ತಾರಗೋಡ ಸಮೀಪದ ದಾಸನಗದ್ದೆ ಏಳು ಜನ ರೈತರ ಅಡಕೆ ತೋಟದಲ್ಲಿಇಂಥ ಪರಿಸ್ಥಿತಿಯಿದ್ದು, ಇನ್ನೂ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿವೆ. ಚಂಡೆ ಕೊಳೆರೋಗ ಬಾಧಿತ ತೋಟಕ್ಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ ಹೆಗಡೆ ಮತ್ತು ಹಾರ್ಟಿ ಕ್ಲಿನಿಕ್ನ ವಿಷಯ ತಜ್ಞ ವಿ.ಎಂ.ಹೆಗಡೆ ಭೇಟಿ ನೀಡಿ ಪರಿಶೀಲಿಸಿದರು.
ಈ ವರ್ಷದ ಅತಿವೃಷ್ಟಿಯ ತೀವ್ರ ಪರಿಣಾಮಗಳು ವಿವಿಧ ಬೆಳೆಗಳಲ್ಲಿಗೋಚರವಾಗುತ್ತಿವೆ. ಅಡಕೆಯ ಬೆಳೆಯಲ್ಲಿಕೊಳೆ ರೋಗದ ಮುಂದಿನ ಭಾಗವಾದ ಚಂಡೆ ಕೊಳೆ ರೋಗವು ಭೂಮಿಯಲ್ಲಿಮತ್ತು ವಾತಾವರಣದಲ್ಲಿಹೆಚ್ಚಾದ ತೇವಾಂಶದಿಂದ ತೀವ್ರವಾಗುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಸತೀಶ ಹೆಗಡೆ ತಿಳಿಸಿದರು.
ಕಾಯಿ ಕೊಳೆ ರೋಗವು ಅಡಕೆ ಗೊನೆ ಭಾಗಗಳಿಗೆ ಮಾತ್ರ ಸೀಮಿತವಾಗಿರದೇ ಮರದ ಸುಳಿ ಮತ್ತು ಇತರೆ ಮೃದು ಭಾಗಗಳಿಗೂ ತಗುಲಬಹುದು. ನಂತರ ಚಂಡೆಯೇ ಕೊಳೆತು ಹೋಗಿ ಮುರಿದು ಬಿದ್ದು ಮರ ಸಾಯುತ್ತದೆ. ಇಲ್ಲಿರೋಗಾಣು ಅಡಕೆ ಗೊನೆಯ ಬುಡಭಾಗದ ಮೂಲಕ ಅಥವಾ ಎಲೆಯ ಬುಡ ಭಾಗದಲ್ಲಿರುವ ಹಾಳೆಯ ಮೂಲಕ ಕಾಂಡದೊಳಗೆ ಪ್ರವೇಶ ಪಡೆಯಬಹುದು. ಈ ರೋಗದಿಂದಾಗಿ ಜನೆವರಿ-ಫೆಬ್ರವರಿವರೆಗೂ ಮರದ ಚಂಡೆ ಹಳದಿಯಾಗಿ ಸಾಯುತ್ತಿರುತ್ತದೆ ಎಂದು ತಜ್ಞ ವಿ.ಎಂ.ಹೆಗಡೆ ಮಾಹಿತಿ ನೀಡಿದರು.
ಈ ರೋಗದ ನಿಯಂತ್ರಣಕ್ಕೆ ರೋಗ ಬಂದ ನಂತರ ಹತೋಟಿ ಮಾಡುವುದಕ್ಕಿಂತ ಬರದಂತೆ ಮುಂಜಾಗ್ರತೆಯಾಗಿ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಕೊಳೆ ರೋಗವಿರುವ ತೋಟಗಳಲ್ಲಿಮಳೆಗಾಲದ ಕೊನೆಯಲ್ಲಿಮಳೆ ಕಡಿಮೆಯಾದಾಗ ಮೆಟಾಲಾಕ್ಸಿಲ್ 35 ಡಬ್ಲೂತ್ರ್ಯಎಸ್ 1 ಗ್ರಾಂ ಅಥವಾ ಮೆಟಾಲಾಕ್ಸಿಲ್ ಎಂ.ಜೆಡ್. 2 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿದ ದ್ರಾವಣ ಗೊನೆ ಮತ್ತು ಚಂಡೆಗೆ ಸಿಂಪಡಿಸುವುದರಿಂದ ಚಂಡೆ ಕೊಳೆ ಬಾರದಂತೆ ತಡೆಯಬಹುದು. ತೋಟಕ್ಕೆ ಸುಣ್ಣ ಹಾಕುವುದು ಮತ್ತು ಬಸಿಗಾಲುವೆಗಳನ್ನು ವ್ಯವಸ್ಥಿತವಾಗಿಡುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕು. ರೋಗದಿಂದ ಸತ್ತಿರುವ ಮರದ ಚಂಡೆಗಳನ್ನು ತೆಗೆದು ತೋಟದಿಂದ ಹೊರಹಾಕಿ ಸುಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿಅಪ್ಪು ಶೆಟ್ಟಿ, ಜನಾರ್ಧನ ಶೆಟ್ಟಿ, ಕೃಷ್ಣ ಶೆಟ್ಟಿ, ಗಣಪತಿ ಶೆಟ್ಟಿ, ಪಾಂಡುರಂಗ ಶೆಟ್ಟಿ, ಸುರೇಶ ಶೆಟ್ಟಿ, ಜಗನ್ನಾಥ ಶೆಟ್ಟಿ ಹಾಜರಿದ್ದರು.